ಪ್ರಿಯಕರನ ಪ್ರಾಣಕ್ಕೆ ತುತ್ತಾಯ್ತು ಯುಟ್ಯೂಬ್ ವಿಡಿಯೋ ಹುಚ್ಚು
ಮಿನ್ನೇಸೋಟ(ಅಮೆರಿಕ), ಜೂನ್ 29: ಯೂಟ್ಯೂಬ್ ನಲ್ಲಿ ಅಪಾಯಕಾರಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಬೇಕೆಂಬ ಹುಚ್ಚಿಗೆ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಅಮೆರಿಕದ ಮಿನ್ನೇಸೋಟದಲ್ಲಿ ನಡೆದಿದೆ.
ತನ್ನ ಎದೆಗೆ ಪುಸ್ತಕವೊಂದನ್ನು ಅಡ್ಡ ಹಿಡಿದು, ಪುಸ್ತಕಕ್ಕೆ ಗುಂಡು ಹೊಡೆಯುವಂತೆ ಪೆಡ್ರೋ ರುಯಿಜ್(22) ಎಂಬಾತ ತನ್ನ ಪ್ರೇಯಸಿ ಮೊನಾಲಿಸಾ ಪೆರೇಜ್ (19) ಗೆ ಹೇಳಿದ್ದಾನೆ. ಇಬ್ಬರೂ ಅಪಾಯಕಾರಿ ವಿಡಿಯೋವೊಂದನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡುವುದಾಗಿ ಟ್ವೀಟ್ ಸಹ ಮಾಡಿದ್ದರು.

ಗರ್ಭಿಣಿಯಾಗಿ, ಮಗುವನ್ನು ನಿರೀಕ್ಷಿಸುತ್ತಿದ್ದ ಮೊನಾಲಿಸಾ ತನ್ನ ಪ್ರಿಯತಮನ ಮಾತಿನಂತೆಯೇ ಆತ ಹಿಡಿದ ಪುಸ್ತಕಕ್ಕೆ ಗುರಿಯಿಟ್ಟು ಗುಂಡುಹಾರಿಸಿದ್ದಾಳೆ. ಆದರೆ ಗುಂಡು ಪುಸ್ತಕವನ್ನು ತೂರಿ ಪೆಡ್ರೋನ ಎದೆಯನ್ನೂ ಸೀಳಿದೆ! ಇದರಿಂದ ದಿಗ್ಭ್ರಾಂತಳಾದ ಮೊನಾಲಿಸಾ ತಕ್ಷಣವೇ ಆತನನ್ನು ಆಸ್ಪತ್ರೆಗೆ ಸೇರಿಸಿದ್ದರೂ, ಆತ ಸಾವಿಗೀಡಾಗಿದ್ದಾನೆಂದು ವೈದ್ಯರು ಘೋಷಿಸಿದ್ದಾರೆ.
Me and Pedro are probably going to shoot one of the most dangerous videos ever😳😳 HIS idea not MINE🙈
— Monalisa Perez (@MonalisaPerez5) June 26, 2017
ಈ ಇಬ್ಬರ ಹುಚ್ಚಾಟದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇಂಥ ಅಪಾಯಕಾರಿ ಕೆಲಸಗಳನ್ನು ಮಾಡುವುದು ಮೂರ್ಖತನ ಎಂದು ಹಲವರು ದೂರಿದ್ದಾರೆ. ಇದೀಗ ಪ್ರಿಯತಮನನ್ನೇ ಕೊಲೆ ಮಾಡಿದ ಕಪ್ಪುಪಟ್ಟಿ ಸೇರಿರುವ ಮೊನಾಲಿಸಾ ಕುರಿತು ಹಲವರು ಅನುಕಂಪ ವ್ಯಕ್ತಪಡಿಸಿದ್ದಾರೆ.
ಆಕೆಯದೇನೂ ತಪ್ಪಿಲ್ಲ, ಪೆಡ್ರೋ ಒತ್ತಾಯಿಸಿದ್ದಕ್ಕಾಗಿ ಆಕೆ ಹಾಗೆ ಮಾಡಿದ್ದಾಳೆ. ಆಕೆಗೆ ಅಪಾಯದ ಅರಿವಿರಲಿಲ್ಲ ಎಂದು ಹಲವರು ಮೊನಾಲಿಸಾ ಪರ ವಾದಿಸಿದ್ದಾರೆ.
ಏನೇ ಆದರೂ ಇದೊಂದು ಕೊಲೆ ಪ್ರಕರಣ ಎಂದು ದಾಖಲಾಗಿದ್ದು, ಮೊನಾಲಿಸಾಳನ್ನು ಪೊಲಿಸರು ಬಂಧಿಸಿದ್ದಾರೆ.
ಅಪಾಯಕಾರಿ ಹುಡುಗಾಟಕ್ಕೆ ಒಂದು ಪುಟ್ಟ ಕುಟುಂಬದ ನೆಮ್ಮದಿ, ನಗು ಎಲ್ಲವೂ ಬಲಿಯಾದಂತಾಗಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications