ಗಡ್ಡ ಬಿಟ್ಟವರಿಗಷ್ಟೇ Govrnment Job; ಇದು ತಾಲಿಬಾನ್ ಸರ್ಕಾರದ ರೂಲ್ಸ್!
ಕಾಬೂಲ್, ಮಾರ್ಚ್ 28: ಇಡೀ ಜಗತ್ತಿನಲ್ಲೇ ತನ್ನ ವಿಚಿತ್ರ ಹಾಗೂ ವಿಭಿನ್ನ ಕಾನೂನು ಕಟ್ಟಳೆಗಳಿಂದ ಸುದ್ದಿಯಾಗಿರುವ ತಾಲಿಬಾನ್ ಸರ್ಕಾರ ಮತ್ತೊಮ್ಮೆ ಅಫ್ಘಾನಿಸ್ತಾನದಲ್ಲಿ ಅಂಥದ್ದೇ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ.
ಅಫ್ಘಾನಿಸ್ತಾನದ ಎಲ್ಲಾ ಸರ್ಕಾರಿ ಕಚೇರಿಗಳನ್ನು ಸುತ್ತು ಹಾಕಿದ ತಾಲಿಬಾನ್ ಆಡಳಿತದ ಸಾರ್ವಜನಿಕ ನೈತಿಕತೆಯ ಸಚಿವಾಲಯದ ಅಧಿಕಾರಿಗಳು ನೌಕರರು ಗಡ್ಡ ಬೆಳೆಸಿದ್ದಾರೆಯೇ ಇಲ್ಲವೋ ಹಾಗೂ ಸಮವಸ್ತ್ರವನ್ನು ಪಾಲನೆ ಮಾಡುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿದರು ಎಂದು ರಾಯಿಟರ್ಸ್ ವರದಿ ಮಾಡಿದೆ.
ಸದ್ಗುಣ ಪ್ರಚಾರ ಮತ್ತು ಅನೀತಿ ನಿಯಂತ್ರಣ ಸಚಿವಾಲಯದ ಪ್ರತಿನಿಧಿಗಳು ಎಲ್ಲಾ ಸರ್ಕಾರಿ ನೌಕರರು ಗಡ್ಡ ಬೋಳಿಸಿಕೊಳ್ಳದಂತೆ ಸರ್ಕಾರಿ ಕಚೇರಿ ಅಧಿಕಾರಿಗಳಿಗೆ ಕಟ್ಟಪ್ಪಣೆ ಹೊರಡಿಸಿದೆ ಎಂದು ತಿಳಿದು ಬಂದಿದೆ. ಇದಷ್ಟೇ ಅಲ್ಲದೇ ಸರ್ಕಾರಿ ನೌಕರರು ಇಂಥದ್ದೇ ಬಟ್ಟೆಯನ್ನು ಸಮವಸ್ತ್ರವಾಗಿ ಧರಿಸಬೇಕೆಂದು ಸಚಿವಾಲಯವು ಸೂಚನೆ ನೀಡಿದೆ ಎಂದು ವರದಿಯಾಗಿದೆ.

ಸರ್ಕಾರಿ ನೌಕರರ ಸಮವಸ್ತ್ರ ಹೇಗಿರಬೇಕು?:
ಅಫ್ಘಾನಿಸ್ತಾನದ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳು ತಾಲಿಬಾನ್ ಸರ್ಕಾರದ ಪ್ರತಿನಿಧಿಗಳು ಸೂಚಿಸುವಂತಹ ಸಮವಸ್ತ್ರವನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಇದರ ಜೊತೆಗೆ ಉದ್ದವಾದ ಗಡ್ಡವನ್ನು ಬೆಳೆಸುವುದು ಕಡ್ಡಾಯವಾಗಿರುತ್ತದೆ. ಇಷ್ಟಲ್ಲದೇ, ಉದ್ದವಾದ ಹಾಗೂ ಸಡಿಲವಾದ ಟಾಪ್ ಮತ್ತು ಪ್ಯಾಂಟ್, ಟೋಪಿ ಅಥವಾ ಪೇಟಾವನ್ನು ಒಳಗೊಂಡಿರುವ ಸ್ಥಳೀಯ ಉಡುಪುಗಳನ್ನು ಧರಿಸಲು ಸೂಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿಯಮ ಪಾಲಿಸದಿದ್ದರೆ ಸರ್ಕಾರಿ ನೌಕರಿಯೇ ಇಲ್ಲ:
ಸರ್ಕಾರಿ ನೌಕರಿಯಲ್ಲಿಯೇ ಉಳಿದುಕೊಳ್ಳಬೇಕಾದರೆ, ಇನ್ನು ಮುಂದೆ ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿರುತ್ತದೆ. ಉದ್ದನೆಯ ಗಡ್ಡ ಹಾಗೂ ಸಮವಸ್ತ್ರವನ್ನು ಹೊಂದಿಲ್ಲದ ಸರ್ಕಾರಿ ನೌಕರರಿಗೆ ಕಚೇರಿಗಳಲ್ಲಿ ಪ್ರವೇಶ ಇರುವುದಿಲ್ಲ. ಅಲ್ಲದೇ ಅವರು ಡ್ರೆಸ್ ಕೋಡ್ಗಳನ್ನು ಪಾಲನೆ ಮಾಡದಿದ್ದರೆ, ಸರ್ಕಾರಿ ನೌಕರಿಯಿಂದಲೇ ವಜಾಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ












Click it and Unblock the Notifications