ಮೆದುಳಿನ 'ಜಿಪಿಎಸ್' ಶೋಧಕರಿಗೆ ವೈದ್ಯ ನೊಬೆಲ್
ಸ್ಟಾಕ್ ಹೋಮ್, ಅ.7 : ಮೆದುಳಿನಲ್ಲಿನ ಆಂತರಿಕ ಜಿಪಿಎಸ್ ಕುರಿತು ಸಂಶೋಧನೆ ನಡೆಸಿದ ಬ್ರಿಟನ್-ಅಮೆರಿಕ ಮೂಲದ ಸಂಶೋಧಕ ಜಾನ್ ಒ' ಕೀಫ್, ನಾರ್ವೆ ಮೂಲದ ದಂಪತಿ ಎಡ್ವರ್ಡ್ ಮೋಜರ್ ಹಾಗೂ ಮೇ-ಬ್ರೀಟ್ ಮೋಜರ್ ಅವರಿಗೆ ಪ್ರತಿಷ್ಠಿತ ವೈದ್ಯ ನೊಬೆಲ್ ಲಭಿಸಿದೆ.
ಸೋಮವಾರ ವೈದ್ಯ ನೊಬೆಲ್ ಪ್ರಕಟವಾಗಿದೆ. 6.77 ಕೋಟಿ ರೂ. ನಗದು ಹೊಂದಿರುವ ಬಹುಮಾನ ಮೂವರಿಗೂ ಸಮನಾಗಿ ಹಂಚಿಕೆಯಾಗುವುದಿಲ್ಲ. ಅರ್ಧದಷ್ಟು ಹಣ ಒ' ಕೀಫ್ ಪಾಲಾದರೆ ಉಳಿದ ಅರ್ಧ ಹಣ ನಾರ್ವೆ ದಂಪತಿ ಪಾಲಾಗಲಿದೆ.[ನೊಬೆಲ್ ಪುರಸ್ಕೃತ ಮಾರ್ಕ್ವೆಜ್ ಟ್ವೀಟ್ ಸ್ಮರಣೆ]

ತತ್ವಜ್ಞಾನಿಗಳು ಮತ್ತು ವಿಜ್ಞಾನಿಗಳನ್ನು ಶತಮಾನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಈ ಮೂವರು ತಮ್ಮ ಸಂಶೋಧನೆ ಮೂಲಕ ಉತ್ತರ ಕಂಡುಹಿಡಿದಿದ್ದಾರೆ ಎಂದು ನೊಬೆಲ್ ತೀರ್ಪುಗಾರರ ಮಂಡಳಿ ಹೇಳಿದೆ. ಮೆದುಳು ನಮ್ಮ ಸುತ್ತಲಿನ ವಾತಾವರಣದ ನಕ್ಷೆಯನ್ನು ಹೇಗೆ ತಯಾರಿಸುತ್ತದೆ? ಹಾಗೂ ಸಂಕೀರ್ಣ ಪರಿಸರದಲ್ಲಿ ನಾವು ಹೇಗೆ ಓಡಾಡುತ್ತೇವೆ? ಎಂಬುದೆ ಈ ಸಂಶೋಧನೆಯ ತಿರುಳು.
1971ರಲ್ಲಿ ಒ' ಕೀಫ್ ಇಲಿಯ ನರಮಂಡಲದಲ್ಲಿ ಒಂದು ಮಾದರಿಯ ಕೋಶ ಪತ್ತೆಹಚ್ಚಿದ್ದರು. ಆ ಇಲಿಯನ್ನು ಪ್ರಯೋಗಾಲಯದ ಒಂದು ನಿರ್ದಿಷ್ಟ ಭಾಗದಲ್ಲಿ ಇಡುತ್ತಿದ್ದಂತೆ ಆ ಕೋಶ ಜಾಗೃತವಾಗುತ್ತಿತ್ತು. ಇದರಿಂದ ಇಲಿಯ ಮೆದುಳಿನಲ್ಲಿ ಕೋಣೆಯ ನಕ್ಷೆ ಸಿದ್ಧವಾಗುತ್ತಿತ್ತು.[ಇಂಟರ್ ನೆಟ್ ಗೆ ಸಿಗುವುದೇ ನೊಬೆಲ್ ಶಾಂತಿ ಪ್ರಶಸ್ತಿ?]
2005ರಲ್ಲಿ ಮೇರಿ ಬ್ರಿಟ್ ಮತ್ತು ಎಡ್ವರ್ಡ್ ರೋಜರ್ ದಂಪತಿ ಮತ್ತೊಂದು ಸಂಶೋಧನೆ ಮಾಡಿದರು. ಮೆದುಳಿನ ಯಾವ ಕೋಶ ಸಮನ್ವಯ ವ್ಯವಸ್ಥೆ ಸೃಷ್ಟಿಸಿ, ನಿರ್ದಿಷ್ಟ ಜಾಗ ಗುರುತಿಸಿ ದಾರಿ ತೋರಿಸುತ್ತದೆ ಎಂಬುದನ್ನು ಪತ್ತೆ ಹಚ್ಚಿದ್ದರು.
ಅಲ್ಜೀಮರ್ ರೋಗಿಗಳಿಗೆ ಅನುಕೂಲ: ನರ ವೈದ್ಯ ಸಮಸ್ಯೆಯಾದ ಅಲ್ಜೀಮರ್ ಕಾಯಿಲೆ ಕಾಣಿಸಿಕೊಂಡ ಆರಂಭಿಕ ಹಂತದಲ್ಲೇ ಮೆದುಳಿನಲ್ಲಿನ ಜಾಗ ಗುರುತಿಸುವ ಸರ್ಕಿಟ್ಗೆ ಹಾನಿಯಾಗುತ್ತದೆ. ಈ ಮೂವರ ಸಂಶೋಧನೆ ಅಲ್ಜೀಮರ್ ರೋಗಿಗಳ ಚಿಕಿತ್ಸೆಗೆ ನೆರವಾಗಲಿದೆ.
Edvard Moser on a flight to Munich, arrives this afternoon says #nobelprize2014 co-recipient and wife, @MayBrittMoser pic.twitter.com/WcM1Qfwak5
— The Nobel Prize (@NobelPrize) October 6, 2014 Post your greetings to John O’Keefe, @MayBrittMoser and Edvard Moser #nobelprize2014 Medicine: http://t.co/9GJlIKB3U1 pic.twitter.com/r6uZQbZYBb
— The Nobel Prize (@NobelPrize) October 6, 2014 -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications