Syrian Civil War: ಅರಮನೆಗೆ ನುಗ್ಗಿದ ವಿರೋಧಿಗಳು, ಸಿರಿಯಾ ಬಿಟ್ಟು ಓಡಿ ಹೋದ ಅಧ್ಯಕ್ಷ!
ಸಿರಿಯಾ ಪರಿಸ್ಥಿತಿ ಹೀನಾಯ ಸ್ಥಿತಿಗೆ ತಲುಪಿದೆ, ಒಂದು ಕಡೆ ಆಂತರಿಕ ಕಲಹದ ಕಾರಣಕ್ಕೆ ಕಳೆದ 13 ವರ್ಷಗಳಿಂದ ನರಳಿತ್ತು ಸಿರಿಯಾ. ಆದರೆ ಇದೀಗ ನಾಗರಿಕ ಯುದ್ಧಕ್ಕೆ ಅಂತ್ಯವನ್ನ ಹಾಡಿದ್ದರೂ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗಿದೆ, ಅದರಲ್ಲೂ ಸಿರಿಯಾ ರಾಜಧಾನಿ ಕಡೆಗೆ ನುಗ್ಗಿ ನುಗ್ಗಿ ಬರುತ್ತಿರುವ ಬಂಡುಕೋರರ ಪಡೆ ಹಿಂಸಾಚಾರ ಜೋರು ಮಾಡಿದೆ. ಹೀಗಾಗಿ, ಇಡೀ ಸಿರಿಯಾ & ಪ್ರಮುಖವಾಗಿ ಸಿರಿಯಾ ರಾಜಧಾನಿ ಧಗಧಗ ಹೊತ್ತಿ ಉರಿಯುತ್ತಿದೆ. ಈ ಸಮಯದಲ್ಲೇ ರಷ್ಯಾ ಕೂಡ ಸ್ಫೋಟಕ ಸತ್ಯ ಹಂಚಿಕೊಂಡಿದೆ.
ಹೌದು, 2011ರ ಸಮಯದಲ್ಲಿ ಶುರುವಾಗಿದ್ದ ಸಿರಿಯಾ ಆಂತರಿಕ ದಂಗೆ ಇದೀಗ ಕೊನೆಗೂ ಮುಕ್ತಾಯದ ಹಂತಕ್ಕೆ ಬಂದಿದೆ. ಸಿರಿಯಾ ಅಧ್ಯಕ್ಷ ದೇಶವನ್ನೇ ಬಿಟ್ಟು ಓಡಿ ಹೋಗಿದ್ದಾರೆ. ಹೀಗಿದ್ದಾಗ ದಂಗೆಕೋರರು ನೇರವಾಗಿ ಸಿರಿಯಾ ಒಳಗೆ ನುಗ್ಗಿದ್ದು, ಸಿರಿಯಾ ರಾಜಧಾನಿಯನ್ನ ತಮ್ಮ ವಶಕ್ಕೆ ಪಡೆದಿದ್ದಾರೆ ದಂಗೆಕೋರರು. ಅತ್ತ, ಸಿರಿಯಾ ಅಧ್ಯಕ್ಷರು ರಷ್ಯಾ ದೇಶಕ್ಕೆ ಓಡಿ ಹೋಗಿದ್ದರೆ ಮತ್ತೊಂದು ಕಡೆ ಸಿರಿಯಾ ಅಧ್ಯಕ್ಷರ ಅರಮನೆಗೆ ದಂಗೆಕೋರರು ನುಗ್ಗಿ, ದರೋಡೆ ಶುರು ಮಾಡಿದ್ದಾರೆ.

ಅರಮನೆಗೆ ನುಗ್ಗಿದ ದಂಗೆಕೋರರಿಂದ ಲೂಟಿ
ಸಿರಿಯಾ ದೇಶದ ರಾಜಧಾನಿ ಡಮಾಸ್ಕಸ್ ಪ್ರದೇಶದಲ್ಲಿ ಸಿರಿಯಾ ಅಧ್ಯಕ್ಷ ಅಸಾದ್ ಅವರಿಗೆ ಸೇರಿದ ಭವ್ಯ ಅರಮನೆ ಇದ್ದು, ಇದೇ ಅರಮನೆ ಮೇಲೆ ಇದೀಗ ಲಕ್ಷಾಂತರ ದಂಗೆಕೋರರ ಕಣ್ಣು ಬಿದ್ದಿದೆ. ಹೀಗಾಗಿ, ಅವರೆಲ್ಲಾ ಸಿರಿಯಾ ದೇಶದ ರಾಜಧಾನಿ ಡಮಾಸ್ಕಸ್ ಪ್ರದೇಶಕ್ಕೆ ನುಗ್ಗಿದ್ದಾರೆ. ಅಲ್ಲದೆ ಅಸಾದ್ ಅರಮನೆಯನ್ನ ಲೂಟಿ ಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ & ಫೋಟೋಗಳು ಫುಲ್ ವೈರಲ್ ಆಗುತ್ತಿವೆ. ಅಲ್ಲದೆ ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಕೂಡ ನಡೆಯುತ್ತಿದೆ.
ಇಸ್ರೇಲ್ ಮಿಲಿಟರಿಯಿಂದ ಭರ್ಜರಿ ಅಟ್ಯಾಕ್!
ಸಿರಿಯಾ ಮೇಲೆ ದಿಢೀರ್ ಇಸ್ರೇಲ್ ಘೋರ ದಾಳಿ ಆರಂಭ ಮಾಡಿದೆ. ಯಾಕಂದ್ರೆ ಒಂದು ಕಡೆ ಸಿರಿಯಾ ಅಧ್ಯಕ್ಷ ಸ್ಥಾನ ಬಿಟ್ಟು & ದೇಶವನ್ನೇ ಬಿಟ್ಟು ಅಸ್ಸಾದ್ ಎಸ್ಕೇಪ್ ಆಗಿದ್ದು, ಹೀಗಿದ್ದಾಗ ದಂಗೆಕೋರರು ಸಿರಿಯಾ ರಾಜಧಾನಿಗೆ ನುಗ್ಗಿ ಅಧಿಕಾರ ತಮ್ಮ ಕೈಗೆ ತೆಗೆದುಕೊಂಡಿದ್ದಾರೆ. ಈ ಸಮಯದಲ್ಲೇ ಇಸ್ರೇಲ್ ಕೂಡ ಎದ್ದು ಕೂತಿದ್ದು, ಸಿರಿಯಾ ನೆಲದ ಮೇಲೆ ದಾಳಿ ಮಾಡುತ್ತಾ ಸಿರಿಯಾ ನೆಲವನ್ನು ಇಸ್ರೇಲ್ ತನ್ನ ವಶಕ್ಕೆ ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ.
1974ರ ಕದನ ವಿರಾಮ ಒಪ್ಪಂದ ಉಲ್ಲಂಘನೆ?
ಗೋಲನ್ ಹೈಟ್ಸ್ ಎಂಬ ಪ್ರದೇಶ ಸಿರಿಯಾ ಸೇನೆಯ ಹಿಡಿತದಲ್ಲಿ ಇತ್ತು. ಇದೀಗ ಇಸ್ರೇಲ್ನ ಸೇನೆ ಈ ಭಾಗಕ್ಕೆ ನುಗ್ಗಿ 'ಗೋಲನ್ ಹೈಟ್ಸ್' ಪ್ರದೇಶವನ್ನು ತನ್ನ ವಶಕ್ಕೆ ಪಡೆದಿದೆ ಅಂತಾ ಮಾಹಿತಿ ಹರಿದಾಡುತ್ತಿದೆ. ಇದಿಷ್ಟೇ ಅಲ್ಲದೆ ಇನ್ನಷ್ಟು ಸಿರಿಯಾ ನಿಯಂತ್ರಿತ ಭಾಗಗಳು ಈಗ ಇಸ್ರೇಲ್ ಮಿಲಿಟರಿ ವಶಕ್ಕೆ ಸಿಗುತ್ತಿವೆ. ಈ ಭಾಗದಲ್ಲಿ ಭಾರಿ ಘೋರ ದಾಳಿ ನಡೆಯುವ ಆತಂಕ ಆವರಿಸಿದೆ. 1974ರ ಕದನ ವಿರಾಮ ಒಪ್ಪಂದದ ಪ್ರಕಾರ 'ಗೋಲನ್ ಹೈಟ್ಸ್' ಪ್ರದೇಶವನ್ನು ಬಫರ್ ಝೋನ್ ಎಂದು ಪರಿಗಣಿಸಲಾಗಿತ್ತು. ಆದರೆ, ಇದೀಗ ಈ ಪ್ರದೇಶಕ್ಕೆ ನುಗ್ಗಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶ ನೀಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications