ಚಿನ್ನದ ನಾಲಗೆಯಿದ್ದ ಮಮ್ಮಿ ಪತ್ತೆ; ಇದರ ಹಿಂದಿದೆ ಸತ್ತ ಮೇಲೂ ಮಾತಾಡುವ ಕಥೆ
ಸೈರೋ, ಫೆಬ್ರುವರಿ 02: ಚಿನ್ನದ ನಾಲಗೆ ಹೊಂದಿದ್ದ, ಸುಮಾರು 2000 ವರ್ಷಗಳಷ್ಟು ಹಿಂದಿನ ಮಮ್ಮಿಯೊಂದು ಈಜಿಪ್ಟ್ನ ಟ್ಯಾಪೋಸಿರಿಸ್ ಮಗ್ನಾ ಸಮಾಧಿ ಸ್ಥಳದಲ್ಲಿ ಪುರಾತತ್ವಜ್ಞರಿಗೆ ದೊರೆತಿದೆ.
ವ್ಯಕ್ತಿಯು ಸತ್ತ ನಂತರವೂ ಆತ ಮಾತನಾಡಲಿ ಎಂಬ ಕಾರಣಕ್ಕೆ ಮೃತದೇಹದೊಂದಿಗೆ ಚಿನ್ನದ ನಾಲಗೆ ಇಡುವ ರೂಢಿ ಇತ್ತು. ಚಿನ್ನದ ನಾಲಗೆ ಇಟ್ಟರೆ ಸತ್ತ ನಂತರವೂ ಆ ವ್ಯಕ್ತಿ ಮಾತನಾಡಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ಈಜಿಪ್ಷಿಯನ್ನರಲ್ಲಿತ್ತು. ಹೀಗಾಗೇ ಮೃತದೇಹದೊಂದಿಗೆ ಚಿನ್ನದ ನಾಲಗೆ ದೊರೆತಿದೆ ಎಂದು ಈಜಿಪ್ಟ್ ಪ್ರವಾಸೋದ್ಯಮ ಹಾಗೂ ಪುರಾತತ್ವ ಸಚಿವಾಲಯ ತಿಳಿಸಿದೆ.
ಚಿನ್ನದ ನಾಲಗೆಯೊಂದಿಗೆ ಇದ್ದ ಈ ಅಸ್ಥಿಪಂಜರವನ್ನು ಸಂರಕ್ಷಿಸಿಡಲಾಗಿದೆ. ಅದರ ತಲೆ ಬುರುಡೆ ಹಾಗೂ ದೇಹದ ರಚನೆ ಹಾಗೆಯೇ ಇದ್ದು, ಈ ಮಮ್ಮಿ ಸುಮಾರು 2000 ವರ್ಷಗಳ ಹಿಂದಿನದ್ದು ಎನ್ನಲಾಗಿದೆ. ಸುಮಾರು ಹತ್ತು ವರ್ಷಗಳಿಂದಲೂ ಈ ಕುರಿತು ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಸ್ಯಾಂಟೊ ಡೋಮಿಂಗೋ ವಿಶ್ವವಿದ್ಯಾಲಯ ಇಲ್ಲಿ ಉತ್ಖನನ ಕೆಲಸ ಕೈಗೊಂಡಿದ್ದು, ಈ ಸಂದರ್ಭ ವಿಶೇಷ ಮಮ್ಮಿ ದೊರೆತಿದೆ.

ಇದೇ ಸ್ಥಳದಲ್ಲಿ ಹಲವು ಗೋರಿಗಳಲ್ಲಿ ಮಮ್ಮಿಗಳು ದೊರೆತಿವೆ. ದೇಹದ ಇನ್ನಿತರ ಅಂಗಗಳು ನಾಶವಾಗಿದ್ದರೂ, ಮುಖಗಳನ್ನು ಸಂರಕ್ಷಣೆ ಮಾಡಲಾಗಿದೆ. ವ್ಯಕ್ತಿ ಹೇಗಿದ್ದ ಎಂಬುದರ ಗುರುತು ಪತ್ತೆಗೆ ಇದು ಅನುಕೂಲ ಮಾಡಿಕೊಟ್ಟಿದೆ. ಈ ಹಿಂದೆ ಇದೇ ತಂಡವು ಟ್ಯಾಪೋಸಿರಿಸ್ ಮ್ಯಾಗ್ನಾ ದೇವಾಲಯದ ಒಳಗೆ ಹಲವು ನಾಣ್ಯಗಳನ್ನು ಪತ್ತೆಹಚ್ಚಿತ್ತು. ರಾಣಿ ಕ್ಲಿಯೋಪಾತ್ರ VIIರ ಕೆತ್ತನೆ ಹೊಂದಿದ್ದ ನಾಣ್ಯಗಳು ಇವಾಗಿದ್ದವು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications