ಗುಂಡಿಗೆ ಎದೆಕೊಡುವ ಮುನ್ನ ಕೊನೆ ಆಸೆ ತೀರಿಸಿಕೊಂಡ
ಕ್ಯಾನ್ಬೆರಾ, ಏ 29 : ನೇಣುಗಂಬದ ಹಗ್ಗ ಜಗ್ಗುವುದಕ್ಕೆ ಮುಂಚೆ "ನಿನ್ನ ಕೊನೆಯ ಆಸೆ ಏನು?" ಎಂದು ಅವರನ್ನು ಕೇಳುವುದುಂಟು. ನನ್ನ ತಾಯಿ, ತಂದೆಯನ್ನು ನೋಡಬೇಕೆಂದೋ, ಒಂದು ಲೋಟ ಹಾಲು ಕುಡಿಯಬೇಕೆಂದೋ ಅಥವಾ ಚಿಕನ್ ಬಿರಿಯಾನಿ ತಿನ್ನಬೇಕೆಂದೋ.. ಏನೋ ಒಂದು ಆಸೆಯನ್ನು ಆತ/ಅವಳು ಹೇಳುವುದುಂಟು.
ಆದರೆ, ಈ ಆಸಾಮಿಗೆ ಅಂಥ ಯಾವ ಆಸೆಯೂ ಇದ್ದಂತೆ ಕಾಣುವುದಿಲ್ಲ. ಯಾಕಂದರೆ ಸಾಯುವ ಮೂರು ದಿನಕ್ಕೆ ಮುಂಚೆ ತನ್ನ ಕೊನೆ ಆಸೆಯನ್ನು ಈಡೇರಿಸಿಕೊಂಡಿದ್ದಾನೆ. ಅವನ ಹೆಸರು ಆಂಡ್ರ್ಯೂ ಚಾನ್. 400 ಕೋಟಿ ರೂಪಯ್ಯ ಬೆಲೆಬಾಳುವ 8.2 ಕಿಲೋ ಹೆರಾಯಿನ್ ಅನ್ನು ಇಂಡೋನೇಷಿಯಾಗೆ ಕಳ್ಳಸಾಗಣೆ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದ.

ಆ ಘಟನೆ ನಡೆದದ್ದು 2005 ಇಸವಿಯಲ್ಲಿ. ಆನಂತರ ನ್ಯಾಯಾಲಯದಲ್ಲಿ ಸಾಕಷ್ಟು ವಿಚಾರಣೆಗಳು ನಡೆದು ಅಂತಿಮವಾಗಿ ಚಾನ್ (31) ಅಪರಾಧಿ ಎಂದು ಸಾಬೀತಾಯಿತು. ಅವನಿಗೆ ಮರಣದಂಡನೆ ವಿಧಿಸಲಾಗಿದೆ. ಸಾವು ಆತನನ್ನು ಕೈಬೀಸಿ ಕರೆಯುತ್ತಿದೆ. ಮರಣದಂಡನೆಗೆ ಗುರಿಯಾಗಿರುವವರನ್ನು ಇಂಡೋನೇಷಿಯದಲ್ಲಿ ಗುಂಡಿಟ್ಟು ಕೊಲ್ಲಲಾಗುತ್ತದೆ.
ಅದು ಹಾಗಿರಲಿ. ಚಾನ್ ಕೊನೆಯ ಆಸೆ ಅದೇನೋ ಗೊತ್ತಿಲ್ಲ. ಆದರೆ, ಮೊನ್ನೆ ಸೋಮವಾರ ಮದುವೆಯಾದ. ತನ್ನ ದೀರ್ಘಕಾಲದ ಪ್ರೇಯಸಿ ಫೆಬ್ಯಂತಿ ಹೆರೆವಿಲಳನ್ನು ವರಿಸಿದ. ಆಪ್ತ ಸ್ನೇಹಿತರು, ನೆಂಟರಿಷ್ಟರು ಭಾಗವಹಿಸಿದ್ದ ಮದುವೆ ಬಂದೀಖಾನೆಯಲ್ಲಿ ಸಂತಸದಿಂದ ನೆರವೇರಿತು ಅಂತ ಚಾನ್ ನ ಸಹೋದರ ಮೈಖೇಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದನು.

ಚಾನ್ ನನ್ನು ಇಂಡೋನೇಷಿಯಾದ ನುಸಕಂಬಂಗನ್ ದ್ವೀಪದಲ್ಲಿರುವ ಬೇಸಿ ಕಾರಾಗೃಹದಲ್ಲಿ ಇಡಲಾಗಿದೆ. ಮಾದಕ ವಸ್ತು ಕಳ್ಳಸಾಗಣೆಯಲ್ಲಿ ಅಪರಾಧಿಯಾಗಿರುವ ಮಯೂರನ್ ಸುಕುಮಾರನ್ ಅಲ್ಲದೆ ನಾನಾ ಬಗೆಯ ಅಪರಾಧ ಎಸಗಿ ಮರಣದಂಡನೆಗೆ ಗುರಿಯಾಗಿರುವ ಇತರ ಎಂಟು ಜೈಲುವಾಸಿಗಳ ಜತೆ ಚಾನ್ ಕೂಡ ಸಾವಿಗೆ ಸಿದ್ಧನಾಗಿದ್ದಾನೆ. ಎಬಿಸಿ ವಾರ್ತಾ ಸಂಸ್ಥೆಯ ಪ್ರಕಾರ, ಈ ಒಂಬತ್ತು ಮಂದಿಯನ್ನು ಈ ವಾರದಲ್ಲಿ ಯಾವತ್ತೋ ಒಂದು ದಿನ ಮುಗಿಸಲಾಗುತ್ತದೆ ಎಂದು ಈ ಸುದ್ದಿ ಬರೆಯುವ ಹೊತ್ತಿಗೆ, ಅರೆ, ಚಾನ್ ಇನ್ನಿಲ್ಲ!
ಆಸ್ಟ್ರೇಲಿಯಾದಿಂದ ಮಾದಕ ವಸ್ತು ಕಳ್ಳ ಸಾಗಾಣೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಕಳ್ಳಸಾಗಾಣಿಕೆದಾರರನ್ನು ನಡೆಸಿಕೊಳ್ಳುವ ಇಂಡೋನೇಷ್ಯಾದ ರೀತಿನೀತಿ ಬಗ್ಗೆ ಆಸ್ಟ್ರೇಲಿಯಾ ಅಸಮಾಧಾನಗೊಂಡಿದೆ. ಹೀಗಾಗಿ ಈ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿಕೊಂಡಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications