'ಪುಷ್ಪಕ ವಿಮಾನ'ದ ಭಿಕ್ಷುಕ ಕಣ್ಮುಂದೆ ಹಾದುಹೋದಾಗ

ವಾಸ್ತವದಲ್ಲಿ ಅಂತಹ ಘಟನೆಯೊಂದು ನಿಜಜೀವನದಲ್ಲೂ ನಡೆದಿದೆ. ಶ್ರೀಮಂತರೇ ಹೆಚ್ಚಾಗಿರುವ ಸೌದಿ ಅರೇಬಿಯಾ ಗೊತ್ತಲ್ಲಾ. ಅಲ್ಲಿ ಇಂತಹ (ಶ್ರೀಮಂತ) ಭಿಕ್ಷುಕಿಯೊಬ್ಬಳು ಮೊನ್ನೆ ಮೃತಪಟ್ಟಿದ್ದಾಳೆ. ಅದೂ ನೂರು ವರ್ಷದ ಹಣ್ಣು ಹಣ್ಣು ಮುದುಕಿ. ದಶಕಗಳ ಕಾಲ ಬೀದಿಬದಿಗಳಲ್ಲಿ ಭಿಕ್ಷೆ ಎತ್ತುತ್ತಾ ಜೀವನ ದೂಡಿದ ಈ ಮಹಿಳೆ ಮೃತಪಟ್ಟಾಗ ಆಯಮ್ಮ ಹತ್ತು ಲಕ್ಷಕ್ಕೂ ಹೆಚ್ಚು ಡಾಲರ್ ಹಣ ಸಂಪಾದಿಸಿದ್ದು ಬಹಿರಂಗವಾಗಿದೆ! [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಅನಾಥ ಮಹಿಳೆ ಅನಾಥವಾಗಿ ಬಿಟ್ಟು ಹೋಗಿದ್ದು ... ಚಿನ್ನದ ನಾಣ್ಯಗಳು, ಚಿನ್ನಾಭರಣ, ನಾಲ್ಕು ಬಂಗಲೆಗಳು, ಆಸ್ತಿಪಾಸ್ತಿ ದಾಖಲೆಗಳು ಸೇರಿದಂತೆ ಅನಾಥವಾಗಿ ಬದುಕಿದ ಈ ಮಹಿಳೆ ಇದೀಗ ಅನಾಥವಾಗಿ ಬಿಟ್ಟು ಹೋಗಿರುವ ಹಣ ಸರಿಯಾಗಿ USD 10,66,580. ಜೆಡ್ಡಾದ ಬೀದಿಬೀದಿಗಳಲ್ಲಿ ಅರ್ಧ ಶತಮಾನ ಕಾಲ ಭಿಕ್ಷೆ ಎತ್ತಿ ಸಂಪಾದಿಸಿರುವ ಹಣವಿದು. ಅಂದಹಾಗೆ, ಐಶಾ ಹೆಸರಿನ ಈ ಭಿಕ್ಷುಕಿಗೆ ಕಣ್ಣು ಕಾಣುತ್ತಿರಲಿಲ್ಲ.
ಭಿಕ್ಷುಕಿ ಐಶಾಗೆ ಅಮ್ಮ ಮತ್ತು ಸೋದರಿ ಬಿಟ್ಟರೆ ತನ್ನವರು ಅಂತ ಯಾರೂ ಇರಲಿಲ್ಲ ಎಂದು ಐಶಾ ಜತೆ ಬೆಳೆದ ಅಹಮದ್ ಅಲ್ ಸಯೀದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕುತೂಹಲದ ಸಂಗತಿಯೆಂದರೆ ಭಿಕ್ಷುಕಿ ಐಶಾ ಉಯಿಲು ಬರೆದಿಟ್ಟುಹೋಗಿದ್ದಾಳೆ. ಆ ಉಯಿಲನ್ನು ಅಹಮದ್ ಅಲ್ ಸಯೀದ್ ಕೈಗೆ ಭದ್ರವಾಗಿ ನೀಡಿದ್ದು, ತನ್ನಾಸ್ತಿಯನ್ನೆಲ್ಲಾ ಬಡಬಗ್ಗರಿಗೆ ದಾನ ಮಾಡಿಬಿಡು ಎಂದಿದ್ದಾಳೆ.
ತನ್ನ ಅಮ್ಮ ಮತ್ತು ಸೋದರಿ ಸತ್ತು ಹೋದ ಮೇಲೆ ಈ ಭಿಕ್ಷುಕಿ ಐಶಾಳ ಆಸ್ತಿಪಾಸ್ತಿ ಮತ್ತಷ್ಟು ಹೆಚ್ಚಾಯಿತಂತೆ. ಹೇಗೆಂದರೆ ಅಮ್ಮ ಮತ್ತು ಸೋದರಿಯ ಆಸ್ತಿಯೂ ಇದೇ ಐಶಾಳ ಕೈಸೇರಿತಂತೆ.
'ಆಯ್ತು ಇಷ್ಟೆಲ್ಲಾ ದುಡ್ಡಿದೆ. ಇನ್ನೂ ಏಕೆ ಭಿಕ್ಷೆ ಎತ್ತುವೆ. ಬಿಟ್ಬಿಡು' ಎಂದು ಅದೊಮ್ಮೆ ಅವಳಿಗೆ ಬುದ್ದಿ ಹೇಳಿದ್ದೆ. ಆದರೆ ಅವಳೋ... 'ಮುಂದೆ ಎಂತಹ ದುರ್ಭರ ದಿನಗಳು ಬರುತ್ತವೆಯೋ ಯಾರಿಗ್ಗೊತ್ತು, ಮಗಾ? ಅದಕ್ಕೆ ನಾನಂತೂ ಭಿಕ್ಷೆ ಎತ್ತೋದು ಬಿಡೋಲ್ಲ' ಎಂದು ಹೇಳಿದ್ದಾಗಿ ಅಹಮದ್ ಅಲ್ ಸಯೀದ್ ಮಾರ್ಮಿಕವಾಗಿ ನುಡಿದಿದ್ದಳಂತೆ!
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications