ಗುಂಡಿಗೆ ಎದೆಕೊಡುವ ಮುನ್ನ ಕೊನೆ ಆಸೆ ತೀರಿಸಿಕೊಂಡ
ಕ್ಯಾನ್ಬೆರಾ, ಏ 29 : ನೇಣುಗಂಬದ ಹಗ್ಗ ಜಗ್ಗುವುದಕ್ಕೆ ಮುಂಚೆ "ನಿನ್ನ ಕೊನೆಯ ಆಸೆ ಏನು?" ಎಂದು ಅವರನ್ನು ಕೇಳುವುದುಂಟು. ನನ್ನ ತಾಯಿ, ತಂದೆಯನ್ನು ನೋಡಬೇಕೆಂದೋ, ಒಂದು ಲೋಟ ಹಾಲು ಕುಡಿಯಬೇಕೆಂದೋ ಅಥವಾ ಚಿಕನ್ ಬಿರಿಯಾನಿ ತಿನ್ನಬೇಕೆಂದೋ.. ಏನೋ ಒಂದು ಆಸೆಯನ್ನು ಆತ/ಅವಳು ಹೇಳುವುದುಂಟು.
ಆದರೆ, ಈ ಆಸಾಮಿಗೆ ಅಂಥ ಯಾವ ಆಸೆಯೂ ಇದ್ದಂತೆ ಕಾಣುವುದಿಲ್ಲ. ಯಾಕಂದರೆ ಸಾಯುವ ಮೂರು ದಿನಕ್ಕೆ ಮುಂಚೆ ತನ್ನ ಕೊನೆ ಆಸೆಯನ್ನು ಈಡೇರಿಸಿಕೊಂಡಿದ್ದಾನೆ. ಅವನ ಹೆಸರು ಆಂಡ್ರ್ಯೂ ಚಾನ್. 400 ಕೋಟಿ ರೂಪಯ್ಯ ಬೆಲೆಬಾಳುವ 8.2 ಕಿಲೋ ಹೆರಾಯಿನ್ ಅನ್ನು ಇಂಡೋನೇಷಿಯಾಗೆ ಕಳ್ಳಸಾಗಣೆ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದ.

ಆ ಘಟನೆ ನಡೆದದ್ದು 2005 ಇಸವಿಯಲ್ಲಿ. ಆನಂತರ ನ್ಯಾಯಾಲಯದಲ್ಲಿ ಸಾಕಷ್ಟು ವಿಚಾರಣೆಗಳು ನಡೆದು ಅಂತಿಮವಾಗಿ ಚಾನ್ (31) ಅಪರಾಧಿ ಎಂದು ಸಾಬೀತಾಯಿತು. ಅವನಿಗೆ ಮರಣದಂಡನೆ ವಿಧಿಸಲಾಗಿದೆ. ಸಾವು ಆತನನ್ನು ಕೈಬೀಸಿ ಕರೆಯುತ್ತಿದೆ. ಮರಣದಂಡನೆಗೆ ಗುರಿಯಾಗಿರುವವರನ್ನು ಇಂಡೋನೇಷಿಯದಲ್ಲಿ ಗುಂಡಿಟ್ಟು ಕೊಲ್ಲಲಾಗುತ್ತದೆ.
ಅದು ಹಾಗಿರಲಿ. ಚಾನ್ ಕೊನೆಯ ಆಸೆ ಅದೇನೋ ಗೊತ್ತಿಲ್ಲ. ಆದರೆ, ಮೊನ್ನೆ ಸೋಮವಾರ ಮದುವೆಯಾದ. ತನ್ನ ದೀರ್ಘಕಾಲದ ಪ್ರೇಯಸಿ ಫೆಬ್ಯಂತಿ ಹೆರೆವಿಲಳನ್ನು ವರಿಸಿದ. ಆಪ್ತ ಸ್ನೇಹಿತರು, ನೆಂಟರಿಷ್ಟರು ಭಾಗವಹಿಸಿದ್ದ ಮದುವೆ ಬಂದೀಖಾನೆಯಲ್ಲಿ ಸಂತಸದಿಂದ ನೆರವೇರಿತು ಅಂತ ಚಾನ್ ನ ಸಹೋದರ ಮೈಖೇಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದನು.

ಚಾನ್ ನನ್ನು ಇಂಡೋನೇಷಿಯಾದ ನುಸಕಂಬಂಗನ್ ದ್ವೀಪದಲ್ಲಿರುವ ಬೇಸಿ ಕಾರಾಗೃಹದಲ್ಲಿ ಇಡಲಾಗಿದೆ. ಮಾದಕ ವಸ್ತು ಕಳ್ಳಸಾಗಣೆಯಲ್ಲಿ ಅಪರಾಧಿಯಾಗಿರುವ ಮಯೂರನ್ ಸುಕುಮಾರನ್ ಅಲ್ಲದೆ ನಾನಾ ಬಗೆಯ ಅಪರಾಧ ಎಸಗಿ ಮರಣದಂಡನೆಗೆ ಗುರಿಯಾಗಿರುವ ಇತರ ಎಂಟು ಜೈಲುವಾಸಿಗಳ ಜತೆ ಚಾನ್ ಕೂಡ ಸಾವಿಗೆ ಸಿದ್ಧನಾಗಿದ್ದಾನೆ. ಎಬಿಸಿ ವಾರ್ತಾ ಸಂಸ್ಥೆಯ ಪ್ರಕಾರ, ಈ ಒಂಬತ್ತು ಮಂದಿಯನ್ನು ಈ ವಾರದಲ್ಲಿ ಯಾವತ್ತೋ ಒಂದು ದಿನ ಮುಗಿಸಲಾಗುತ್ತದೆ ಎಂದು ಈ ಸುದ್ದಿ ಬರೆಯುವ ಹೊತ್ತಿಗೆ, ಅರೆ, ಚಾನ್ ಇನ್ನಿಲ್ಲ!
ಆಸ್ಟ್ರೇಲಿಯಾದಿಂದ ಮಾದಕ ವಸ್ತು ಕಳ್ಳ ಸಾಗಾಣೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಕಳ್ಳಸಾಗಾಣಿಕೆದಾರರನ್ನು ನಡೆಸಿಕೊಳ್ಳುವ ಇಂಡೋನೇಷ್ಯಾದ ರೀತಿನೀತಿ ಬಗ್ಗೆ ಆಸ್ಟ್ರೇಲಿಯಾ ಅಸಮಾಧಾನಗೊಂಡಿದೆ. ಹೀಗಾಗಿ ಈ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿಕೊಂಡಿದೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications