ಬ್ಯಾಂಕ್ ಮುಳುಗಡೆ ಆದರೆ ಕೇವಲ ಒಂದು ಲಕ್ಷ ಗ್ರಾಹಕನ ಖಾತೆಗೆ
ನವದೆಹಲಿ, ಡಿಸೆಂಬರ್ 03: ಬ್ಯಾಂಕ್ ನಷ್ಟ ಅನುಭವಿಸಿದರೆ ಹಣ ತೊಡಗಿಸಿದ್ದ ಗ್ರಾಹಕನಿಗೆ ಕೇವಲ ಒಂದು ಲಕ್ಷ ರೂಪಾಯಿ ಹಣ ಮಾತ್ರ ದೊರಕಲಿದೆ.
ಬ್ಯಾಂಕ್ ನಷ್ಟ ಅನುಭವಿಸಿದರೆ ಗ್ರಾಹಕರಿಗೆ ನೀಡಲಾಗುವ ಪರಿಹಾರದ ಮೊತ್ತವನ್ನು ಐದು ಲಕ್ಷ ರೂಪಾಯಿ ಮಾಡಬೇಕೆಂಬ ಒತ್ತಡ ಹೆಚ್ಚಾಗಿದ್ದರೂ ಸಹ ಈ ನಿಟ್ಟಿನಲ್ಲಿ ಯಾವುದೇ ನಿರ್ಣಯವನ್ನು ಕೇಂದ್ರ ತೆಗೆದುಕೊಂಡಿಲ್ಲ.
ಈ ಬಗ್ಗೆ ಡಿಐಸಿಜಿಸಿ ಸ್ಪಷ್ಟನೆ ನೀಡಿದ್ದು, ಬ್ಯಾಂಕ್ ಉಳಿತಾಯ ಮತ್ತು ಹೂಡಿಕೆ ಮೇಲಿನ ವಿಮೆ ಮೊತ್ತವನ್ನು ಒಂದು ಲಕ್ಷದಿಂದ ಮೇಲೆ ಹೆಚ್ಚಿಸಿರುವ ಬಗ್ಗೆ ಯಾವುದೇ ಮಾಹಿತಿ ಕೇಂದ್ರದಿಂದ ಬಂದಿಲ್ಲವೆಂದು ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಮುಳುಗಡೆ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ, ವಿಮೆ ಮೊತ್ತವನ್ನು ಹೆಚ್ಚಿಸಿ, ಹಣ ಹೂಡಿಕೆ ಮಾಡಿರುವ ಗ್ರಾಹಕರಿಗೆ ಐದು ಲಕ್ಷ ಹಣ ದೊರಕುವಂತೆ ಮಾಡುವಂತೆ ಒತ್ತಡ ಹಾಕಲಾಗಿತ್ತು. ಆದರೆ ಈ ಬಗ್ಗೆ ಕೇಂದ್ರ ಹಣಕಾಸು ಇಲಾಖೆ ತಲೆಕೆಡಿಸಿಕೊಂಡಿಲ್ಲ.
ಡಿಐಸಿಜಿಸಿ ಯು ಬ್ಯಾಂಕುಗಳ ಠೇವಣಿ ಮೇಲೆ ವಿಮೆಯನ್ನು ನೀಡುವ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಬ್ಯಾಂಕ್ ನಷ್ಟವಾದಲ್ಲಿ ಗ್ರಾಹಕರಿಗೆ ಒಂದು ಲಕ್ಷ ವಿಮೆ ಹಣವನ್ನು ನೀಡುತ್ತದೆ. ಗ್ರಾಹಕನ ಬ್ಯಾಂಕ್ ಖಾತೆಯಲ್ಲಿರುವ ಹಣ ಹೆಚ್ಚಿದ್ದರೂ ಸಹ ಒಂದು ಲಕ್ಷ ಮಾತ್ರವೇ ಸಿಗುತ್ತದೆ. ವಿಶೇಷವೆಂದರೆ ಕಡಿಮೆ ಹಣ ಇದ್ದರೂ ಒಂದು ಲಕ್ಷವೇ ದೊರೆಯುತ್ತದೆ.












Click it and Unblock the Notifications