ದಿವಾಳಿಯತ್ತ ಗ್ರೀಸ್: ದಿಕ್ಕೆಟ್ಟು ಹೋದ ದೇಶದ ಜನತೆ
ಕೆಲವು ದಿನಗಳ ಹಿಂದೆ ಗ್ರೀಸ್ ನಲ್ಲಿ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಪಕ್ಷ, ಮಿತವ್ಯಯದ (Austerity) ವಿರುದ್ದ ಪ್ರಚಾರ ನಡೆಸಿ, ಅಧಿಕಾರಕ್ಕೆ ಬಂದಿತ್ತು. Austerity ಅಂದರೆ, ಸಾರ್ವಜನಿಕರಿಗೆ ಸರಕಾರ ಮಾಡುವ ಖರ್ಚ ಉಳಿಸಲು ತೆಗೆದುಕೊಳ್ಳುವ ಅತ್ಯಂತ ಕಠಿಣ ಕ್ರಮ.
2009 ಅಥವಾ ಅದಕ್ಕೂ ಕೆಲವು ವರ್ಷ ಮೊದಲೇ ಶುರುವಾದ ಎಕನಾಮಿಕ್ ಕ್ರೈಸಿಸ್, ಯೂರೋಪಿನ ಹಲವು ದೇಶಗಳ ತಳಪಾಯವನ್ನೇ ಅಲುಗಾಡಿಸಿತ್ತು. ಅದರಂತೇ, ಪೋರ್ಚುಗಲ್, ಇಟೆಲಿ, ಸ್ಪೇನ್, ಗ್ರೀಸ್ ಮತ್ತು ಸೈಪ್ರಸ್ ದೇಶಗಳಿಗೆ ಯೂರೋಪಿನ ಯೂನಿಯನ್ ಒಕ್ಕೂಟ ಬಡ್ದಿ ರೂಪದಲ್ಲಿ ಸಾಲ ನೀಡಿತ್ತು.
ಜೊತೆಗೆ, ಬಡ್ಡಿ ಸಮೇತ ಅಸಲು ವಾಪಸ್ ಮಾಡಲು ಗಡುವು ವಿಧಿಸಿತ್ತು. ಹಾಗೇ ವಾಪಸ್ಸು ಕೊಡಲು ಏನೇನು ಕ್ರಮ ಕೈಗೊಳ್ಳಬಹುದು ಎಂದು ಸಲಹೆ ನೀಡಿ ತನ್ನ ಅಣತಿಯಂತೆಯೇ ನಡೆಯಬೇಕು ಎನ್ನುವ ಷರತ್ತನ್ನು ವಿಧಿಸಿತ್ತು.
ಇದರಿಂದ ಆರಾಮಾಗಿ ಬದುಕಿ ಕೊಂಡಿದ್ದ ಗ್ರೀಸ್ ಜನರು ಒಮ್ಮೆಲೆ ತಮ್ಮ ಮೇಲೆ ಎರಗಿದ ಹಣಕಾಸು ಬಿಕ್ಕಟ್ಟಿನಿಂದ ಕೆಂಗೆಟ್ಟರು. ಜೊತೆಗೆ ತಮ್ಮ ಸರಕಾರದ ವಿರುದ್ದ ನಿತ್ಯ ಆಂದೋಲನ ಶುರು ಮಾಡಿದರು.

ಗ್ರೀಸ್ ದೇಶದ ಪ್ರಧಾನಿ ಅಲೆಕ್ಷಿಸ್ ತ್ಸಿಪ್ರಾಸ್, ಯೂರೋಪಿಯನ್ ಯೂನಿಯನ್ ಬಳಿ ಕನಿಷ್ಠ 313 ಬಿಲಿಯನ್ ಯುರೋ ಸಾಲ ಮನ್ನಾ ಮಾಡಲು ಮನವಿ ಮಾಡಿಕೊಂಡಿದ್ದಲ್ಲದೇ, ತಕ್ಷಣ ಸರಕಾರ ನಡೆಸಲು ಏಳು ಬಿಲಿಯನ್ ಯುರೋ ಹೊಸ ಸಾಲ ಕೊಡಿ ಎನ್ನುವ ಬೇಡಿಕೆಯಿಟ್ಟರು. ಷೇರು ಮಾರುಕಟ್ಟೆ ಹೈರಾಣವಗಲು ಇದುವೇ ಮೂಲ ಕಾರಣವಾಯಿತು.
ಇದರಿಂದ ಯುರೋ ಕರೆನ್ಸಿ ಟ್ರೇಡ್ ಮಾಡುತಿದ್ದ ದೇಶಗಳು ಭಯಕ್ಕೆ ಬಿದ್ದವು, ಆಕಸ್ಮಾತ್ ಗ್ರೀಸ್ ಕೊಟ್ಟ ಸಾಲವನ್ನು ವಾಪಸ್ಸು ಕೊಡದೆ ಹೋಗಿ ಯುರೋ ಜೋನ್ ನಿಂದ ಹೊರನೆಡೆದರೆ ಎನ್ನುವ ಭಯ ಇತರ ದೇಶಗಳಿಗೆ ಕಾಡಲಾರಂಭಿಸಿತು.
ಹೇಗಾದರೂ ಆಗಲಿ ನಮ್ಮ ರಕ್ಷಣೆ ನಮ್ಮದು ಎನ್ನುವ ಭಾವದಿಂದ ಯುರೋ ಜೂನ್ ದೇಶಗಳು ಡಾಲರ್ ನಲ್ಲಿ ಟ್ರೇಡ್ ಮಾಡಲಾರಂಭಿಸಿದವು. ಇದರ ಪರಿಣಾಮ ಯುರೋ ಶುರುವಾದ ಹೊಸತರಲ್ಲಿ ಒಂದು ಯುರೋ ಸುಮಾರು ಬೆಲೆ ತೊಂಬತ್ತು ರೂಪಾಯಿ ಇದ್ದದ್ದು, ಎಪ್ಪತ್ತರ ಆಸುಪಾಸಿಗೆ ಬಂದು ನಿಂತಿತು, ಗ್ರೀಸ್ ದಿವಾಳಿಯತ್ತ ಬಂದು ನಿಂತಿತು.
ಗ್ರೀಸ್ ತೆಗೆದು ಕೊಂಡ ಸಾಲ ತೀರಿಸದೆ ಯುರೋ ಗ್ರೂಪ್ ನಿಂದ ಹೊರ ನಡೆದರೆ ಏನಾಗಬಹುದು ?
* ಹೊಸದಾಗಿ ಸಾಲ ಕೊಡುವರಿಲ್ಲದೇ ಗ್ರೀಸ್, ಸೈಪ್ರಸ್ ದೇಶದಂತೆ ಅಧಿಕೃತವಾಗಿ 'ದಿವಾಳಿ' ಎನ್ನುವ ಕಪ್ಪುಪಟ್ಟಿಗೆ ಸೇರಬಹುದು.
* ಹೂಡಿಕೆದಾರರು, ಕೇವಲ ಗ್ರೀಸ್ ನಲ್ಲಿ ಮಾತ್ರ ಅಲ್ಲ, ಯುರೋ ಜೋನ್ ನಲ್ಲಿ ಹೂಡಿಕೆ ಮಾಡಲು ಶಂಕೆ ವ್ಯಕ್ತಪಡಿಸಿದರೆ, ಗ್ರೀಸ್ ಜೊತೆ ಸ್ಪೇನ್, ಇಟೆಲಿ, ಪೋರ್ಚುಗಲ್ ದೇಶಗಳು ಕೂಡಾ ಸಂಕಷ್ಟ ಎದುರಿಸಬೇಕಾಗಿ ಬರಬಹುದು.
* ಹೂಡಿಕೆದಾರ, ತಮ್ಮ ಹಳೆ ಹೂಡಿಕೆಯನ್ನು ಹಿಂದಕ್ಕೆ ಪಡೆಯಲು ಹವಣಿಸಿದರೆ, ಗ್ರೀಸ್ ಮಾರುಕಟ್ಟೆ ಪೂರ್ಣ ಕುಸಿತ ಕಾಣಬಹುದು.
* ರಾಜಕೀಯ ಅಸ್ಥಿರತೆ ಉಂಟಾಗಿ, ಬಲಿಷ್ಠ ರಾಷ್ಟ್ರಗಳು ತಮ್ಮ ಹಣ ಬಲದಿಂದ ಗ್ರೀಸ್ ದೇಶದ ಪ್ರಮುಖ ಬಂದರು , ವಿಮಾನ ನಿಲ್ದಾಣ, ಶಿಕ್ಷಣ ಸಂಸ್ಥೆ ಇತ್ಯಾದಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲೂ ಬಹುದು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications