ಗಿನ್ನಿಸ್ ದಾಖಲೆಯ ದುಬಾರಿ ನೆಕ್ಲೇಸ್ ಹರಾಜು ಕಟ್ಟೆಗೆ
ಸಿಂಗಪುರ, ಅ.5: ಏಷ್ಯಾ ರಾಷ್ಟ್ರಗಳಲ್ಲೂ ಅಮೂಲ್ಯ ವಜ್ರಾಭರಣಗಳಿಗೆ ಬೇಡಿಕೆ ಕುದುರುತ್ತಿದೆ. ವಿಶ್ವದ ಅತಿ ದುಬಾರಿ ನೆಕ್ಲೇಸ್ ಅಕ್ಟೋಬರ್ ಅಂತ್ಯಕ್ಕೆ ಹರಾಜು ಕಟ್ಟೆಯಲ್ಲಿ ಬಿಕರಿಯಾಗಲಿದೆ.
L'Incomparable ಎಂದು ಹೆಸರು ಪಡೆದಿರುವ ಈ ದುಬಾರಿ ನೆಕ್ಲೇಸ್ ಅನ್ನು Mouawad ಐಷಾರಾಮಿ ಆಭರಣ ತಯಾರಿಕಾ ಕಂಪನಿ ಸಿದ್ಧಪಡಿಸಿದೆ. 90 ಬಿಳಿ ವಜ್ರಗಳಿಂದ ಹಳದಿ ಲೇಪನದ 407 ಕ್ಯಾರೆಟ್ ಈ ವಜ್ರಾಭರಣವನ್ನು ಚಿನ್ನದ ಕೇಸಿನಲ್ಲಿ ಇಡಲಾಗಿದೆ.

ಇತ್ತೀಚೆಗೆ ಪ್ರತಿಷ್ಠಿತ ಹರಾಜು ಕೇಂದ್ರಗಳಲ್ಲಿ ಅಮೂಲ್ಯ ಆಭರಣಗಳ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಈ ನೆಕ್ಲೇಸ್ ಆಭರಣಕ್ಕೂ ವಿಪರೀತ ಎನಿಸುವಷ್ಟು ಬಂದೋಬಸ್ತ್ ಕಲ್ಪಿಸಲಾಗಿದೆ. ಕಂಪನಿಯು ಪ್ರತಿ ದಿನ ಈ ಆಭರಣವನ್ನು ಹರಾಜು ಕೇಂದ್ರದಿಂದ ತನ್ನ ಕೇಂದ್ರಕ್ಕೆ ವಿಶೇಷ ಭದ್ರತೆಯೊಂದಿಗೆ ವಾಪಸ್ ತೆಗೆದುಕೊಂಡು ಹೋಗುತ್ತಿದೆ.
ಏಷ್ಯಾ ಸೇರಿದಂತೆ ಕೆಲ ರಾಷ್ಟ್ರಗಳ ಸಂಭಾವ್ಯ ಖರೀದಿದಾರರು ಈಗಾಗಲೇ ಆಸಕ್ತಿ ತೋರಿದ್ದಾರೆ ಎಂದು Mouawad ಕಂಪನಿಯ ಮುಖ್ಯಸ್ಥ ಜೀನ್ ನಾಸರ್ ತಿಳಿಸಿದ್ದಾರೆ. ಈ ದುಬಾರಿ ನೆಕ್ಲೇಸಿಗೆ ಆಭರಣದ ಮೌಲ್ಯಕ್ಕಿಂತ ಹೆಚ್ಚು ಮಹತ್ವವಿದೆ. ಇದೊಂದು ಹೂಡಿಕೆಯ ಸಾಧನವಾಗಲಿದೆ ಎಂದು ಅವರು ವರ್ಣಿಸಿದ್ದಾರೆ. Guinness World Recordsನಲ್ಲಿ ಅತಿ ಹೆಚ್ಚು ಮೌಲ್ಯದ ವಜ್ರಾಭರಣ (ಅಂದರೆ ಕೇವಲ 330 ಕೋಟಿ ರೂಪಾಯಿಗಳು ಮಾತ್ರ!) ಎಂದು ಈ ನೆಕ್ಲೇಸ್ ದಾಖಲಾಗಿದೆ.
ನೆಕ್ಲೇಸಿನ ಕೇಂದ್ರಾಕರ್ಷಣೆಯಾಗಿರುವ ವಜ್ರವು ಅಂಡಾಕಾರದಲ್ಲಿದೆ. ಇದು ಕಾಂಗೋದಲ್ಲಿ ಸುಮಾರು 30 ವರ್ಷಗಳ ಹಿಂದೆ ಗಣಿ ಗುಡ್ಡೆಯಲ್ಲಿ ಯುವತಿಯೊಬ್ಬಳ ಕಣ್ಣಿಗೆ ಬಿದ್ದಿತ್ತು. ಈ ವಜ್ರಕ್ಕೆ ಆನಂತರದ ದಿನಗಳಲ್ಲಿ ಅಮೆರಿಕ, ಯುರೋಪ್ ಮತ್ತು ಏಷ್ಯಾದ ಡಿಸೈನರುಗಳು ಸಾಕಷ್ಟು ಪರಿಶ್ರಮ ಹಾಕಿ, ಅದರ ಮೇಲೆ 200 ದಶಲಕ್ಷ ಡಾಲರ್ ಬಂಡವಾಳ ಹೂಡಿದ್ದಾರೆ.
-
Gold Rate March 23: ಚಿನ್ನ - ಬೆಳ್ಳಿ ದರ ಭಾರೀ ಕುಸಿತ: ಒಂದೇ ದಿನದಲ್ಲಿ ಶೇ. 4% ಇಳಿಕೆ, ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications