ಮೆದುಳಿನ 'ಜಿಪಿಎಸ್' ಶೋಧಕರಿಗೆ ವೈದ್ಯ ನೊಬೆಲ್
ಸ್ಟಾಕ್ ಹೋಮ್, ಅ.7 : ಮೆದುಳಿನಲ್ಲಿನ ಆಂತರಿಕ ಜಿಪಿಎಸ್ ಕುರಿತು ಸಂಶೋಧನೆ ನಡೆಸಿದ ಬ್ರಿಟನ್-ಅಮೆರಿಕ ಮೂಲದ ಸಂಶೋಧಕ ಜಾನ್ ಒ' ಕೀಫ್, ನಾರ್ವೆ ಮೂಲದ ದಂಪತಿ ಎಡ್ವರ್ಡ್ ಮೋಜರ್ ಹಾಗೂ ಮೇ-ಬ್ರೀಟ್ ಮೋಜರ್ ಅವರಿಗೆ ಪ್ರತಿಷ್ಠಿತ ವೈದ್ಯ ನೊಬೆಲ್ ಲಭಿಸಿದೆ.
ಸೋಮವಾರ ವೈದ್ಯ ನೊಬೆಲ್ ಪ್ರಕಟವಾಗಿದೆ. 6.77 ಕೋಟಿ ರೂ. ನಗದು ಹೊಂದಿರುವ ಬಹುಮಾನ ಮೂವರಿಗೂ ಸಮನಾಗಿ ಹಂಚಿಕೆಯಾಗುವುದಿಲ್ಲ. ಅರ್ಧದಷ್ಟು ಹಣ ಒ' ಕೀಫ್ ಪಾಲಾದರೆ ಉಳಿದ ಅರ್ಧ ಹಣ ನಾರ್ವೆ ದಂಪತಿ ಪಾಲಾಗಲಿದೆ.[ನೊಬೆಲ್ ಪುರಸ್ಕೃತ ಮಾರ್ಕ್ವೆಜ್ ಟ್ವೀಟ್ ಸ್ಮರಣೆ]

ತತ್ವಜ್ಞಾನಿಗಳು ಮತ್ತು ವಿಜ್ಞಾನಿಗಳನ್ನು ಶತಮಾನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಈ ಮೂವರು ತಮ್ಮ ಸಂಶೋಧನೆ ಮೂಲಕ ಉತ್ತರ ಕಂಡುಹಿಡಿದಿದ್ದಾರೆ ಎಂದು ನೊಬೆಲ್ ತೀರ್ಪುಗಾರರ ಮಂಡಳಿ ಹೇಳಿದೆ. ಮೆದುಳು ನಮ್ಮ ಸುತ್ತಲಿನ ವಾತಾವರಣದ ನಕ್ಷೆಯನ್ನು ಹೇಗೆ ತಯಾರಿಸುತ್ತದೆ? ಹಾಗೂ ಸಂಕೀರ್ಣ ಪರಿಸರದಲ್ಲಿ ನಾವು ಹೇಗೆ ಓಡಾಡುತ್ತೇವೆ? ಎಂಬುದೆ ಈ ಸಂಶೋಧನೆಯ ತಿರುಳು.
1971ರಲ್ಲಿ ಒ' ಕೀಫ್ ಇಲಿಯ ನರಮಂಡಲದಲ್ಲಿ ಒಂದು ಮಾದರಿಯ ಕೋಶ ಪತ್ತೆಹಚ್ಚಿದ್ದರು. ಆ ಇಲಿಯನ್ನು ಪ್ರಯೋಗಾಲಯದ ಒಂದು ನಿರ್ದಿಷ್ಟ ಭಾಗದಲ್ಲಿ ಇಡುತ್ತಿದ್ದಂತೆ ಆ ಕೋಶ ಜಾಗೃತವಾಗುತ್ತಿತ್ತು. ಇದರಿಂದ ಇಲಿಯ ಮೆದುಳಿನಲ್ಲಿ ಕೋಣೆಯ ನಕ್ಷೆ ಸಿದ್ಧವಾಗುತ್ತಿತ್ತು.[ಇಂಟರ್ ನೆಟ್ ಗೆ ಸಿಗುವುದೇ ನೊಬೆಲ್ ಶಾಂತಿ ಪ್ರಶಸ್ತಿ?]
2005ರಲ್ಲಿ ಮೇರಿ ಬ್ರಿಟ್ ಮತ್ತು ಎಡ್ವರ್ಡ್ ರೋಜರ್ ದಂಪತಿ ಮತ್ತೊಂದು ಸಂಶೋಧನೆ ಮಾಡಿದರು. ಮೆದುಳಿನ ಯಾವ ಕೋಶ ಸಮನ್ವಯ ವ್ಯವಸ್ಥೆ ಸೃಷ್ಟಿಸಿ, ನಿರ್ದಿಷ್ಟ ಜಾಗ ಗುರುತಿಸಿ ದಾರಿ ತೋರಿಸುತ್ತದೆ ಎಂಬುದನ್ನು ಪತ್ತೆ ಹಚ್ಚಿದ್ದರು.
ಅಲ್ಜೀಮರ್ ರೋಗಿಗಳಿಗೆ ಅನುಕೂಲ: ನರ ವೈದ್ಯ ಸಮಸ್ಯೆಯಾದ ಅಲ್ಜೀಮರ್ ಕಾಯಿಲೆ ಕಾಣಿಸಿಕೊಂಡ ಆರಂಭಿಕ ಹಂತದಲ್ಲೇ ಮೆದುಳಿನಲ್ಲಿನ ಜಾಗ ಗುರುತಿಸುವ ಸರ್ಕಿಟ್ಗೆ ಹಾನಿಯಾಗುತ್ತದೆ. ಈ ಮೂವರ ಸಂಶೋಧನೆ ಅಲ್ಜೀಮರ್ ರೋಗಿಗಳ ಚಿಕಿತ್ಸೆಗೆ ನೆರವಾಗಲಿದೆ.
Edvard Moser on a flight to Munich, arrives this afternoon says #nobelprize2014 co-recipient and wife, @MayBrittMoser pic.twitter.com/WcM1Qfwak5
— The Nobel Prize (@NobelPrize) October 6, 2014 Post your greetings to John O’Keefe, @MayBrittMoser and Edvard Moser #nobelprize2014 Medicine: http://t.co/9GJlIKB3U1 pic.twitter.com/r6uZQbZYBb
— The Nobel Prize (@NobelPrize) October 6, 2014 -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications