ಜೈಲಲ್ಲಿದ್ದಾಗಲೇ ಉಗ್ರ ಲಕ್ವಿ ತಂದೆಯಾಗಿದ್ದು ಹೇಗೆ?
ಇಸ್ಲಾಮಾಬಾದ್, ಡಿ. 19: ಪಾಕಿಸ್ತಾನ ದೇಶವು ಭಾರತ ಸೇರಿದಂತೆ ಜಗತ್ತಿನ ಕಣ್ಣಿಗೆ ಹೇಗೆ ಮಣ್ಣೆರಚಿ ಭಯೋತ್ಪಾದಕರನ್ನು ಸಲಹುತ್ತಿದೆ ಎಂಬುದಕ್ಕೆ ಇಲ್ಲೊಂದು ಸ್ಪಷ್ಟ ಉದಾಹರಣೆ ಇದೆ.
ಭಾರತದವನ್ನು ತಲ್ಲಣಗೊಳಿಸಿದ ಮುಂಬಯಿಯ ಹೋಟೆಲ್ ತಾಜ್ ಹಾಗೂ ಓಬೆರಾಯ್ ಮೇಲೆ ನಡೆದ 26/11 ರ ದಾಳಿಯ ಪ್ರಮುಖ ರೂವಾರಿ ಲಷ್ಕರ್ ಇ ತೋಯಿಬಾ ಮುಖಂಡ ಝಾಕಿ ಉರ್ ರೆಹಮಾನ್ ಲಖ್ವಿ ಜೈಲಿನಲ್ಲಿದ್ದುಕೊಂಡೇ ಮಗುವೊಂದರ ತಂದೆಯಾಗಿದ್ದಾನೆ ಎಂದರೆ ನಂಬುತ್ತೀರಾ? [ಭಾರತದಲ್ಲಿ ರಕ್ತದ ಹೊಳೆ ಹರಿಸುತ್ತೇನೆ ಎಂದಿದ್ದ ಉಗ್ರನಿಗೆ ಜಾಮೀನು]
ಮುಂಬಯಿಯಲ್ಲಿ ನಡೆದ 26/11 ರ ದಾಳಿಗೆ ಸಂಬಂಧಿಸಿದಂತೆ ಲಖ್ವಿ 2009ರಂದು ಬಂಧನಕ್ಕೊಳಗಾಗಿದ್ದ. ಆಗ ಆತನಿಗಿನ್ನೂ ಮಗು ಜನಿಸಿರಲಿಲ್ಲ. ಆದರೆ, 2010ರಲ್ಲಿ ಇನ್ನೂ ಜೈಲಿನಲ್ಲಿದ್ದಾಗಲೇ ತಾನು ತಂದೆಯಾಗಿದ್ದೇನೆಂಬ ಸುದ್ದಿಯನ್ನು ಇತರರೊಂದಿಗೆ ಸಂತಸದಿಂದ ಹಂಚಿಕೊಂಡಿದ್ದ..!

ಪಾಕಿಸ್ತಾನದ ಜಾಣ ಮೌನ : ಇದು ಹೇಗೆ ಸಾಧ್ಯ ಎಂದು ಭಾರತ ಕೇಳಿದ್ದ ಪ್ರಶ್ನೆಗೆ ಪಾಕಿಸ್ತಾನ ಉತ್ತರವನ್ನೇ ನೀಡಿರಲಿಲ್ಲ. ಇಂದಿನವರೆಗೂ ಜಾಣಮೌನಕ್ಕೆ ಮೊರೆ ಹೋಗಿದೆ. ಆದರೆ ಈಗ ಅತ್ಯಂತ ಚಿಕ್ಕ ಕಾರಣಕ್ಕಾಗಿ ಲಖ್ವಿಗೆ ಜಾಮೀನು ನೀಡಲಾಗಿದೆ. [ಮುಗ್ಧ ಮಕ್ಕಳನ್ನು ಹತ್ಯೆಗೈದ ರಕ್ಕಸರು ಇವರೇ]
ಭಾರತ ಮುಂಬಯಿ ದಾಳಿಯ ಪ್ರಮುಖ ಸೂತ್ರಧಾರರಲ್ಲಿ ಓರ್ವ ಎನ್ನಲಾದ ಅಬು ಜುಂದಾಲ್ನನ್ನು ಬಂಧಿಸಿದಾಗ ಅನೇಕ ವಿಷಯಗಳು ಬಯಲಾದವು. ಅಜ್ಮಲ್ ಕಸಬ್ ಕೇವಲ ಉಗ್ರನಾಗಿದ್ದ. ಆತನಿಗೆ ಉಗ್ರರ ಜಾಲದ ಕುರಿತು ಏನೂ ತಿಳಿದಿರಲಿಲ್ಲ. ಆದರೆ, ಅಬು ಜುಂದಾಲ್ ಹಲವು ವಿಷಯಗಳನ್ನು ಬಾಯಿ ಬಿಟ್ಟಿದ್ದಾನೆ.
ಲಖ್ವಿ ಜೈಲಿನಲ್ಲಿದ್ದರೂ ಆತನನ್ನು ತಾನು ಭೇಟಿ ಮಾಡಿದ್ದಾಗಿ ಅಬು ಜುಂದಾಲ್ ಎನ್ಐಎ ತನಿಖೆಯಲ್ಲಿ ಬಾಯಿಬಿಟ್ಟಿದ್ದಾನೆ. "2010ರಲ್ಲಿ ಲಖ್ವಿ ಇನ್ನೂ ಪಾಕಿಸ್ತಾನದ ಅಡಿಯಾಲಾ ಜೈಲ್ನಲ್ಲಿದ್ದ. ಆಗ ಆತ ನನಗೆ ಫೋನಾಯಿಸಿದ್ದ ಮತ್ತು ತಾನು ತಂದೆಯಾಗಿರುವುದಾಗಿ ಸಂತೋಷದಿಂದ ಹೇಳಿಕೊಂಡಿದ್ದ. ನನ್ನ ಚಿಕ್ಕ ಪತ್ನಿಗೆ ಜೈಲಿನೊಳಗೆ ಬರಲು ಹಾಗೂ ನನ್ನ ವೈವಾಹಿಕ ಹಕ್ಕು ಚಲಾಯಿಸಲು ಜೈಲಧಿಕಾರಿಗಳು ಅವಕಾಶ ಕೊಟ್ಟಿದ್ದರು ಎಂದಿದ್ದ" ಎಂದು ಅಬು ಜುಂದಾಲ್ ಹೇಳಿದ್ದ. [ಶಮಿವಿಟ್ ನೆಸ್ ಸಂಪರ್ಕದಲ್ಲಿದ್ದ ಎಲ್ಲರ ವಿಚಾರಣೆ]
ಲಖ್ವಿ ನಿಜವಾಗಿಯೂ ಜೈಲಿನಲ್ಲಿದ್ದನೇ? : ಆದರೆ, ನಂತರ ಭಾರತದ ಗುಪ್ತಚರ ಸಂಸ್ಥೆಗಳು ನಡೆಸಿದ ತನಿಖೆಯಲ್ಲಿ ಕಂಡುಬಂದಿದ್ದೆಂದರೆ ಲಖ್ವಿ ಜೈಲಿನಲ್ಲಿರಲೇ ಇಲ್ಲ ಎಂಬುದು. ಆತನನ್ನು ಸ್ವತಂತ್ರವಾಗಿ ಸುತ್ತಾಡಲು ಬಿಡಲಾಗಿತ್ತು. ಓರ್ವ ಉಗ್ರನಿಗೆ ನೀಡಬಾರದ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗಿತ್ತು.
ಮುಂಬಯಿ ಮೇಲೆ ನಡೆದ ದಾಳಿಯಲ್ಲಿ ಲಖ್ವಿ ಕೈವಾಡವಿದೆ ಎಂದು ಅಮೆರಿಕ ಕೂಡ ಹೇಳಿತ್ತು. ಭಾರತವೂ ಸಾಕಷ್ಟು ಸಾಕ್ಷ್ಯ ಒದಗಿಸಿತ್ತು. ಆದರೆ, ಪಾಕಿಸ್ತಾನ ಲಖ್ವಿಯನ್ನು ಜೈಲಿನಲ್ಲಿಟ್ಟಿದ್ದು ಕೇವಲ ಆತನ ಮೇಲೆ ನಡೆಯಬಹುದಾದ ದಾಳಿಯಿಂದ ರಕ್ಷಣೆ ಕೊಡಲು ಮಾತ್ರ ಎಂಬುದನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications