ನಾರ್ತ್ ಕೆರೋಲಿನಾವನ್ನು ಅಪ್ಪಳಿಸಲಿದೆ ಫ್ಲಾರೆನ್ಸ್ ಚಂಡಮಾರುತ
Recommended Video

ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 14 : ಪ್ರಚಂಡ ಫ್ಲಾರೆನ್ಸ್ ಚಂಡಮಾರುತ ನಾರ್ತ್ ಕೆರೋಲಿನಾದ ಪೂರ್ವ ಕರಾವಳಿಯನ್ನು ಅಪ್ಪಳಿಸಲು ಸಜ್ಜಾಗಿದ್ದು, ಆಸ್ತಿಪಾಸ್ತಿ ಮತ್ತು ಪ್ರಾಣಕ್ಕೆ ಭಾರೀ ಹಾನಿಯಾಗುವ ಸಂಭವನೀಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಈ ಫ್ಲಾರೆನ್ಸ್ ಚಂಡಮಾರುತವನ್ನು ಕೆಟಗರಿ 1 ಚಂಡಮಾರುತ ಎಂದು ವಿಭಾಗಿಸಲಾಗಿದ್ದು, ಪ್ರತಿ ಗಂಟೆಗೆ 90 ಮೈಲಿಯಷ್ಟು ವೇಗವಾಗಿ ಬಿರುಗಾಳಿ ಬೀಸುತ್ತಿದೆ. ಚಂಡಮಾರುತ ವಿಲ್ಮಿಂಗ್ಟನ್ ನಿಂದ 30 ಮೈಲು ದೂರದಲ್ಲಿದ್ದು, ಪ್ರತಿ ಗಂಟೆಗೆ 6 ಮೈಲಿ ವೇಗದಲ್ಲಿ ಕರೋಲಿನಾ ಉತ್ತರ ಕರಾವಳಿಯತ್ತ ಮುನ್ನುಗ್ಗುತ್ತಿದೆ.
ಮುಂದಿನ ಕೆಲ ದಿನಗಳ ಕಾಲ ಭಾರೀ ಮಳೆ ಸುರಿಯಲಿದ್ದು, ಜನರು ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ನೀಡಲಾಗಿದೆ. 10 ಲಕ್ಷಕ್ಕೂ ಹೆಚ್ಚು ಜನರನ್ನು ಅಪಾಯದ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಕೂಡ ಸೂಚನೆ ನೀಡಲಾಗಿದೆ.

ಈ ಚಂಡಮಾರುತ ಈಗಾಗಲೆ ತನ್ನ ಹಾವಳಿಯನ್ನು ಎಬ್ಬಿಸಿದೆ. ಲೈವ್ ಕ್ಯಾಮೆರಾಗಳು ಅನಾಹುತವನ್ನು ಸೆರೆಹಿಡಿಯುತ್ತಿವೆ. ಉತ್ತರ ಕರೋಲಿನಾದಲ್ಲಿರುವ ಪುಂಗೋ ನದಿ ಈಗಾಗಲೆ ಅಪಾಯಮಟ್ಟಕ್ಕಿಂತ ಮೇಲೆ ಹರಿಯುತ್ತಿದ್ದು, ಸುರಕ್ಷಿತವಾಗಿರಿ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಪ್ರಚಂಡ ಚಂಡಮಾರುತ ಫ್ಲಾರೆನ್ಸ್ ಸ್ಥಳೀಯ ಕಾಲಮಾನ ಶುಕ್ರವಾರ ಮಧ್ಯಾಹ್ನದ ಸಮಯ ಉತ್ತರ ಕರೋಲಿನಾಗೆ ಬಂದು ತಲುಪಲಿದೆ. ಈ ಚಂಡಮಾರುತ ನಮ್ಮ ಸಹನೆ, ಸಹಿಷ್ಣುತೆ, ಟೀಮ್ ವರ್ಕ್, ಸಾಮಾನ್ಯಜ್ಞಾನವನ್ನು ಪರೀಕ್ಷಿಸಲಿದೆ ಎಂದು ಕರೋಲಿನಾದ ರಾಜ್ಯಪಾಲ ರಾಯ್ ಕೂಪರ್ ಹೇಳಿದ್ದಾರೆ. ಎಂಟು ತಿಂಗಳಲ್ಲಿ ಬೀಳಲಿರುವ ಮಳೆ ಕೇವಲ ಎರಡು ಮೂರು ದಿನಗಳಲ್ಲಿ ಬೀಳಲಿದೆ ಎಂದು ರಾಷ್ಟ್ರೀಯ ಹವಾಮಾನ ತಜ್ಞ ಬ್ರಾಂಡನ್ ಲಾಕ್ಲಿಯರ್ ಅವರು ಮುನ್ಸೂಚನೆ ನೀಡಿದ್ದಾರೆ.

ಉತ್ತರ ಕೆರೋಲಿನಾದ ಕೆಲವೆಡೆಗಳಲ್ಲಿ ಕೆಲವೇ ಗಂಟೆಗಳಲ್ಲಿ ಭಾರೀ ಮಳೆ ಬಿದ್ದಿದೆ. ಸಮುದ್ರದ ಅಲೆಗಳು ಭಾರೀ ಗಾತ್ರ ಪಡೆಯುತ್ತ ತೀರವನ್ನು ಅಪ್ಪಳಿಸುತ್ತಿದೆ. ಗಾಳಿಯ ವೇಗ ತುಸು ತಗ್ಗಿದ್ದರೂ ಚಂಡಮಾರುತದ ರೌದ್ರತೆಯನ್ನು ಕಡೆಗಣಿಸುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ನದಿ, ತೊರೆ, ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಎಚ್ಚರಿಕೆಯಿಂದಿರಬೇಕು. ಹಿಂದೆ ಕೂಡ ಪ್ರವಾಹದಿಂದಾಗಿ ಹಲವಾರು ಸಾವುನೋವುಗಳಾಗಿವೆ ಎಂದು ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಏಜೆನ್ಸಿ ಹೇಳಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications