ಯೋಗಿಗೆ ತಾಜ್ ಮಹಲ್ ಸಾಂಸ್ಕೃತಿಕ ಪರಂಪರೆ ಕೇಂದ್ರವೇ ಅಲ್ವಂತೆ!
ಲಕ್ನೋ, ಜುಲೈ 14: ಭಾರತಕ್ಕೆ ಬರುವ ಪ್ರವಾಸಿಗರಿಗೆ ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ಮಹಲ್ ನಷ್ಟು ಆಕರ್ಷಣೆ ಬೇರೊಂದಿಲ್ಲ. ಆದರೆ ಉತ್ತರ ಪ್ರದೇಶ ಸರಕಾರಕ್ಕೆ ಹಾಗಲ್ಲ!
ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ಸಾಂಸ್ಕೃತಿಕ ಪರಂಪರೆಯ ಕೇಂದ್ರಗಳ ಪಟ್ಟಿಯಿಂದ ತಾಜ್ಮಹಲ್ ಅನ್ನು ಲೀಲಾಜಾಲವಾಗಿ ಕೈಬಿಟ್ಟಿದೆ.

ಬುಧವಾರ ಬಜೆಟ್ ಮಂಡಿಸಿದಿ ಯೋಗಿ ಆದಿತ್ಯನಾಥ್ ಸಾಂಸ್ಕೃತಿಕ ಪರಂಪರೆಯ ಕೇಂದ್ರಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಇದಕ್ಕೆ ತಮ್ಮ ಬಜೆಟ್ನಲ್ಲಿ 2,800 ಕೋಟಿ ರೂಪಾಯಿಗಳನ್ನು ತೆಗೆದಿರಿಸಿದ್ದಾರೆ.
ಈ ಪಟ್ಟಿಯಲ್ಲಿ ಹಿಂದೂಗಳ ಪೂಜನೀಯ ಸ್ಥಳಗಳಾದ ಅಯೋಧ್ಯೆ, ವಾರಾಣಸಿ, ಮಥುರಾ, ನೈಮಿಷಾರಣ್ಯ, ಚಿತ್ರಕೂಟ ಮತ್ತು ವಿಂಧ್ಯಾಚಲ ಸೇರಿವೆ. ಆದರೆ ವಿಶ್ವದ ಪ್ರಮುಖ ಪ್ರವಾಸಿ ತಾಣ ತಾಜ್ಮಹಲ್ ಮಾತ್ರ ಇಲ್ಲ.












Click it and Unblock the Notifications