Get Updates
Get notified of breaking news, exclusive insights, and must-see stories!

ಹೃದಯ ಗೆಲ್ಲುತ್ತಿದೆ ಭಾರತದ ರಾಯಭಾರಿ ಪಾಕ್‌ನಲ್ಲಿ ಮಾಡಿದ ಕಾರ್ಯ

ಇಸ್ಲಾಮಾಬಾದ್, ಆಗಸ್ಟ್ 13: ಭಾರತ-ಪಾಕಿಸ್ತಾನದ ನಡುವೆ ಆತಂಕದ ಪರಿಸ್ಥಿತಿ ಇದೆ. ಎರಡೂ ರಾಷ್ಟ್ರಗಳು ಪರಸ್ಪರ ಒಂದನ್ನೊಂದು ಹಣಿಯಲು ಸಜ್ಜಾಗಿವೆ.

ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನ-ಮಾನವನ್ನು ಭಾರತ ಸರ್ಕಾರವು ಹಿಂಪಡೆದ ನಂತರ ಎರಡೂ ದೇಶಗಳ ನಡುವಿನ ವೈಷಮ್ಯ ಹೆಚ್ಚಾಗಿದ್ದು, ಆರ್ಟಿಕಲ್ 370 ರದ್ದಿಗೆ ಪ್ರತಿಭಟನಾರ್ಥಕವಾಗಿ ಪಾಕಿಸ್ತಾನವು ತನ್ನ ದೇಶದಲ್ಲಿದ್ದ ಭಾರತದ ರಾಯಭಾರಿಯವರನ್ನು ಭಾರತಕ್ಕೆ ವಾಪಸ್ ಕಳುಹಿಸಿತು.

ಆದರೆ ಪಾಕಿಸ್ತಾನದಲ್ಲಿದ್ದ ಭಾರತದ ರಾಯಭಾರಿ ಅಜಯ್ ಬಿಸಾರಿಯಾ ಅವರು ಭಾರತಕ್ಕೆ ವಾಪಸ್ ಬರುವ ಮುನ್ನಾ ಮಾಡಿದ ಕಾರ್ಯ ಶ್ಲಾಘನೆಗೆ ಕಾರಣವಾಗಿದೆ.

Indian Ambassador to Pakistan planted 150 sapling in Pakistan

ಅಜಯ್ ಬಿಸಾರಿಯಾ ಅವರು ಭಾರತಕ್ಕೆ ವಾಪಸ್ ಬರುವ ದಿನ ಸಸಿಯೊಂದನ್ನು ಪಾಕಿಸ್ತಾನದಲ್ಲಿ ನೆಟ್ಟು ಬಂದಿದ್ದಾರೆ. ಇದು ಭಾರತದ ರಾಯಭಾರಿ ಕಚೇರಿಯ ಕಡೆಯಿಂದ ಪಾಕಿಸ್ತಾನದಲ್ಲಿ ನೆಡಲಾದ 150ನೇ ಸಸಿ.

ಮಹಾತ್ಮಾ ಗಾಂಧಿ ಅವರ 150 ನೇ ಜಯಂತಿ ಅಂಗವಾಗಿ 150 ಗಿಡಗಳನ್ನು ನೆಡುವ ಕಾರ್ಯವನ್ನು ಪಾಕಿಸ್ತಾನದಲ್ಲಿನ ಭಾರತದ ರಾಯಭಾರಿ ಕಚೇರಿಯು ಅಜಯ್ ಬಿಸಾರಿಯಾ ನೇತೃತ್ವದಲ್ಲಿ ಹಮ್ಮಿಕೊಂಡಿತ್ತು. ಅಂತಯೇ ಅಜಯ್ ಬಿಸಾರಿಯಾ ಅವರು ಆ ಕಾರ್ಯವನ್ನು ಪೊರ್ಣ ಮಾಡಿಯೇ ಭಾರತಕ್ಕೆ ಬಂದಿದ್ದಾರೆ.

Indian Ambassador to Pakistan planted 150 sapling in Pakistan

ಅಜಯ್ ಬಿಸಾರಿಯಾ ಅವರನ್ನು ಖುಷಿಯಿಂದ ಅಲ್ಲಿನ ರಾಯಭಾರಿ ಕಚೇರಿ ಸಿಬ್ಬಂದಿ ಕಳುಹಿಸಿಕೊಟ್ಟಿರುವ ಚಿತ್ರಗಳನ್ನು ಅಜಯ್ ಬಿಸಾರಿಯಾ ಅವರು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್ ಈಗ ಭಾರಿ ವೈರಲ್ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+