ಬಿಪಿ ಹೆಚ್ಚಿಸಲು ನಾಲ್ಕು ಇಮೇಲ್ ಸಾಕು!
ಬೆಂಗಳೂರು, ಡಿ. 5 : ನಿಮಗೆ ನಿರಂತರ ತಲೆನೋವು, ಹೊಟ್ಟೆನೋವು, ಭುಜ ನೋವು, ಬೆನ್ನು ನೋವು ಈ ರೀತಿ ಒಂದಿಲ್ಲೊಂದು ಸಮಸ್ಯೆಗಳು ಕಾಡುತ್ತಿವೆಯೇ? ಹಾಗಾದರೆ ನೀವು 'ಇನ್ ಬಾಕ್ಸ್ ಸ್ಟ್ರೆಸ್' ನಿಂದ ಬಳಲುತ್ತಿದ್ದೀರಿ ಎಂದರ್ಥ.
ಅರೆ ಇದೇನು ಇನ್ ಬಾಕ್ಸ್ ಸ್ಟ್ರೆಸ್? ಹೊಸದೊಂದು ರೋಗದ ಹೆಸರು ಅಂದುಕೊಂಡ್ರಾ,,, ಅಲ್ಲಾ ಬಿಡಿ. ಮೊಬೈಲ್ ಮೆಸೇಜ್ ಮತ್ತು ಕಚೇರಿಯ ಇ ಮೇಲ್ ಗಳು ಬಿಪಿ ಹೆಚ್ಚಿಸಬಹುದು ಎಂಬ ಸಂಗತಿಯನ್ನು ಬ್ರಿಟಿಷ್ ಅಧ್ಯಯನ ವರದಿಯೊಂದು ಸ್ಪಷ್ಟಪಡಿಸಿದೆ.[ಟ್ವೀಟ್ ಸಂದೇಶ ಭಾಷೆ ರಹಸ್ಯ ಬಯಲು]

ನಿರಂತರವಾಗಿ ಮೊಬೈಲ್ ಇನ್ ಬಾಕ್ಸ್ ತುಂಬಿಕೊಳ್ಳುವ ಮೆಸೇಜ್ ಗಳು, ಕಚೇರಿಯಲ್ಲಿ ಕುಳಿತಾಗ ಸಹೋದ್ಯೋಗಿಯಿಂದ ಬರುವ ಇಮೇಲ್, ಇಲ್ಲವೇ ಮೇಲಿನ ಸಿಬ್ಬಂದಿಯಿಂದ ಪದೇ ಪದೇ ಉತ್ತರ ಕೇಳಿ ಬರುವ ಇಮೇಲ್ ಗಳು ದೇಹದ ರಕ್ತದೊತ್ತಡ ಹೆಚ್ಚಿಸುವುದಲ್ಲದೇ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಇಂಗ್ಲೆಂಡ್ ಸಂಶೋಧನೆ ಹೇಳಿದೆ.
ಮನೆಯಲ್ಲೇ ಕುಳಿತು ಆರಾಮವಾಗಿ ಕೆಲಸ ಮಾಡುತ್ತಿದದ್ದೀರಿ ಎಂದಿಟ್ಟುಕೊಳ್ಳಿ, ಇದ್ದಕ್ಕಿದ್ದಂತೆ ಕಚೇರಿ ಕಡೆಯಿಂದ ಇ ಮೇಲ್ ಗಳ ಮಳೆ ಸುರಿಯಲು ಆರಂಭಿಸುತ್ತಿದೆ. ಇದಕ್ಕೆ ಉತ್ತರ ನೀಡುತ್ತ ಹೋದಂತೆ ನಿಮ್ಮ ರಕ್ತದೊತ್ತಡ ಹೆಚ್ಚಾಗುವುದಲ್ಲದೇ ಮಾನಸಿಕ ಕಿರಿ ಕಿರಿ ಆರಂಭವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.[ಎಚ್ಎಎಲ್ ಇಮೇಲ್ ಐಡಿ ಹ್ಯಾಕ್ ರಾದ್ಧಾಂತ!]
ವಾರದ ಕೊನೆಯಲ್ಲಿ ತಲೆನೋವು, ಹೊಟ್ಟೆನೋವು, ಭುಜ ನೋವು ಒಂದಿಲ್ಲೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇವಕ್ಕೆ ಪರಿಹಾರ ಕಂಡುಕೊಳ್ಳುವಷ್ಟರಲ್ಲಿ ಹೊಸ ವಾರ ಆರಂಭವಾಗಿರುತ್ತದೆ. ಮತ್ತೆ ಸಮಸ್ಯೆಯ ಸರಣಿ ಮುಂದುವರಿಯುತ್ತದೆ ಎಂದು ಸಮೀಕ್ಷೆ ಹೇಳಿದೆ.
ಸಮೀಕ್ಷೆ ನಡೆದಿದ್ದು ಹೇಗೆ?
ಬ್ರಿಟಿಷ್ ಕೋಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು 124 ಜನರನ್ನು ಅಧ್ಯಯನಕ್ಕೆ ಒಳಪಡಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆರೋಗ್ಯ, ಅಕಾಡಮಿಕ್, ಹಣಕಾಸು, ಆಡಳಿತ, ಮಾಹಿತಿ ತಂತ್ರಜ್ಞಾನ ಹೀಗೆ ಎಲ್ಲ ಕ್ಷೇತ್ರದವರನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಯಿತು.
ಅಧ್ಯಯನಕ್ಕೆ ಒಳಪಟ್ಟ ಕೆಲ ಮಂದಿ ನಾವು ದಿನಕ್ಕೆ 2-3 ಬಾರಿ ಮಾತ್ರ ಮೇಲ್ ಚೆಕ್ ಮಾಡುತ್ತೇವೆ ಎಂದು ತಿಳಿಸಿದ್ದರು. ಅಗತ್ಯ ಬಿದ್ದಾಗಲೆಲ್ಲಿ ಮೇಲ್ ಚೆಕ್ ಮಾಡುತ್ತೇವೆ ಎಂದಿದ್ದರು. ಅಧ್ಯಯನಕ್ಕೆ ಒಳಪಡಿಸಿದ್ದ ಎಲ್ಲರಿಗೂ ಸಾಧ್ಯವಾದಾಗಲೆಲ್ಲ ಮೇಲ್ ಪರಿಶೀಲಿಸಿ ಎಂದು ಸಂಶೋಧಕರು ತಿಳಿಸಿದ್ದರು.
ಇದಾದ ಒಂದು ವಾರದ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಪದೇ ಪದೇ ಮೇಲ್ ಚೆಕ್ ಮಾಡುವುದರಿಂದ ಎಲ್ಲರಲ್ಲೂ ಮಾನಸಿಕ ಒತ್ತಡ ಹೆಚ್ಚಾಯಿತು. ಶೀಘ್ರ ಕೋಪ ಬರುವುದು, ಬೆನ್ನು ನೋವು ಮತ್ತಿತರ ತೊಂದರೆಗಳು ಕಾಣಿಸಿಕೊಳ್ಳಲು ಆರಂಭವಾದವು ಎಂದು ಸಂಶೋಧನಾ ವಿದ್ಯಾರ್ಥಿಗಳು ತಿಳಿಸಿದ್ದಾರೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications