ಐವತ್ತಲ್ಲ..ನೂರಲ್ಲ..ಈ ಮಹಿಳೆಯ ಕಿಡ್ನಿಯಲ್ಲಿತ್ತು ಬರೋಬ್ಬರಿ 300ಕ್ಕೂ ಅಧಿಕ ಕಲ್ಲುಗಳು..!
ವೈದ್ಯಲೋಕದಲ್ಲಿ ಅಚ್ಚರಿಯ ಘಟನೆಗಳು ನಡೆಯುತ್ತಲೇ ಇರುತ್ತದೆ. ಹೊಟ್ಟೆಯಲ್ಲಿ ಕೆಜಿ ಗಟ್ಟಲೆ ಕಲ್ಲು, ಅಸಾಧ್ಯವಾದ ಅಚ್ಚರಿ ಎನಿಸುವ ಶಸ್ತ್ರ ಚಿಕಿತ್ಸೆಗಳು, ಮೂರಕ್ಕಿಂತ ಹೆಚ್ಚು ಮಕ್ಕಳ ಜನನ, ಹೀಗೆ ಒಂದಲ್ಲಾ ಒಂದು ರೀತಿಯ ಘಟನೆಗಳು ನಡೆಯುತ್ತಿರುತ್ತವೆ. ಅಂತಹದ್ದೇ ಒಂದು ಘಟನೆ ತೈವಾನ್ನಲ್ಲಿ ನಡೆದಿದ್ದು, ಈ ವಿಚಾರ ಕೇಳಿದ ಪ್ರತಿಯೊಬ್ಬರಿಗೂ ಶಾಕ್ ಆಗಿದೆ.
ತೈವಾನ್ನ ವೈದ್ಯರು ಮಹಿಳೆಯ ಮೂತ್ರಪಿಂಡದಿಂದ ಒಂದಲ್ಲ ಎರಡಲ್ಲಾ ನೂರಲ್ಲಾ ಬರೋಬ್ಬರಿ 300ಕ್ಕೂ ಹೆಚ್ಚು ಕಲ್ಲುಗಳನ್ನು ಹೊರಗೆ ತೆಗೆದಿದ್ದಾರೆ. ಇದು ವೈದ್ಯ ಲೋಕಕ್ಕೆ ಸವಾಲು ಅಷ್ಟೇ ಅಲ್ಲದೇ ದೊಡ್ಡ ಅಚ್ಚರಿ ಕೂಡ. ಸಾಮಾನ್ಯವಾಗಿ ಒಂದು ಅಥವಾ ಎರಡು ಮೂರು ಕಲ್ಲುಗಳು ಮೂತ್ರಪಿಂಡದಲ್ಲಿ ಇರುತ್ತದೆ.

ಕಿಡ್ನಿ ಸ್ಟೋನ್ ಮೊದಲ ಹಂತದಲ್ಲಿದ್ದರೇ ವೈದ್ಯರು ನೀರು ಕುಡಿಯವ ಅಭ್ಯಾಸ, ಮಾತ್ರೆ ಹಾಗೂ ಔಷಧಿಗಳಿಂದಲೇ ಗುಣಪಡಿಸುತ್ತಾರೆ. ಒಂದು ವೇಳೆ ಇದರಿಂದ ಸಾಧ್ಯವಾಗದಿದ್ದರೇ ಆಪರೇಷನ್ ಮೂಲಕ ಮೂತ್ರಪಿಂಡದ ಕಲ್ಲುಗಳನ್ನು ಹೊರ ತೆಗೆಯುತ್ತಾರೆ. ಆದರೆ ವೈದ್ಯಲೋಕಕ್ಕೆ ಸವಾಲು ತಂದಿದ್ದ ಈ ಮಹಿಳೆ ಪ್ರಕರಣವನ್ನು ತೈವಾನ್ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ.
ಕ್ಸಿಯಾವೋ ಯು ಎನ್ನುವ 20 ವರ್ಷದ ಮಹಿಳೆ ಹೊಟ್ಟೆ ನೋವು, ಬೆನ್ನು ನೋವು ಹಾಗೂ ಜ್ವರದಿಂದ ಬಳಲುತ್ತಿದ್ದರು. ಕೂಡಲೇ ಆಕೆಯನ್ನು ತೈನಾನ್ ನಗರದ ಚಿಮೆಯಿ ಆಸ್ಪತ್ರೆಗೆ ದಾಖಲಿಸಲಾಯಿತು. ಈಕೆಯನ್ನು ಪರೀಕ್ಷೆ ಮಾಡಿದ ವೈದ್ಯರೇ ಅಚ್ಚರಿಗೊಂಡಿದ್ದಾರೆ. ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿದಾಗ ಆಕೆಯ ಮೂತ್ರಪಿಂಡ ಊದಿಕೊಂಡಿತ್ತು ಅಲ್ಲದೇ ಅದರೊಳಗೆ ನೂರಾರು ಕಲ್ಲುಗಳಿರುವುದು ತಿಳಿದು ಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯರು ಕೂಡಲೇ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಸಿದ್ದಾರೆ.

ಆಕೆಯ ಮೂತ್ರ ಪಿಂಡದಲ್ಲಿದ್ದ ಕಲ್ಲುಗಳು ಸುಮಾರು 5 ಮಿಲಿ ಮೀಟರ್ನಿಂದ 2 ಸೆ.ಮೀ ಗಾತ್ರದಲ್ಲಿವೆ ಎಂದು ಸ್ಕ್ಯಾನ್ ಮಾಡಿದಾಗ ತಿಳಿದು ಬಂದಿದೆ. ಜೊತೆಗೆ ಒಂದಿಷ್ಟು ದ್ರವ ಕೂಡ ತುಂಬಿಕೊಂಡಿತ್ತು. ಇದರಿಂದ ಕಿಡ್ನಿಯು ಹೆಚ್ಚು ಅಪಾಯದಲ್ಲಿತ್ತು. ಅಲ್ಲದೇ ಆಕೆಯ ರಕ್ತ ಪರೀಕ್ಷೆ ಮಾಡಿದಾಗ ಬಿಳಿ ರಕ್ತಕಣಗಳು ಹೆಚ್ಚಾಗಿರುವುದು ಕೂಡ ತಿಳಿದು ಬಂದಿದೆ.
ಕ್ಸಿಯಾವೋ ಯು ಆರೋಗ್ಯದ ಬಗ್ಗೆ ಗಂಭೀರವಾಗಿ ಚಿಂತಿಸಿದ ವೈದ್ಯರ ತಂಡ ಚಿಕಿತ್ಸೆ ಆರಂಭಿಸಿದ್ದಾರೆ. ಮೊದಲು ಆ್ಯಂಟಿ ಬಯಾಟಿಕ್ ನೀಡಿ, ಮೂತ್ರ ಪಿಂಡದಲ್ಲಿದ್ದ ದ್ರವವನ್ನು ಹೊರಗೆ ತೆಗೆದಿದ್ದಾರೆ. ಬಳಿಕ ಮಿನಿಮಲಿ ಇನ್ವೆಸಿವ್ ಸರ್ಜರಿ ಮಾಡಿದ್ದಾರೆ. ಈ ವೇಳೆ ವೈದ್ಯರು ಒಂದಲ್ಲ, ಎರಡಲ್ಲ, ಐವತ್ತಲ್ಲಾ, ನೂರಲ್ಲಾ, ಬರೋಬ್ಬರಿ 300ಕ್ಕೂ ಅಧಿಕ ಕಲ್ಲುಗಳನ್ನು ಹೊರ ತೆಗೆದಿದ್ದಾರೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಕೆಲವು ದಿನಗಳವರೆಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ.
ಇನ್ನು ಕ್ಸಿಯಾವೋ ಯು ಹೆಚ್ಚು ನೀರು ಕುಡಿಯುವುದಿಲ್ಲ ಅದರ ಬದಲಾಗಿ ತೈವಾನ್ನ ಪ್ರಸಿದ್ಧ ಟೀ ಹಾಗೂ ತಂಪು ಪಾನಿಯಗಳನ್ನು ಮಾತ್ರ ಸೇವಿಸುತ್ತಿದ್ದರು ಎಂದು ವರದಿಯಾಗಿದೆ. ಇದರಿಂದಲೇ ಆಕೆಯ ಮೂತ್ರಪಿಂಡದಲ್ಲಿ ಅಷ್ಟೊಂದು ಕಲ್ಲುಗಳು ಆಗಿದ್ದವು ಎನ್ನಲಾಗಿದೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications