ಫಿಲಿಪ್ಪೈನ್ಸ್ನಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ
ಮನೀಲಾ, ಜನವರಿ 21: ದ್ವೀಪ ದೇಶ ಫಿಲಿಪ್ಪೈನ್ಸ್ನಲ್ಲಿ ರಿಕ್ಟರ್ ಮಾಪನದಲ್ಲಿ 7.0 ತೀವ್ರತೆಯ ಭೂಕಂಪ ಉಂಟಾಗಿದೆ. ಭಾರತೀಯ ಕಾಲಮಾನ ಸಂಜೆ 5.53ರ ಸುಮಾರಿಗೆ ಫಿಲಿಪ್ಪೈನ್ಸ್ನ ಪೊಂಡಗಿಟಾನ್ ಪ್ರದೇಶ ಆಗ್ನೇಯ ಭಾಗದ 210 ಕಿಮೀ ದೂರದಲ್ಲಿ ಗುರುವಾರ ಭೂಮಿ ಪ್ರಬಲವಾಗಿ ಕಂಪಿಸಿದೆ.
ಜನರಲ್ ಸಾಂಟೊಸ್ ಸಿಟಿಯಲ್ಲಿ 5ರಷ್ಟು ತೀವ್ರತೆ, ಡಾವಾವೊ ನಗರದಲ್ಲಿ 4ರಷ್ಟು ತೀವ್ರತೆ ಮತ್ತು ಬಿಸ್ಲಿಗ್ ಹಾಗೂ ಸುರಿಗಾವೊಗಳಲ್ಲಿ ಶೇ 2ರಷ್ಟು ತೀವ್ರತೆಯಲ್ಲಿ ಭೂಕಂಪನವಾಗಿದೆ.
2020ರ ಡಿಸೆಂಬರ್ 29ರಂದು ರಿಕ್ಟರ್ ಮಾಪನದಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪನ ಫಿಲಿಪ್ಪೈನ್ಸ್ನ ದ್ವೀಪ ಮಿಂಡಾನಾವೊದಲ್ಲಿ ಸಂಭವಿಸಿತ್ತು. ಇದು ಅಲ್ಪ ಪ್ರಮಾಣದ ಸುನಾಮಿ ಭೀತಿ ಸೃಷ್ಟಿಸಿತ್ತು.

ಫಿಲಿಪ್ಪೈನ್ಸ್ ಮತ್ತು ಇಂಡೋನೇಷ್ಯಾಗಳು 'ಅಗ್ನಿಯ ವರ್ತುಲ' ಎಂದೇ ಕರೆಯಲಾಗುವ ಪೆಸಿಫಿಕ್ ಸಾಗರ ಪ್ರದೇಶದಲ್ಲಿವೆ. ಇಲ್ಲಿ ನಿರಂತರವಾಗಿ ಭೂಕಂಪನ ಹಾಗೂ ಅಗ್ನಿಪರ್ವತ ಸ್ಫೋಟದ ಘಟನೆಗಳು ನಡೆಯುತ್ತಿರುತ್ತವೆ.
2013ರಲ್ಲಿ ಫಿಲಿಪ್ಪೈನ್ಸ್ನಲ್ಲಿ 7.1 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಇದು ಭಾರಿ ಪ್ರಮಾಣದ ಅನಾಹುತಕ್ಕೆ ಕಾರಣವಾಗಿತ್ತು. ಆಗ 220ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಗೊಳಗಾಗಿತ್ತು.
ಇಂಡೋನೇಷ್ಯಾ ಈಗಾಗಲೇ ಎರಡು ಬಾರಿ ಪ್ರಬಲ ಸುನಾಮಿ ಸನ್ನಿವೇಶಗಳನ್ನು ಎದುರಿಸಿದೆ. ಕಳೆದ ವಾರಾಂತ್ಯದಲ್ಲಿ ಅಗ್ನಿಪರ್ವತವೊಂದು ಬಿಸಿ ಹೊಗೆ ಉಗುಳಿ 400ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತ್ತು. ಪೂರ್ವ ಜಾವಾ ದ್ವೀಪ ಮತ್ತು ದಕ್ಷಿಣ ಸುಮಾತ್ರಾ ಕರಾವಳಿಗಳಲ್ಲಿ ತನ್ನ ಪ್ರಕೋಪ ಪ್ರದರ್ಶಿಸಿತ್ತು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications