Get Updates
Get notified of breaking news, exclusive insights, and must-see stories!

ಕ್ಯಾಲಿಫೋರ್ನಿಯಾ: ಖಲಿಸ್ತಾನಿ ಉಗ್ರವಾದ ವಿರೋಧಿಸಿ ಭಾರತೀಯ-ಅಮೆರಿಕನ್ ಬೆಂಬಲಿಗರ ಪ್ರತಿಭಟನೆ

ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್‌ನ ಕಿಟಕಿಗಳನ್ನು ಖಾಲಿಸ್ತಾನ್ ಪರ ಪ್ರತಿಭಟನಾಕಾರರ ಗುಂಪು ಒಡೆದು ಹಾಕಿದ ಘಟನೆಯನ್ನು ವಿರೋಧಿಸಿ ಸ್ಥಳೀಯ ಕ್ಯಾಲಿಫೋರ್ನಿಯಾದ ಭಾರತೀಯರು ಪ್ರತಿಭಟನೆ ಮಾಡಿದರು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಖಲಿಸ್ತಾನಿ ಉಗ್ರವಾದದ ವಿರುದ್ಧ ಸ್ಥಳೀಯ ಕ್ಯಾಲಿಫೋರ್ನಿಯಾದ ಭಾರತೀಯರು ಒಂದಾಗಿ ಪ್ರತಿಭಟಿಸಿದ್ದಾರೆ.

ಮಾರ್ಚ್ 24 ರಂದು ಮಧ್ಯಾಹ್ನ 3 ಗಂಟೆಗೆ ಖಾಲಿಸ್ತಾನ್ ಉಗ್ರವಾದ ವಿರುದ್ಧ ಪ್ರತಿಭಟಿಸಲು ನೂರಾರು ಸ್ಥಳೀಯ ಕ್ಯಾಲಿಫೋರ್ನಿಯಾದ ಭಾರತೀಯ-ಅಮೆರಿಕನ್ ಬೆಂಬಲಿಗರು ಸ್ಯಾನ್ ಫ್ರಾನ್ಸಿಸ್ಕೋದ ಕಾನ್ಸುಲೇಟ್ ಕಾಂಪೌಂಡ್‌ನಲ್ಲಿ ಒಟ್ಟುಗೂಡುವ ಮೂಲಕ ಭಾರತದ ಏಕತೆ ಪ್ರದರ್ಶಿಸಿದ್ದಾರೆ. ಭಾರತದ ಪರವಾದ ಪ್ರತಿಭಟನೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿರುವುದು ಕಂಡು ಬಂದಿದೆ.

California: Indians protest against Khalistani extremism

ಮಾರ್ಚ್ 19, 2023 ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್‌ನ ಕಿಟಕಿಗಳನ್ನು ಖಾಲಿಸ್ತಾನ್ ಪರ ಪ್ರತಿಭಟನಾಕಾರರ ಗುಂಪು ಭಾಗಶಃ ಒಡೆದು ಹಾಕಿದ್ದರು. ಇದಾದ ಬಳಿಕ ವಲಸಿಗ ಭಾರತೀಯರು ಶುಕ್ರವಾರ ಭಾರತೀಯ ಕಾನ್ಸುಲೇಟ್ ಕಟ್ಟಡದ ಹೊರಗೆ ಜಮಾಯಿಸಿ ಹಿಂಸಾಚಾರದ ವಿರುದ್ಧ ಒಗ್ಗಟ್ಟಿನಿಂದ ತ್ರಿವರ್ಣ ಧ್ವಜದೊಂದಿಗೆ ಪ್ರತಿಭಟಿಸಿದರು. ವಂದೇ ಮಾತರಂ, ಭಾರತಮಾತೆಗೆ ಜೈ ಎಂದು ಘೋಷಣೆಗಳನ್ನು ಕೂಗಲಾಯಿತು. ಅನೇಕ ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು.

ಮಾರ್ಚ್ 24 ರಂದು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಭಾರತೀಯ ಬೆಂಬಲಿಗರು ಭಾರತೀಯ ಕಾನ್ಸುಲೇಟ್ ಕಚೇರಿ ಕಟ್ಟಡವನ್ನು ತಲುಪಿದಾಗ, ಈಗಾಗಲೇ ಟೆಂಟ್‌ನಲ್ಲಿ ಸಿದ್ಧರಾಗಿದ್ದ ಕೆಲವು ಖಲಿಸ್ತಾನ್ ಬೆಂಬಲಿಗರು ಪ್ರತ್ಯೇಕತಾವಾದಿ ಘೋಷಣೆಗಳು ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು. ಆದಾಗ್ಯೂ, ಭಾರತೀಯ ಬೆಂಬಲಿಗರು ಭಾರತ ಸರ್ಕಾರದ ಪರವಾಗಿ ಘೋಷಣೆಗಳನ್ನು ಮತ್ತು ದೇಶಭಕ್ತಿ ಗೀತೆಗಳನ್ನು ಡ್ರಮ್ ವಾದ್ಯಗಳೊಂದಿಗೆ ಧೈರ್ಯದಿಂದ ಹಾಡುವ ಮೂಲಕ ಉತ್ತರಿಸಿದರು.

ಭಾರತೀಯ ಬೆಂಬಲಿಗರು ಸುಮಾರು ಎರಡು ಗಂಟೆಗಳ ಕಾಲ ನಡೆದ ಪ್ರದರ್ಶನ ಮತ್ತು ವಾಗ್ಯುದ್ಧದಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿಗಳ ಮೇಲೆ ಮೇಲುಗೈ ಸಾಧಿಸಿದರು. ಭಾನುವಾರ ನಡೆದ ಹಿಂಸಾತ್ಮಕ ಘಟನೆಗಳ ಹಿನ್ನೆಲೆಯಲ್ಲಿ ಶುಕ್ರವಾರ ಇಂತಹ ಘಟನೆಗಳು ನಡೆಯದಂತೆ ಸ್ಥಳೀಯ ಪೊಲೀಸರನ್ನು ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

California: Indians protest against Khalistani extremism

ಖಲಿಸ್ತಾನ್ ಪ್ರತ್ಯೇಕತಾವಾದಿಗಳು ಕಾನ್ಸುಲೇಟ್ ಕಚೇರಿಯ ಗಾಜನ್ನು ಭಾಗಶಃ ಧ್ವಂಸಗೊಳಿಸಿದರು ಇದರ ಬೆನ್ನಲ್ಲೆ ಭಾನುವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತವನ್ನು ಬೆಂಬಲಿಸಿ ಹೆಚ್ಚಿನ ಸಂಖ್ಯೆಯ ಭಾರತೀಯ-ಅಮೆರಿಕನ್ ಸಮುದಾಯದ ಸದಸ್ಯರು ನಡೆಸಿದ ಶಾಂತಿ ರ್‍ಯಾಲಿಯಲ್ಲಿ, ಸ್ಯಾಕ್ರಮೆಂಟೊ ನಗರದ ರಾಘವ್, ಮನೋಹರ್, ವೆಂಕಟ್ ಮತ್ತು ಇತರ ಅನೇಕ ಸ್ಥಳೀಯ ವಲಸಿಗ ತೆಲುಗು ಜನರು ಭಾಗವಹಿಸಿದ್ದರು.

ಕಾನ್ಸುಲೇಟ್ ಜನರಲ್ ಟಿ.ವಿ. ನಾಗೇಂದ್ರ ಪ್ರಸಾದ್‌, ಕಾನ್ಸಲ್‌ ಅಕುನ್‌ ಸಬರ್‌ವಾಲ್‌, ಕಚೇರಿ ಸಿಬ್ಬಂದಿ ಬಾಬುರಾವ್‌ ಮತ್ತಿತರರನ್ನು ಭೇಟಿಯಾಗಿ ಒಗ್ಗಟ್ಟು ವ್ಯಕ್ತಪಡಿಸಿದರು. ಈ ಶಾಂತಿಯುತ ಪ್ರದರ್ಶನದಲ್ಲಿ "ಭಾರತೀಯತೆ" ಸ್ಪಷ್ಟವಾಗಿದೆ. ಇದರಲ್ಲಿ ಅನೇಕ ಭಾರತೀಯ ಮುಸ್ಲಿಮರು, ಸಿಖ್ಖರು ಮತ್ತು ಇತರ ವಲಸಿಗರು ಭಾಗವಹಿಸಿದ್ದರು.

ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸದಲ್ಲಿ ಭಾನುವಾರದ ವಿಧ್ವಂಸಕ ಕೃತ್ಯದ ಹಿನ್ನೆಲೆಯಲ್ಲಿ, ಉತ್ತರ ಭಾರತದ ಪಂಜಾಬ್ ರಾಜ್ಯದಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿ ನಾಯಕ ಅಮೃತಪಾಲ್ ಸಿಂಗ್‌ಗಾಗಿ ಪೊಲೀಸರು ಬೃಹತ್ ಬೇಟೆಯನ್ನು ಪ್ರಾರಂಭಿಸಿದ್ದಾರೆ. ಇಂತಹ ವಿಧ್ವಂಸಕ ಕೃತ್ಯಗಳು ಪುನರಾವರ್ತನೆಯಾಗದಂತೆ ಸೂಕ್ತ ಕ್ರಮತೆಗೆದುಕೊಳ್ಳುವಂತೆ ಭಾರತ ಪರವಾದ ಪ್ರದರ್ಶನದಲ್ಲಿ ಭಾಗವಹಿಸಿದ್ದ ವಲಸಿಗ ಭಾರತೀಯರು ಸ್ಥಳೀಯ ಯುಎಸ್ ಸರ್ಕಾರವನ್ನು ಒತ್ತಾಯಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+