ಚಳಿಗೆ ನಲುಗುತ್ತಿದ್ದ ಮಗುವನ್ನು ಕಾಪಾಡಿದ ಬೆಕ್ಕು ಮಾಶಾ!
ಈ ಜಗತ್ತೇ ಹೀಗೆ. ಏನಾದರೂ ವಿಸ್ಮಯಗಳು ಸಂಭವಿಸುತ್ತಲೇ ಇರುತ್ತವೆ. ಈ ವಿಸ್ಮಯಗಳೆಲ್ಲ ನಮ್ಮಿಂದಲೇ ಆಗಿದ್ದು ಎಂಬ ಭ್ರಮೆಯಲ್ಲಿ ಮಾನವರಿರುತ್ತಾರೆ. ಆದರೆ, ಮಾನವೀಯತೆ ಎಂಬುದು ಮಾನವರ ಸ್ವತ್ತು ಮಾತ್ರವಲ್ಲ, ನಮಗೂ ಮಾನವೀಯತೆ ಇದೆ ಎಂದು ಮನೆಮಠವಿಲ್ಲದ ಬೆಕ್ಕೊಂದು ಸಾಬೀತು ಮಾಡಿದೆ.
ಬಟ್ಟೆ ಹಾಕಿಕೊಂಡವರೇ ಬೆದರುವಂಥ ಚಳಿ, ಅದೂ ರಷ್ಯಾದ ಒಬ್ನಿಸ್ಕ್ ಎಂಬ ಪ್ರಾಂತ್ಯದಲ್ಲಿ. ಬೀದಿಬದಿಯಲ್ಲಿ ರಟ್ಟಿನ ಡಬ್ಬಿಯೊಂದರಲ್ಲಿ ಅಮ್ಮನ ಪ್ರೀತಿಯಿಂದ ವಂಚಿತನಾಗಿದ್ದ ಕೇವಲ 12 ವಾರಗಳ ಮಗು ಚಳಿ ತಡೆಯಲಾರದೆ ಕೀರಲುತ್ತಿತ್ತು. ಅದನ್ನು ಯಾರಾದರೂ ಗಮನಿಸಿದರೋ ಬಿಟ್ಟರೋ ತಾಯಿ ಹೃದಯದ ಬೆಕ್ಕು ಮಾಶಾ ಗಮನಿಸಿತ್ತು.

ಟಂಗನೆ ಡಬ್ಬಿಯೊಳಗೆ ನೆಗೆದು ಪುಷ್ಕಳವಾಗಿ ಬೆಳೆದಿದ್ದ ಕೂದಲಿನ ಸಹಾಯದಿಂದ ಮಗುವನ್ನು ಮಾಶಾ ಬೆಚ್ಚಗಿಟ್ಟಿದೆ. ಅಷ್ಟು ಮಾಡಿದ್ದಲ್ಲದೆ, ಮೀಯಾಂವ್ ಮೀಯಾಂವ್ ಅಂತ ದಾರಿಹೋಕರನ್ನು ಸೆಳೆಯಲು ಯತ್ನಿಸಿದೆ. ಅದೃಷ್ಟವಶಾತ್ ಪ್ರತಿದಿನ ಮಾಶಾಗೆ ಹಾಲು ನೀಡುತ್ತಿದ್ದ ನೆರೆಯಾಕೆ ಇರ್ನಾ ಲಾವೋರಾ ಬೆಕ್ಕಿನ ಅರಚುವಿಕೆಯನ್ನು ಗಮನಿಸಿದ್ದಾರೆ. ಅನುಮಾನ ಬಂದು ಹತ್ತಿರ ಹೋಗಿ ನೋಡಿದಾಗ ಡಬ್ಬಿಯಲ್ಲಿ ಮಗು!
ಕೂಡಲೆ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. "ಮರಗಟ್ಟುವ ಚಳಿಯಲ್ಲಿ ಕೆಲವೇ ಗಂಟೆ ಮಾತ್ರ ಮಗು ಇದ್ದಿದ್ದರಿಂದ ಹೆಚ್ಚಿನ ಅಪಾಯವಾಗಿಲ್ಲ. ಮಗುವಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಇತ್ತು. ಥ್ಯಾಂಕ್ಸ್ ಟು ಮಾಶಾ" ಅಂತ ಆಸ್ಪತ್ರೆಯ ಸಿಬ್ಬಂದಿ ಹೇಳಿರುವುದಾಗಿ ಸೆಂಟ್ರಲ್ ಯುರೋಪಿಯನ್ ನ್ಯೂಸ್ ಪ್ರಕಟಿಸಿದೆ. ಇಂಥ ಪ್ರಾಣಿಗಳಿಗೆ ಪ್ರಶಸ್ತಿಗಳನೇನಾದರೂ ಕೊಡುತ್ತಾರಾ?

ಈ ಕುರಿತು ಮಾತಾಡಿರುವ ಇರ್ನಾ, "ಬೆಕ್ಕು ತುಂಬಾ ಫ್ರೆಂಡ್ಲಿ. ಬೆಕ್ಕು ಅರಚುವುದನ್ನು ಕೇಳಿದಾಗ, ಬೆಕ್ಕಿಗೇ ಏನೋ ಗಾಯವಾಗಿರಬಹುದು ಅಂದುಕೊಂಡಿದ್ದೆ. ಆದರೆ, ಮಗುವಿಗೆ ತಾಯ್ತನದ ಅಪ್ಪುಗೆ ನೀಡಿ, ಅದನ್ನು ಚಳಿಯಿಂದ ಕಾಪಾಡಿದ್ದು... ನಿಜಕ್ಕೂ... ಐ ಹ್ಯಾವ್ ನೋ ವರ್ಡ್ಸ್" ಎಂದಿದ್ದಾರೆ. [ಚೆನ್ನೈನಲ್ಲಿ ಅಗ್ನಿ ಶಿಶು, ವೈದ್ಯ ಲೋಕದ ಅಚ್ಚರಿ!]
ಮಗುವನ್ನೇನೋ ಆಸ್ಪತ್ರೆಯವರು ಆರೈಕೆ ಮಾಡಿ ಕಾಪಾಡಿರಬಹುದು. ಆದರೆ, ಆ ಮಗುವನ್ನು ಬಿಟ್ಟಿರಲು ಬೆಕ್ಕು ಮಾಶಾಗೆ ಸಾಧ್ಯವೆ? ಮಗುವನ್ನು ಆಸ್ಪತ್ರೆಗೆ ಸಾಗಿಸುವಾಗಮಾಶಾ ಕೂಡ ಆಂಬ್ಯುಲೆನ್ಸನ್ನು ಹಿಂಬಾಲಿಸಿದೆ. ಆಸ್ಪತ್ರೆ ತಲುಪುವುದು ಸಾಧ್ಯವಾಗದಿದ್ದರೂ, ಆಂಬ್ಯುಲೆನ್ಸ್ ಬರುವುದನ್ನು ಅನೇಕ ಗಂಟೆಗಳ ಕಾಲ ಕಾಯುತ್ತಲೇ ಇತ್ತು ಎಂದು ಅಕ್ಕಪಕ್ಕದವರು ಹೇಳಿದ್ದಾರೆ. ಮಗುವನ್ನು ಹೆತ್ತ ಆ ತಾಯಿ ಎಲ್ಲಿದ್ದಾಳೋ? [Photo and video courtesy : RUPTLYTV]
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications