ಸ್ಟೀಫನ್ ಹಾಕಿಂಗ್ ಲೇಖನಕ್ಕೆ ಮುಗಿಬಿದ್ದ ಜನ, ಕೇಂಬ್ರಿಡ್ಜ್ ವಿವಿ ವೆಬ್ಸೈಟ್ ಕ್ರಾಶ್
ಲಂಡನ್, ಅಕ್ಟೋಬರ್ 24: ಖ್ಯಾತ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಪಿಎಚ್ಡಿ ಸಿದ್ಧಾಂತ ಓದಲು ಜನರು ಮುಗಿಬಿದ್ದಿದ್ದರಿಂದ ಕೇಂಬ್ರಿಂಡ್ಜ್ ವಿಶ್ವವಿದ್ಯಾಲಯದ ವೆಬ್ಸೈಟ್ ಕ್ರಾಶ್ ಆಗಿತ್ತು. ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಇದೊಂದು ಪವಾಡವೇ ಸರಿ.
ಮೊದಲ ಬಾರಿಗೆ ಜಗದ್ವಿಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಪಿಎಚ್ಡಿ ಸಿದ್ಧಾಂತವನ್ನು ಉಚಿತವಾಗಿ ಓದಲು ಕೇಂಬ್ರಿಡ್ಜ್ ವಿವಿ ಅವಕಾಶ ಮಾಡಿಕೊಟ್ಟಿತ್ತು. 1966ರ 'ಪ್ರಾಪರ್ಟೀಸ್ ಆಫ್ ಎಕ್ಸ್ಪಾಂಡಿಂಗ್ ಯುನಿವರ್ಸಿಟಿ' ಸಿದ್ಧಾಂತವನ್ನು ಪಬ್ಲಿಕೇಶನ್ ವಿಭಾಗದಲ್ಲಿ ಮಧ್ಯರಾತ್ರಿ 12.01 ನಿಮಿಷಕ್ಕೆ ಓದಲು ಬಿಡಲಾಗಿತ್ತು.

ಉಚಿತವಾಗಿ ಓದಲು ಅವಕಾಶ ನೀಡಿದ್ದೇ ತಡ ಸಂಶೋಧಕರು, ವಿದ್ಯಾರ್ಥಿಗಳು, ವಿಜ್ಞಾನ ಆಸಕ್ತರು ಲೇಖನ ಓದಲು ಮುಗಿಬಿದ್ದಿದ್ದರು. ಹೀಗಾಗಿ ವಿಶ್ವದ ಪ್ರಖ್ಯಾತ ವಿವಿ ಕೇಂಬ್ರಿಡ್ಜ್ ವೆಬ್ಸೈಟ್ ಕ್ರಾಶ್ ಆಗಿತ್ತು. ಇಲ್ಲಿಯವರೆಗೆ 60,000ಕ್ಕೂ ಹೆಚ್ಚು ಜನರು ಅವರ ಸಿದ್ಧಾಂತಗಳನ್ನು ಓದಿದ್ದಾರೆ ಎಂದು ತಿಳಿದು ಬಂದಿದೆ.
ತಮ್ಮ ಲೇಖನಕ್ಕೆ ಅಧ್ಭುತ ಪ್ರತಿಕ್ರಿಯೆ ಬರುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಸ್ಟೀಫನ್ ಹಾಕಿಂಗ್, "ನನ್ನ ಸಂಶೋಧನೆಗಳು ಮಾತ್ರವಲ್ಲ ಎಲ್ಲಾ ಖ್ಯಾತರ ಸಂಶೋಧನೆಗಳನ್ನು ಉಚಿತವಾಗಿ ಓದಲು ಅವಕಾಶ ನೀಡಬೇಕು," ಎಂದು ಹೇಳಿದ್ದಾರೆ. ಅವರು ಅತ್ಯಂತ ಪ್ರಭಾವಿ ವೈಜ್ಞಾನಿಕ ಕೃತಿಗಳಲ್ಲಿ ಒಂದಾದ "ಎ ಬ್ರೀಫ್ ಹಿಸ್ಟರಿ ಆಫ್ ಟೈಮ್" ಅನ್ನೂ ಬರೆದಿದ್ದಾರೆ.
ಕೇಂಬ್ರಿಂಡ್ಜ್ ವಿವಿಯ ಗ್ರಂಥಾಲಯದಲ್ಲಿ 75ವರ್ಷದ ಸ್ಟೀಫನ್ ಹಾಕಿಂಗ್ ಸಿದ್ಧಾಂತಗಳಿಗೆ ಭಾರೀ ಬೇಡಿಕೆ ಇದೆ. ಈ ಹಿಂದೆ ಇವರ ಪಿಎಚ್ಡಿ ಲೇಖನ ಓದಲು 65 ಪೌಂಡ್ ಗಳನ್ನು ಕೇಂಬ್ರಿಂಡ್ಜ್ ಲೈಬ್ರರಿಗೆ ಪಾವತಿ ಮಾಡಬೇಕಾಗಿತ್ತು. ಇದೀಗ ಉಚಿತವಾಗಿ ಓದಲು ಅವಕಾಶ ನೀಡಲಾಗಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications