ಮತ್ತೊಂದು ವಿಮಾನ ದುರಂತ, 116 ಜನ ಸಾವು?
ಅಲ್ಜೀರಿಯಾ, ಜು.24: ಸುಮಾರು 110 ಜನ ಪ್ರಯಾಣಿಕರನ್ನು ಹೊತ್ತಿದ್ದ ಅಲ್ಜೀರಿಯಾದ ಏರ್ ಅಲ್ಜೀರಿ ಏರ್ ಕ್ರಾಫ್ಟ್ ಕಣ್ಮರೆಯಾಗಿದ್ದು, ಅಧಿಕೃತವಾಗಿ ನಾಪತ್ತೆಯಾಗಿರುವ ಸುದ್ದಿ ಬಂದಿದೆ. ವಿಮಾನ ಪತನವಾಗಿದ್ದು 116 ಮಂದಿ ಸಾವನ್ನಪ್ಪಿದ್ದಾರೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಅಲ್ಜೀರಿಯಾದ ಬುಕಿನಾ ಫಾಸೊದ ಔಗಡೌಗೊನಿಂಅ ಅಲ್ಜೀರಿಸ್ ಗೆ ತೆರಳುತ್ತಿದ್ದ ವಿಮಾನ ತನ್ನ ಪ್ರಯಾಣ ಆರಂಭಿಸಿದ 50 ನಿಮಿಷಗಳ ನಂತರ ಸಂಪರ್ಕ ಕಳೆದುಕೊಂಡಿದೆ. AH5017 ವಿಮಾನದಲ್ಲಿ 110 ಜನ ಪ್ರಯಾಣಿಕರು 6 ಸಿಬ್ಬಂದಿಗಳಿದ್ದರು ಎಂದು ತಿಳಿದು ಬಂದಿದೆ.

ಮಲೇಷಿಯನ್ ಏರ್ ಲೈನ್ಸ್ ನ ಎಂಎಚ್ 370 ವಿಮಾನ ನಾಪತ್ತೆ ಪ್ರಕರಣದ ಬೆನ್ನಲ್ಲೇ ಎಂಎಚ್ 17 ದುರಂತ ಕಂಡು ವಿಶ್ವವೇ ಬೆಚ್ಚಿತ್ತು. ಇತ್ತೀಚೆಗೆ ತೈವಾನ್ ನಲ್ಲಿ ವಿಮಾನ ದುರಂತ ಸಂಭವಿಸಿ 50ಕ್ಕೂ ಹೆಚ್ಚು ಪ್ರಯಾಣಿಕರು ಸಾವಿಗೀಡಾಗಿದ್ದರು.
ಬುರ್ಕಿನಾಫಾಸೊದ ಉವಾಗೊಡೊವ್ನಿಂದ ಅಲ್ಜೀರ್ಸ್ಗೆ ಪ್ರಯಾಣ ಬೆಳೆಸಿದ್ದ 116 ಮಂದಿಯನ್ನು ಹೊತ್ತಿದ್ದ ವಿಮಾನವು ಯಾನ ಪ್ರಾರಂಭಿಸಿ 50 ನಿಮಿಷಗಳಲ್ಲಿ ಪತನಗೊಂಡಿದೆ ಎಂದು ಅಲ್ಜೀರಿಯದ ವಿಮಾನಯಾನ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
#BREAKING Air #Algerie's #CRASHED #AH5017 was reported to be flying through the area affected by violent storms.#MD83 pic.twitter.com/OLUQmGoqB3
— CCTVNEWS (@cctvnews) July 24, 2014 ಪ್ರಬಲ ಚಂಡಮಾರುತವಿದ್ದ ಪ್ರದೇಶದಲ್ಲಿ ವಿಮಾನ ಸಂಚರಿಸುತ್ತಿತ್ತು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. 2012ರಲ್ಲಿ ಬಂಡುಕೋರ ಗುಂಪುಗಳು ಹಲವು ತಿಂಗಳುಗಳ ಕಾಲ ವಶದಲ್ಲಿರಿಸಿದ್ದ ಹಾಗೂ ಈಗಲೂ ಪ್ರಕ್ಷುಬ್ಧತೆ ನೆಲೆಸಿರುವ ಉತ್ತರ ಮಾಲಿಯ ಗಾವೊದಲ್ಲಿ ಎಂಡಿ-83 ವಿಮಾನವು ಸಂಪರ್ಕ ಕಳೆದುಕೊಂಡಿರುವುದಾಗಿ ಮಾಲಿಯ ಮೂಲವೊಂದು ತಿಳಿಸಿದೆ.
ವಿಮಾನದಲ್ಲಿ 51 ಫ್ರೆಂಚ್, 27 ಮಂದಿ ಬುರ್ಕಿನಾಫಾಸೊ ಪ್ರಜೆಗಳು, 8 ಮಂದಿ ಲೆಬನಾನ್ ನಾಗರಿಕರು, ಅಲ್ಜೀರಿಯದ 6 ಮಂದಿ, ಐವರು ಕೆನಡಿಯನ್ನರು, ನಾಲ್ವರು ಜರ್ಮನ್ನರು, ಲಕ್ಸಂಬರ್ಗ್ನ ಇಬ್ಬರು, ಸ್ವಿಸ್, ಬೆಲ್ಜಿಯಂ, ಈಜಿಪ್ಟ್, ಯುಕ್ರೇನ್, ನೈಜೀರಿಯ, ಕ್ಯಾಮರೂನ್ ಹಾಗೂ ಮಾಲಿಯ ತಲಾ ಓರ್ವರು ಹಾಗೂ ಸ್ಪೇನ್ನ 6 ಮಂದಿ ವಿಮಾನದಲ್ಲಿದ್ದರೆಂದು ಅಲ್ಜೀರಿಯದ ವಿಮಾನಯಾನ ಅಧಿಕಾರಿ ತಿಳಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications