ವಿಶ್ವದ ಮೊದಲ ಕೇಸ್: ಆಸ್ಟ್ರೇಲಿಯಾ ರೋಗಿಯ ಮೆದುಳಿನಲ್ಲಿ ಜೀವಂತ ಹುಳ ಪತ್ತೆ: ಸ್ಕ್ಯಾನ್ ಕಂಡು ವೈದ್ಯರು ಶಾಕ್!
ಆಸ್ಟ್ರೇಲಿಯದಲ್ಲಿ ವಿಚಿತ್ರ ಘಟನೆಯೊಂದು ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸಿದೆ. ರೋಗಿಯ ಮೆದುಳಿನಲ್ಲಿ 8 ಸೆಂಟಿಮೀಟರ್ ಅಳತೆಯ ಜೀವಂತ ಹುಳವೊಂದು ಹರಿದಾಡುತ್ತಿರುವುದು ಕಂಡುಬಂದಿದೆ.
ರೋಗಿಯು ಆಗ್ನೇಯ ನ್ಯೂ ಸೌತ್ ವೇಲ್ಸ್ನ 64 ವರ್ಷದ ಮಹಿಳೆ. ಮೂರು ವಾರಗಳ ಹೊಟ್ಟೆ ನೋವು ಮತ್ತು ಅತಿಸಾರದಿಂದ ಬಳಲುತ್ತಿದ್ದ ಮಹಿಳೆ 2021ರ ಜನವರಿ ಅಂತ್ಯದಲ್ಲಿ ತನ್ನ ಸ್ಥಳೀಯ ಆಸ್ಪತ್ರೆಗೆ ಮೊದಲ ಬಾರಿಗೆ ದಾಖಲಾಗಿದ್ದರು. ಈ ವೇಳೆ ಇವರಿಗೆ ನಿರಂತರ ಒಣ ಕೆಮ್ಮು, ಜ್ವರ ಮತ್ತು ರಾತ್ರಿ ಬೆವರುವಿಕೆ ಕೂಡ ಇತ್ತು.

2022ರ ಹೊತ್ತಿಗೆ ಆಕೆಯ ರೋಗಲಕ್ಷಣಗಳು ಮರೆವು ಮತ್ತು ಖಿನ್ನತೆಯನ್ನು ಹೆಚ್ಚಿಸಿದವು. ಈ ವೇಳೆ ಇವರನ್ನು ಕ್ಯಾನ್ಬೆರಾ ಆಸ್ಪತ್ರೆಯಲ್ಲಿ ಮೆದುಳಿನ MRI ಸ್ಕ್ಯಾನ್ ಗೆ ಸೂಚಿಸಲಾಯಿತು. ಆದರೆ MRI ಸ್ಕ್ಯಾನ್ ವೀಕ್ಷಿಸಿದ ವೈದ್ಯರು ಧಂಗಾಗಿ ಹೋಗಿದ್ದಾರೆ. ಸ್ಕ್ಯಾನ್ ಪ್ರತಿಯಲ್ಲಿ ಮೆದುಳಿನಲ್ಲಿ ಯಾವುದೋ ಒಂದು ಸಣ್ಣ ಹುಳು ಇರುವುದು ಪತ್ತೆಯಾಗಿದೆ. ಅದು ಜೀವಂತವಾಗಿರುವುದನ್ನು ಕಂಡ ವೈದ್ಯರು ಗಾಬರಿಗೊಂಡಿದ್ದಾರೆ.
ಈ ಬಗ್ಗೆ ಕ್ಯಾನ್ಬೆರಾ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ವೈದ್ಯ ಡಾ. ಸಂಜಯ ಸೇನಾನಾಯಕ್ ಮಾಹಿತಿ ನೀಡಿದ್ದಾರೆ. 'ನಾನು ಸ್ಕ್ಯಾನ್ನಿಂಗ್ನಲ್ಲಿ ಹುಳವನ್ನು ನೋಡುತ್ತೇನೆ ಎಂದು ಭಾವಿಸಿರಲಿಲ್ಲ. ಈ ರೀತಿಯ ಪ್ರಕರಣ ನನ್ನ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಕಂಡುಬಂದಿದೆ. ಈ ನಿರೀಕ್ಷೆಯೇ ನನಗೆ ಇರಲಿಲ್ಲ' ಎಂದು ಅವರು ಹೇಳಿದರು.
ಈ ಹುಳು ಒಫಿಡಾಸ್ಕರಿಸ್ ರಾಬರ್ಟ್ಸಿ ನೆಮಟೋಡ್ ಜಾತಿಗೆ ಸೇರಿದ ಮೂರನೇ ಹಂತದ ಲಾರ್ವಾ ಎಂದು ಗುರುತಿಸಲ್ಪಟ್ಟಿದೆ. ಈ ಪ್ರಕರಣ ವೈದ್ಯಕೀಯ ಇತಿಹಾಸದಲ್ಲಿ ಒಂದು ವಿಶಿಷ್ಟ ಘಟನೆಯಾಗಿದೆ. ಈ ಘಟನೆಯನ್ನು ಎಮರ್ಜಿಂಗ್ ಇನ್ಫೆಕ್ಷಿಯಸ್ ಡಿಸೀಸ್ ಜರ್ನಲ್ ನಲ್ಲಿ ದಾಖಲಿಸಲಾಗಿದೆ. ಸಾಮಾನ್ಯವಾಗಿ ಈ ಹುಳು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನ ಸ್ಥಳೀಯ ಕಾರ್ಪೆಟ್ ಹೆಬ್ಬಾವುಗಳ ಜಠರಗರುಳಿನ ವ್ಯವಸ್ಥೆಗಳಲ್ಲಿ ವಾಸಿಸುತ್ತದೆ.
"ಕ್ಯಾನ್ಬೆರಾ ಒಂದು ಸಣ್ಣ ಸ್ಥಳವಾಗಿದೆ. ಆದ್ದರಿಂದ ನಾವು ಇನ್ನೂ ಜೀವಂತವಾಗಿರುವ ಹುಳು ಬಗ್ಗೆ ತಿಳಿಯಲು ಬಹಳ ಅನುಭವಿ ಸಿಎಸ್ಐಆರ್ಒ ವಿಜ್ಞಾನಿಗಳ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ" ಎಂದು ಡಾ.ಸೇನಾನಾಯಕೆ ಹೇಳಿದರು. 'ಅವರು ಅದನ್ನು ನೋಡಿ, ಇದು ಓಫಿಡಾಸ್ಕರಿಸ್ ರಾಬರ್ಟ್ಸಿ' ಎಂದು ಹೇಳಿದ್ದಾರೆ.
ಆಕೆಯ ಪ್ರಕರಣದಲ್ಲಿ ತೊಡಗಿರುವ ಸಂಶೋಧಕರು ಹೆಬ್ಬಾವು ತನ್ನ ಮಲದ ಮೂಲಕ ಹುಲ್ಲಿನ ಮೇಲೆ ಈ ಹುಳುವನ್ನು ಹೊರಹಾಕಿರಬಹುದು ಎಂಬ ಹೇಳಿದ್ದಾರೆ. ಆ ಹುಲ್ಲಿನ ಸಂಪರ್ಕಕ್ಕೆ ಬರುವ ಮೂಲಕ ರೋಗಿಯು ಆಹಾರ ಅಥವಾ ಅಡಿಗೆ ಪಾತ್ರೆಗಳಿಂದಾಗಿ ಅಥವಾ ಆ ಸ್ಥಳದಲ್ಲಿ ಬೆಳೆ ದಹಸಿರು ತರಕಾರಿ ಸೇವಿಸುವಾಗ ಅದನ್ನು ಸೇವಿಸಿರಬಹುದು ಎಂದು ಶಂಕಿಸಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications