ಇನ್ನು 5 ವರ್ಷದಲ್ಲಿ 30 ರುಪಾಯಿಗೂ ಕಡಿಮೆ ಆಗಲಿದೆ ಲೀಟರ್ ಪೆಟ್ರೋಲ್ ಬೆಲೆ
ಮುಂದಿನ ಐದು ವರ್ಷಗಳಲ್ಲಿ ಲೀಟರ್ ಪೆಟ್ರೋಲ್ ಗೆ ಮೂವತ್ತು ರುಪಾಯಿಗಿಂತ ಕಡಿಮೆ ಆಗುವ ಸಾಧ್ಯತೆ ಇದೆ ಎಂಬ ಭವಿಷ್ಯ ನುಡಿದಿದ್ದಾರೆ ಅಮೆರಿಕದ ತಜ್ಞ ಟೋನಿ ಸೆಬಾ. ಭವಿಷ್ಯದ ತಂತ್ರಜ್ಞಾನಗಳಿಂದ ಇಡೀ ಜಗತ್ತಿನ ಪೆಟ್ರೋಲ್ ಅವಲಂಬನೆ ಕಡಿಮೆ ಆಗುತ್ತದೆ. ಆ ಕಾರಣಕ್ಕೆ ಪೆಟ್ರೋಲ್ ಬೆಲೆ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಸೌರಶಕ್ತಿ ಬಳಕೆ ಉತ್ಕರ್ಷಕ್ಕೆ ಬರುತ್ತದೆ ಎಂಬ ಸಂಗತಿಯನ್ನು ಇಂದಿಗಿಂತ ಹತ್ತು ಪಟ್ಟು ಹೆಚ್ಚು ಬೆಲೆ ಸೌರಶಕ್ತಿಗೆ ಇರುವಾಗಲೇ ಆತ ಭವಿಷ್ಯ ನುಡಿದಿದ್ದರು. ಸ್ವಂತ ಚಾಲನೆ ಆಗುವ ಕಾರುಗಳು ಕಾರಣಕ್ಕೆ ಬ್ಯಾರೆಲ್ ಪೆಟ್ರೋಲ್ ಬೆಲೆ ಇಪ್ಪತ್ತೈದು ಡಾಲರ್ ಗೆ ಕುಸಿಯಲಿದೆ. "ತೈಲ ಬೇಡಿಕೆಯು 2021-2020ರಲ್ಲಿ ಇದ್ದದ್ದು 100 ಮಿಲಿಯನ್ ಬ್ಯಾರಲ್ ಗೆ ಇಳಿಕೆಯಾಗಿ, ಮುಂದಿನ 10 ವರ್ಷಗಳಲ್ಲಿ 70 ಮಿಲಿಯನ್ ಬ್ಯಾರಲ್ ಗೆ ಇಳಿಯಲಿದೆ.[ಮೇ 1ರಿಂದ ಆಯ್ದ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಆಯಾ ದಿನವೇ ನಿಗದಿ]

"ಇದರರ್ಥ ಏನೆಂದರೆ ಬೆಲೆಯು 25 ಅಮೆರಿಕನ್ ಡಾಲರ್ ಗೆ ಕುಸಿಯಲಿದೆ" ಎಂದು ಸೆಬಾ ಹೇಳಿದ್ದಾರೆ. ಜನರು ಹಳೆ ಕಾರುಗಳ ಬಳಕೆ ನಿಲ್ಲಿಸುವುದಿಲ್ಲ. ಆದರೆ ಸೆಲ್ಫ್ ಡ್ರೈವ್ ಕಾರುಗಳ ಬಳಕೆ ಹೆಚ್ಚಾಗಲಿದೆ. ಎಲೆಕ್ಟ್ರಿಕ್ ವಾಹನಗಳ ಬೆಲೆ ಕೂಡ ಕಡಿಮೆ ಆಗಲಿದೆ ಎಂದು ಅವರು ಹೇಳಿದ್ದಾರೆ.
2030ರ ವೇಳೆಗೆ ಶೇ 95ರಷ್ಟು ಮಂದಿ ಖಾಸಗಿ ವಾಹನಗಳನ್ನು ಇಟ್ಟುಕೊಂಡಿರುವುದಿಲ್ಲ. ಇದರಿಂದ ಆಟೋಮೊಬೈಲ್ ಕೈಗಾರಿಕೆ ನಶಿಸಿಹೋಗುತ್ತದೆ. ಇನ್ನು ಎಲೆಕ್ಟ್ರಿಕ್ ಕಾರುಗಳಿಂದ ಜಾಗತಿಕ ತೈಲ ಮಾರುಕಟ್ಟೆಯೇ ನಾಶವಾಗಿರುತ್ತದೆ ಎಂದು ಸೆಬಾ ಭವಿಷ್ಯ ನುಡಿದಿದ್ದಾರೆ.[ಇನ್ಮುಂದೆ ಪೆಟ್ರೋಲ್ ಕೂಡ ಹೋಮ್ ಡಿಲಿವರಿ ಪಡೆಯಬಹುದು!]
2030ರ ವೇಳೆಗೆ ಭಾರತದಲ್ಲಿ ಎಲೆಕ್ಟ್ರಿಕಲ್ ಕಾರುಗಳನ್ನಷ್ಟೇ ಕಾಣುತ್ತೀರಿ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೂಡ ಹೇಳಿಕೆ ನೀಡಿದ್ದು, ಈ ಸಂದರ್ಭದಲ್ಲೇ ಈ ಎಲ್ಲ ಹೇಳಿಕೆ ಬಂದಿರುವುದು ಕುತೂಹಲಕರವಾಗಿದೆ. ಕಾಫಿ ಹೀರುತ್ತಾ ಅರವತ್ತು ಕಿಲೋಮೀಟರ ಪ್ರಯಾಣ ಮಾಡಿದ ನಂತರ, ಆ ಪ್ರಯಾಣ ಪುಕ್ಕಟೆ ಹಾಗೂ ಕಾಫಿಗಷ್ಟೇ ದುಡ್ಡು ಕೊಡುವುದಾಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ ಎಂದಿದ್ದಾರೆ ಸೆಬಾ.
-
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
MT Aqua Titan: ಮಂಗಳೂರು ಕರಾವಳಿಗೆ ಆಗಮಿಸಿದ ರಷ್ಯಾದ ಕಚ್ಚಾ ತೈಲ ಹೊತ್ತ ಬೃಹತ್ ನೌಕೆ -
ಭಾರತದಲ್ಲಿ ಇಂಧನ ಭದ್ರತೆಗೆ ಒತ್ತು, ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ: ಮೋದಿ ನೇತೃತ್ವದಲ್ಲಿ ಸಭೆ, ಹಲವು ಮಹತ್ವದ ತೀರ್ಮಾನ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ












Click it and Unblock the Notifications