ಕೋವಿಡ್-19 ನಿಯಮಗಳ ಉಲ್ಲಂಘನೆ: ಕೆಲಸದಿಂದ ವಜಾಗೊಂಡ ಸೇನೆಯ ಮುಖ್ಯಸ್ಥ
ವಿಶ್ವದಾದ್ಯಂತ ಇಲ್ಲಿಯವರೆಗೂ 7,199,306 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈವರೆಗೂ 35,36,274 ಮಂದಿ ಕೊರೊನಾ ವೈರಸ್ ವಿರುದ್ಧ ಹೋರಾಡಿ ಸಂಪೂರ್ಣವಾಗಿ ಗುಣಮುಖರಾಗಿದ್ದರೆ, 408,734 ಮಂದಿ ಕೋವಿಡ್-19 ಗೆ ಬಲಿಯಾಗಿದ್ದಾರೆ.
ಜಗತ್ತಿನಾದ್ಯಂತ ಸದ್ಯ 32,54,298 ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಪೈಕಿ 53,797 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಇನ್ನು, ಏಷ್ಯಾದಲ್ಲಿರುವ ಆರ್ಮೇನಿಯ ಎಂಬ ರಾಷ್ಟ್ರದ ಪರಿಸ್ಥಿತಿ ನೋಡಿದ್ರೆ.. ಅಲ್ಲಿ ಈವರೆಗೂ 13,325 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈಗಾಗಲೇ 4,099 ಮಂದಿ ಗುಣಮುಖರಾಗಿದ್ದರೆ, 211 ಮಂದಿ ಮೃತಪಟ್ಟಿದ್ದಾರೆ.
ಹೀಗಿರುವಾಗಲೇ, ಕೋವಿಡ್-19 ತಡೆಗಟ್ಟಲು ರೂಪಿಸಲಾಗಿರುವ ನಿಯಮಗಳನ್ನು ಗಾಳಿಗೆ ತೂರಿದರು ಎಂಬ ಕಾರಣಕ್ಕೆ ಆರ್ಮೇನಿಯದ ಆರ್ಮಿ ಮುಖ್ಯಸ್ಥ, ಪೊಲೀಸ್ ಮತ್ತು ಸೆಕ್ಯೂರಿಟಿ ಚೀಫ್ ಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಕೆಲಸದಿಂದ ವಜಾಗೊಳಿಸಿದ ಪ್ರಧಾನಿ
ಆರ್ಮಿ, ಪೊಲೀಸ್ ಮತ್ತು ರಾಷ್ಟ್ರೀಯ ಭದ್ರತಾ ಸೇವೆಯ ಮುಖ್ಯಸ್ಥರನ್ನು ಆರ್ಮೇನಿಯದ ಪ್ರಧಾನ ಮಂತ್ರಿ ನಿಕೋಲ್ ಪಶಿನಿಯನ್ ಕೆಲಸದಿಂದ ವಜಾಗೊಳಿಸಿದ್ದಾರೆ.

ಪಾರ್ಟಿ ಆಯೋಜನೆ
ಆರ್ಮಿ, ಪೊಲೀಸ್ ಮತ್ತು ರಾಷ್ಟ್ರೀಯ ಭದ್ರತಾ ಸೇವೆಯ ಮುಖ್ಯಸ್ಥರನ್ನು ಕೆಲಸದಿಂದ ವಜಾಗೊಳಿಸಿದ್ದಕ್ಕೆ ಆರ್ಮೇನಿಯದ ಪ್ರಧಾನಿ ಕಾರಣ ನೀಡಿಲ್ಲ. ಆದರೆ, ಪತ್ರಿಕೆಯೊಂದರ ಪ್ರಕಾರ, ಸೇನೆಯ ಮುಖ್ಯಸ್ಥ ಅರ್ತಕ್ ದಾವ್ತ್ಯನ್ ಕಳೆದ ಭಾನುವಾರ ಮಗನ ಮದುವೆಗಾಗಿ ಪಾರ್ಟಿ ಆಯೋಜಿಸಿದ್ದರು. ಆ ಸಮಯದಲ್ಲಿ ನೂರಾರು ಜನ ಸೇರಿದ್ದರು.
ಆರ್ಮೇನಿಯದಲ್ಲಿ ಕೋವಿಡ್-19 ತಡೆಗಟ್ಟಲು ರೂಪಿಸಿರುವ ನಿಯಮಗಳ ಅನ್ವಯ, ಒಂದೇ ಕಡೆ ಹೆಚ್ಚು ಜನ ಸೇರುವಂತಿಲ್ಲ.

ಜನರಿಗೆ ಉದಾಹರಣೆಯಾಗಬೇಕಿತ್ತು.!
''ಉನ್ನತ ದರ್ಜೆಯ ಅಧಿಕಾರಿಗಳು ಜನರಿಗೆ ಉದಾಹರಣೆಯಾಗಿರಬೇಕು. ಸಾಂಕ್ರಾಮಿಕ ರೋಗ ವಿರೋಧಿ ನಿಯಮಗಳನ್ನು ಅನುಸರಿಸುವ ಪ್ರಾಮುಖ್ಯತೆ ತೋರಿಸಬೇಕು. ಆದ್ರೆ, ಇದಕ್ಕೆ ವಿರುದ್ಧದ ಘಟನೆ ನಡೆದಿದೆ'' ಎಂದು ಆರ್ಮೇನಿಯದ ಪ್ರಧಾನಿ ನಿಕೋಲ್ ಪಶಿನಿಯನ್ ತಿಳಿಸಿದ್ದಾರೆ.

ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದ ಸೇನೆಯ ಮುಖ್ಯಸ್ಥ
''ನನ್ನ ಮಗನ ಮದುವೆಯ ಸಂಬಂಧ ಈವೆಂಟ್ ನಡೆಯುತ್ತಿತ್ತು. ಆದ್ರೆ, ನಾನು ಯಾವುದೇ ನಿಯಮಗಳು ಉಲ್ಲಂಘಿಸಿಲ್ಲ'' ಎಂದು ಸೇನೆಯ ಮುಖ್ಯಸ್ಥ ಅರ್ತಕ್ ದಾವ್ತ್ಯನ್ ಪ್ರತಿಕ್ರಿಯೆ ನೀಡಿದ್ದಾರೆ.
ಆರ್ಮೇನಿಯದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಗಣನೀಯವಾಗಿ ಏರಿಕೆಯಾದಂತೆ ಮೇ 14 ರಂದು ತುರ್ತು ಪರಿಸ್ಥಿತಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಲಾಗಿತ್ತು.
ಅಸಲಿಗೆ, ನಿಕೋಲ್ ಪಶಿನಿಯನ್ ಮತ್ತು ಕುಟುಂಬಕ್ಕೂ ಕೊರೊನಾ ವೈರಸ್ ಸೋಂಕು ತಗುಲಿತ್ತು. ಇದೀಗ ಅವರೆಲ್ಲರೂ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications