ಅಪಾಯದಲ್ಲಿ ಜೀವವೈವಿಧ್ಯ: 48 ವರ್ಷದಲ್ಲಿ ಶೇ 60ರಷ್ಟು ಪ್ರಾಣಿಗಳ ನಾಶ
ವಾಷಿಂಗ್ಟನ್, ಜನವರಿ 7: ಕಾಡು ಕಡಿದು ನಾಡನ್ನು ವಿಸ್ತರಿಸುತ್ತಿರುವಂತೆಯೇ ಭೂಮಿ ಮೇಲಿನ ಜೀವವೈವಿಧ್ಯಗಳು ನಶಿಸುತ್ತಿವೆ. ಇದರಿಂದ ಮುಂದೆ ಬಹುದೊಡ್ಡ ಅಪಾಯ ಕಾದಿದೆ ಎಂಬ ಎಚ್ಚರಿಕೆಯನ್ನು ಜಗತ್ತಿನಾದ್ಯಂತ ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಿದ್ದಾರೆ.
ಭೂಮಿಯ ಮೇಲಿನ ಜೀವಿಗಳ ಕುರಿತು ನಡೆಸಿದ ಅಧ್ಯಯನ ವರದಿಯೊಂದರ ಪ್ರಕಾರ 1970ರ ಈಚೆಗೆ ಶೇ 60ರಷ್ಟು ಸಸ್ತನಿಗಳು, ಪಕ್ಷಿಗಳು, ಮೀನು ಮತ್ತು ಜಲಚರ ಜೀವಿಗಳು ನಾಶವಾಗಿವೆ. ಇದಲ್ಲದಕ್ಕೂ ಮಾನವನ ಚಟುವಟಿಕೆಗಳೇ ಕಾರಣ.
ವಿಶ್ವ ವನ್ಯಜೀವಿ ನಿಧಿಯ 'ಲಿವಿಂಗ್ ಪ್ಲಾನೆಟ್ ಇಂಡೆಕ್ಸ್'ನಲ್ಲಿ ಈ ಆಘಾತಕಾರಿ ಸಂಗತಿ ಬಯಲಾಗಿದೆ. ಮನುಷ್ಯನ ನಿಯಂತ್ರಣವಿಲ್ಲ ಭೂಮಿ, ಆಹಾರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಬಳಕೆಯು ನಮ್ಮ ಗ್ರಹದಲ್ಲಿನ ಬಹುಪಾಲು ವನ್ಯಜೀವಿಗಳನ್ನು ವಿನಾಶಗೊಳಿಸಿವೆ. ಇದು ಮಾನವ ನಾಗರಿಕತೆಗೂ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಎಂದು ವರದಿ ಹೇಳಿದೆ.

'ನಾವು ಜಗತ್ತಿನ ಪ್ರಪಾತದ ತುದಿಯತ್ತ ನಿದ್ದೆಗಣ್ಣಲ್ಲಿ ನಡೆಯುತ್ತಿದ್ದೇವೆ' ಎಂದು ವಿಶ್ವ ವನ್ಯಜೀವಿ ನಿಧಿಯ ವಿಜ್ಞಾನ ಮತ್ತು ಸಂರಕ್ಷಣೆ ಕಾರ್ಯನಿರ್ವಾಹಕ ನಿರ್ದೇಶಕ ಮೈಕ್ ಬಾರ್ರೆಟ್ ಹೇಳಿದ್ದಾರೆ.
ಒಂದು ವೇಳೆ ಶೇ 60ರಷ್ಟು ಮನುಷ್ಯರು ನಾಶವಾದರೆ, ಅದು ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಆಫ್ರಿಕಾ, ಯುರೋಪ್, ಚೀನಾ ಮತ್ತು ಓಷಿಯಾನಾವನ್ನು ಸಂಪೂರ್ಣವಾಗಿ ಬರಿದುಮಾಡುವುದಕ್ಕೆ ಸಮ. ಅಂದರೆ ಇಷ್ಟು ಪ್ರಮಾಣದಲ್ಲಿ ಪ್ರಾಣಿಗಳನ್ನು ಈಗಾಗಲೇ ನಾಶ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ದಕ್ಷಿಣ ಮತ್ತು ಕೇಂದ್ರ ಅಮೆರಿಕಗಳಲ್ಲಿ ಜೀವ ವೈವಿಧ್ಯಗಳು ಭಾರಿ ಪ್ರಮಾಣದಲ್ಲಿ ನಾಶವಾಗಿವೆ. 1970ರಿಂದೀಚೆಗೆ ಶೇ 89ರಷ್ಟು ಜೀವಿಗಳು ಈ ಎರಡು ಪ್ರದೇಶಗಳಲ್ಲಿಯೇ ಕಣ್ಮರೆಯಾಗಿವೆ. ಕಳೆದ ಐದು ದಶಕಗಳಲ್ಲಿ ಮನುಷ್ಯನ ಚಟುವಟಿಕೆಗಳಿಂದ ವಿಪರೀತ ಪ್ರಮಾಣದಲ್ಲಿ ರಾಸಾಯನಿಕಗಳು ನೀರು ಸೇರುತ್ತಿದ್ದು, ಜಲಚರ ಜೀವಿಗಳನ್ನು ಅಪಾಯಕ್ಕೆ ತಳ್ಳುತ್ತಿವೆ.
ಭೂಗ್ರಹದ ನಾಲ್ಕನೇ ಮೂರು ಭಾಗ ಮನುಷ್ಯರ ಕೃಷಿ, ಕೈಗಾರಿಕೆ ಮತ್ತು ಇತರೆ ಉದ್ದೇಶಗಳಿಗೆ ಬಳಕೆಯಾಗುತ್ತಿವೆ. ಹೀಗಾಗಿ ವನ್ಯಜೀವಿ ನೆಲೆಗಳು ಮಾನವನ ಆಕ್ರಮಣಕ್ಕೆ ಒಳಗಾಗುತ್ತಿವೆ.
ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು ಅವುಗಳ ವಿನಾಶಕ್ಕೆ ಎರಡನೆಯ ಅತಿ ದೊಡ್ಡ ಕಾರಣ. ವರದಿ ಪ್ರಕಾರ 300 ಬಗೆಯ ಪ್ರಾಣಿಗಳು ಮಾನವನ ಹೊಟ್ಟೆಬಾಕತನಕ್ಕೇ ನಾಶವಾಗಿವೆ.
ಆನೆಗಳು, ಚಿರತೆ, ಹುಲಿ, ಸಿಂಹ, ಹಿಮ ಕರಡಿಗಳು ಹೀಗೆ ವೈವಿಧ್ಯಮಯ ಜೀವ ಸಂಕುಲವನ್ನು ನಮ್ಮ ಮುಂದಿನ ಪೀಳಿಗೆಗೂ ಉಳಿಸಿಕೊಳ್ಳಬೇಕೆಂದರೆ ವನ್ಯಜೀವಿಗಳು ಮತ್ತು ಅವುಗಳ ಆವಾಸ ಸ್ಥಾನದ ರಕ್ಷಣೆ ಬಹುದೊಡ್ಡ ಜವಾಬ್ದಾರಿಯಾಗಿದೆ ಎಂದು ವರದಿ ಹೇಳಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications