ಹಿಂಸಾಚಾರಕ್ಕೆ ತಿರುಗಿದ ಬೆಲೆ ಏರಿಕೆ ಪ್ರತಿಭಟನೆ, ಚಿಲಿಯಲ್ಲಿ ತುರ್ತು ಪರಿಸ್ಥಿತಿ
ಸ್ಯಾಂಟಿಯಾಗೋ, ಅಕ್ಟೋಬರ್ 20: ಚಿಲಿಯ ರಾಜಧಾನಿಯ ಸ್ಯಾಂಟಿಯಾಗೋದಲ್ಲಿ ಮೆಟ್ರೋ ಸಾರಿಗೆ ದರ ಏರಿಕೆ ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಹಿಂಸಾಚಾರ ರೂಪ ಪಡೆದಿದೆ. ನಗರದ ಹಲವೆಡೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಮೂವರು ಮೃತಪಟ್ಟಿದ್ದಾರೆ. ವ್ಯಾಪಕ ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ಇದೇ ಮೊದಲ ಬಾರಿಗೆ ಸೇನೆಯನ್ನು ನಿಯೋಜಿಸಿ, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಪ್ರತಿಭಟನೆಗೆ ಹೆದರಿದ ಸರ್ಕಾರವು ಬೆಲೆ ಏರಿಕೆಯನ್ನು ಹಿಂಪಡೆದುಕೊಂಡಿದೆ.
ಸ್ಯಾಂಟಿಯಾಗೋದಲ್ಲಿ ಸೂಪರ್ ಮಾರ್ಕೆಟ್, ಬಸ್ ಹಾಗೂ ಬೈಕ್ ಗಳಿಗೆ ಬೆಂಕಿ ಹಚ್ಚಲಾಗಿದೆ. ರಸ್ತೆಗಳ ತುಂಬಾ ಕಸ ಹರಡಲಾಗಿದೆ. ಇಬ್ಬರು ಬೆಂಕಿಗೆ ಆಹುತಿಯಾಗಿದ್ದರೆ, ಮತ್ತೊಬ್ಬ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ ಎಂದು ಮೇಯರ್ ಕಾರ್ಲಾ ರುಬಿಲಾರ್ ಹೇಳಿದ್ದಾರೆ.
#ModoActivo #EnVideo📹| "El pueblo unido jamás será vencido", cantan los jóvenes que protestan esta tarde en la ciudad de Santiago de Chile. vía 👉 @teleSURtv #ChileDesperto#LaRebeliónDeSantiago pic.twitter.com/iUTTMx4dNB @NicolasMaduro @ProfeGian #DracuTuitera #ModoActivo
— JeSuS RoJaS (@jr4feb) October 20, 2019
ಪ್ರತಿಭಟನೆ ಹಿಂದೆ ಮೆಟ್ರೋ ಸಬ್ ವೇ ದರ ಏರಿಕೆ(1.12 ಡಾಲರ್ ನಿಂದ 1.16 ಡಾಲರ್) ಯಲ್ಲದೆ ಆರ್ಥಿಕ ಹಾಗೂ ಸಾಮಾಜಿಕ ಕಾರಣಗಳಿವೆ. ಲ್ಯಾಟಿನ್ ಅಮೆರಿಕದ ಅತ್ಯಂತ ಸ್ಥಿರವಾದ ದೇಶ ಚಿಲಿಯಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಅಂತರ ಹೆಚ್ಚಾಗಿದೆ. ಇದು ದುಃಖಕರವಾಗಿದೆ. ಆದರೆ, ಜನರು ತಮ್ಮ ಅಳಲು ಕೇಳಬೇಕೆಂಬುದನ್ನು ಈ ವಿನಾಶ ಸೂಚಿಸುತ್ತಿದೆ.
ಚಿಲಿ ಪ್ರೆಶರ್ ಕುಕರ್ ರೀತಿ ಆಗಿತ್ತು, ಕೆಟ್ಟ ರೀತಿಯಲ್ಲಿ ಸಿಡಿದಿದೆ ಎಂದು ಮಾರಿಯಾ ಎಂಬ ಸರ್ಕಾರಿ ನೌಕರರೊಬ್ಬರು ಹೇಳಿದ್ದಾರೆ.
A quien le puede gustar esta destrucción en Chile https://t.co/dYxbloqfZt
— Andres Peraza (@andpera) October 20, 2019
1990ರಲ್ಲಿ ಪ್ರಜಾಪ್ರಭುತ್ವಕ್ಕೆ ಮರಳಿ ಚಿಲಿ ಇದೆ ಮೊದಲ ಬಾರಿಗೆ ಸೈನ್ಯವನ್ನು ರಾಜಧಾನಿಯ ನಿರ್ವಹಣೆಗೆ ನಿಯೋಜಿಸುವ ಪರಿಸ್ಥಿತಿ ಎದುರಿಸಿದೆ. ಆಗುಸ್ಟೋ ಪಿನೊಚೆಟ್ ಸರ್ವಾಧಿಕಾರ ಅಂತ್ಯವಾದ ನಂತರ ಸೈನ್ಯ ಪ್ರಮುಖ ಪಾತ್ರ ವಹಿಸುತ್ತಿದೆ.

ಸ್ಯಾಂಟಿಯಾಗೋ ನಗರದಲ್ಲಿ ಕಂಡು ಕೇಳರಿಯದ ಹಿಂಸಾಚಾರ ಉಂಟಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಸೆಬಾಶ್ಚಿಯನ್ ಪಿನೆರಾ ಅವರು ಶನಿವಾರದಂದು ಎಲ್ಲೆಡೆ ಸೇನೆ ನಿಯೋಜಿಸಿ, ಪರಿಸ್ಥಿತಿಯನ್ನು ತಹಬಂದಿಗೆ ತರಲು ಯತ್ನಿಸಿದ್ದಾರೆ.
ಸುಮಾರು 76 ರೈಲ್ವೆ ನಿಲ್ದಾಣಗಳನ್ನು ನಾಶಗೊಳಿಸಲಾಗಿದೆ, ರೈಲು ಸಂಚಾರ ಶನಿವಾರ, ಭಾನುವಾರ ಸ್ಥಗಿತಗೊಳಿಸಲಾಗಿದೆ. ಸ್ಯಾಂಟಿಯಾಗೋ ಮೆಟ್ರೋ 140 ಕಿ.ಮೀ. ಉದ್ದದ ಮಾರ್ಗ ಹೊಂದಿದ್ದು, ಇದು ದಕ್ಷಿಣ ಅಮೆರಿಕದಲ್ಲಿ ಅತ್ಯಂತ ಆಧುನಿಕ ವ್ಯವಸ್ಥೆ ಹೊಂದಿದೆ. ಪ್ರತಿಭಟನೆ, ಹಿಂಸಾಚಾರ ನಿರತರ ಪೈಕಿ 300 ಜನರನ್ನು ಬಂಧಿಸಲಾಗಿದೆ. 11 ಜನ ನಾಗರಿಕರು, 156 ಪೊಲೀಸರು ಗಾಯಗೊಂಡಿದ್ದಾರೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications