ಮೂವರು ಅಲ್ ಝಜೀರಾ ಪತ್ರಕರ್ತರು 7 ವರ್ಷ ಜೈಲಿಗೆ
ಕೈರೊ, ಜೂನ್ 23: ಭಯೋತ್ಪಾದನೆಗೆ ನೆರವು ನೀಡಿದ ಆರೋಪದ ಮೇಲೆ ಅಲ್ ಝಜೀರಾ ಮಾಧ್ಯಮ ಸಂಸ್ಥೆಗೆ ಸೇರಿದ ಮೂವರು ಪತ್ರಕರ್ತರಿಗೆ ಈಜಿಪ್ಟಿನಲ್ಲಿ ಏಳು ವರ್ಷಗಳ ಜೈಲುವಾಸ ವಿಧಿಸಲಾಗಿದೆ.
ಕಳೆದ ಡಿಸೆಂಬರಿನಲ್ಲಿ ಕೈರೋದಲ್ಲಿ ಹೋಟೆಲೊಂದರ ಮೇಲೆ ದಾಳಿ ನಡೆಸಿದಾಗ ಈ ಪತ್ರಕರ್ತರು ಸ್ಥಳೀಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈಜಿಪ್ಟಿನ ಉಚ್ಛಾಟಿತ ಅಧ್ಯಕ್ಷ ಮೊಹಮದ್ ಮೊರ್ಸಿಗೆ ಬೆಂಬಲ ನೀಡುತ್ತಿದ್ದ ಇಸ್ಲಾಂ ಬೆಂಬಲಿಗರ ವಿರುದ್ಧ ಸಾರಿದ್ದಾಗ ಇವರೆಲ್ಲಾ ಸಿಕ್ಕಿಬಿದ್ದಿದ್ದರು. ಮೊರ್ಸಿಗೆ ಬೆಂಬಲ ಸೂಚಿಸಿದ್ದ ಈ ಮುಸ್ಲಿಂ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಈಜಿಪ್ಟ್ ಆಡಳಿತ ನಿಷೇಧಿಸಿತ್ತು.

ಜುಲೈ 3ರಂದು ಸೇನಾದಂಗೆಯಲ್ಲಿ ಅಧ್ಯಕ್ಷ ಮೊಹಮದ್ ಮೊರ್ಸಿಯನ್ನು ಉಚ್ಛಾಟಿದ ನಂತರ ನಡೆದ ಗಲಭೆ/ಪ್ರತಿಭಟನೆಗಳನ್ನು ಈ ಪತ್ರಕರ್ತರು ವ್ಯಾಪಕವಾಗಿ ಸುದ್ದಿ ಮಾಡಿದ್ದೇ ಅವರಿಗೆ ಮುಳುವಾಗಿದೆ. ಆ ಪ್ರತಿಭಟನೆಗಳಲ್ಲಿ ತೊಡಗಿದ್ದ ನೂರಾರು ಮಂದಿಯನ್ನು ಸೇನೆಯು ಹತ್ಯೆ ಮಾಡಿತ್ತು. ಮತ್ತು ಸಾವಿರಾರು ಮಂದಿಯನ್ನು ಜೈಲಿಗಟ್ಟಿತ್ತು. (ಚಿತ್ರ ಕೃಪೆ: AP/PTI )
ತಪ್ಪು ಸುದ್ದಿ ಹರಡಿದ ಮತ್ತು ನಿಷೇಧಿತ ಮುಸ್ಲಿಂ ಸಂಘಟನೆಯನ್ನು ಬೆಂಬಲಿಸಿದ ಆರೋಪದ ಮೇಲೆ ಆಸ್ಟ್ರೇಲಿಯಾದ ಪೀಟರ್ ಗ್ರೆಸ್ಟೆ, ಕೆನಡಾ-ಈಜಿಪ್ಟ್ ರಾಷ್ಟ್ರೀಯ ಮೊಹಮಸ್ ಫಹಾಮಿ ಮತ್ತು ಈಜಿಪ್ಟಿನ ಬಹೆರ್ ಮೊಹಮದ್ ಅವರುಗಳನ್ನು ಜೈಲಿಗಟ್ಟಲಾಗಿದೆ. ಶಸ್ತ್ರಾಸ್ತ್ರ ಹೊಂದಿದ್ದ ಹೆಚ್ಚುವರಿ ಆರೋಪದ ಮೇಲೆ ಬಹೆರ್ ಮೊಹಮದ್ ಗೆ ಹೆಚ್ಚುವರಿಯಾಗಿ ಮೂರು ವರ್ಷ ಜೈಲು ವಿಧಿಸಲಾಗಿದೆ.
ಪ್ರಕರಣದಲ್ಲಿ ಇನ್ನೂ 11 ಮಂದಿಗೆ ಶಿಕ್ಷೆ ವಿಧಿಸಲಾಗಿದೆ. ಆಪಾದಿತರೆಲ್ಲಾ ತಮ್ಮ ವಿರುದ್ಧದ ಆರೋಪಗಳನ್ನು ಕೈರೋದಲ್ಲಿ ನಿರಾಕರಿಸಿದ್ದಾರೆ. ಪ್ರಕರಣವು ವಾಕ್ ಸ್ವಾತಂತ್ರ್ಯ ಕಾರ್ಯಕರ್ತರನ್ನು ಕೆರಳಿಸಿದೆ. ಸ್ಕೈ ನ್ಯೂಸ್ ಮತ್ತು ಬಿಬಿಸಿ ಮಾಧ್ಯಮ ಸಂಸ್ಥೆಗಳು ಮೂರೂ ಪತ್ರಕರ್ತರನ್ನು ಬಿಡುಗಡೆಗೊಳಿಸಬೇಕು ಎಂದು ಕರೆ ನೀಡಿವೆ.
ಪತ್ರಕರ್ತರನ್ನು ಜೈಲಿಗಟ್ಟಿರುವುನ್ನು ವಿರೋಧಿಸಿ, ಟ್ವಿಟ್ಟರ್ ಲೋಕದಲ್ಲಿ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿವೆ.
Caged for doing their job #FreeAJStaff #journalismisnotacrime pic.twitter.com/5kw0RLMPj0
— Hayley (@HayleyScottie) June 23, 2014 -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications