Get Updates
Get notified of breaking news, exclusive insights, and must-see stories!

ಆರೋಪಿಯಿಂದ ಒತ್ತಡ, ಜೂನ್ 15 ರೊಳಗೆ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಪ್ರತಿಭಟನೆ: ಕುಸ್ತಿಪಟುಗಳ ಎಚ್ಚರಿಕೆ

ನವದೆಹಲಿ, ಜೂನ್. 11: ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ತಮ್ಮ ಪ್ರಭಾವ ಬಳಸಿ ಲೈಂಗಿಕ ಕಿರುಕುಳಕ್ಕೆ ಒಳಗಾದವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಅವರ ಹೇಳಿಕೆಗಳನ್ನು ಬದಲಾಯಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ಕುಸ್ತಿಪಟುಗಳು ಆರೋಪಿಸಿದ್ದಾರೆ. ಜೂನ್‌ 15ರೊಳಗೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯನ್ನು ಪುನರಾರಂಭಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಜೂನ್ 15 ರೊಳಗೆ ನಿರ್ಗಮಿತ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಸರ್ಕಾರ ಕುಸ್ತಿಪಟುಗಳಿಗೆ ಭರವಸೆ ನೀಡಿದ್ದು, ನಂತರ ಅವರು ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದಾರೆ. ಸೋನೆಪತ್ ಜಿಲ್ಲೆಯ ಛೋಟು ರಾಮ್ ಧರ್ಮಶಾಲಾದಲ್ಲಿ ಕುಸ್ತಿಪಟುಗಳು ಮಹಾ ಪಂಚಾಯತ್ ಕರೆದು, ತಮ್ಮ "ನ್ಯಾಯಕ್ಕಾಗಿ ಹೋರಾಟ" ದಲ್ಲಿ ತಮ್ಮನ್ನು ಬೆಂಬಲಿಸಿದ ಖಾಪ್, ರೈತರು ಮತ್ತು ಮಹಿಳಾ ಸಂಘಟನೆಗಳ ಸದಸ್ಯರನ್ನು ಆಹ್ವಾನಿಸಿದ್ದರು.

Wrestlers to resume protest if no action is taken by June 15

ಕುಸ್ತಿಪಟುಗಳು ಬುಧವಾರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ನಡೆಸಿದ ಚರ್ಚೆಯನ್ನು ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ. ಒಲಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು ಸಂತ್ರಸ್ತರನ್ನು ಒಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. "ಇದು ಸಾಬೀತಾಗಿದೆ, ಸೆಕ್ಷನ್ 161 ಮತ್ತು 164 ರ ಅಡಿಯಲ್ಲಿ ಹೇಳಿಕೆಗಳನ್ನು ದಾಖಲಿಸಲಾಗಿದೆ. ಆದರೆ, ಅದು ಬದಲಾಗಿದೆ. ನಮಗೆ ಅರ್ಥವಾಗುತ್ತಿಲ್ಲ" ಎಂದು ಪ್ರಕರಣದ ಏಳು ದೂರುದಾರರಲ್ಲಿ ಒಬ್ಬರಾದ ಅಪ್ರಾಪ್ತ ವಯಸ್ಕರಿಂದ ಲೈಂಗಿಕ ಕಿರುಕುಳ ಆರೋಪಗಳನ್ನು ಹಿಂಪಡೆದಿರುವುದನ್ನು ಉಲ್ಲೇಖಿಸಿ ಸಾಕ್ಷಿ ಹೇಳಿದ್ದಾರೆ.

'ಅಪ್ರಾಪ್ತ ಬಾಲಕಿಯ ತಂದೆ ಒತ್ತಡಕ್ಕೆ ಒಳಗಾಗಿರುವುದು ಸ್ಪಷ್ಟವಾಗಿದೆ. ಒತ್ತಡ ನಿರ್ಮಾಣವಾಗುತ್ತಿದೆ. ಬಜರಂಗ್‌ಗೆ ಕರೆಗಳು ಬರುತ್ತಿವೆ. ಲಂಚ ತೆಗೆದುಕೊಳ್ಳಿ, ಪ್ರತಿಭಟನೆಯನ್ನು ಕೊನೆಗೊಳಿಸಿ ಎನ್ನಲಾಗುತ್ತಿದೆ. ಮಾಧ್ಯಮಗಳಿಂದ ಸುಳ್ಳು ಸುಳ್ಳು ವರದಿ ಮಾಡಿಸಲಾಗುತ್ತಿದೆ, ಇದು ನಮ್ಮ ಮನಸ್ಸನ್ನು ಒಡೆಯುತ್ತಿದೆ" ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.

"ಅದಕ್ಕಾಗಿಯೇ ನಾವು ಮೊದಲು ಅವರನ್ನು ಬಂಧಿಸಿ ನಂತರ ತನಿಖೆ ಮಾಡಿಸಿ ಎಂದು ಹೇಳಿದ್ದೆವು. ಅವರು ಪೊಲೀಸ್ ಕಸ್ಟಡಿಯಲ್ಲಿದ್ದರೆ, ಒತ್ತಡ ಹೇರಲು ಸಾಧ್ಯವಿಲ್ಲ, ಇಲ್ಲದಿದ್ದರೆ, ಒಬ್ಬೊಬ್ಬರಾಗಿ, ಬಲಿಪಶುಗಳು ಹೊರಹೊಗುತ್ತಾರೆ. ಭಯದ ವಾತಾವರಣ ಉಳಿಯುತ್ತದೆ. ಈ ಪ್ರಕರಣದಲ್ಲಿ ಸರಿಯಾದ ನಿರ್ಣಯ ಹೊರಬೀಳುವವರೆಗೆ ನಾವು ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸುವುದಿಲ್ಲ. ನಾವು ಪ್ರತಿದಿನ ಅನುಭವಿಸುತ್ತಿರುವ ಮಾನಸಿಕ ಸಂಕಟವನ್ನು ನೀವು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ಪ್ರತಿಭಟನೆಯ ಪ್ರಮುಖ ಸದಸ್ಯರಲ್ಲಿ ಒಬ್ಬರಾದ ಬಜರಂಗ್ ಪುನಿಯಾ ಹೇಳಿದ್ದಾರೆ.

Wrestlers to resume protest if no action is taken by June 15

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾವು ನಡೆಸಿದ ಚರ್ಚೆಯನ್ನು ಎಲ್ಲರಿಗೂ ತಿಳಿಸಲು ಈ ಪಂಚಾಯಿತಿಗೆ ಕರೆ ನೀಡಿದ್ದೆವು, ಜೂನ್ 15 ರೊಳಗೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಪ್ರತಿಭಟನೆ ನಡೆಸುತ್ತೇವೆ. ಪ್ರತಿಭಟನೆಯ ಸ್ಥಳವನ್ನು ಇನ್ನೂ ನಿರ್ಧರಿಸಿಲ್ಲ. ಜಂತರ್ ಮಂತರ್ ಅಥವಾ ರಾಮ್ ಲೀಲಾ ಮೈದಾನ ಆಗಿರಬಹುದು" ಎಂದು ಹೇಳಿದ್ದಾರೆ.

ಕುಸ್ತಿಪಟುಗಳನ್ನು ಜಂತರ್ ಮಂತರ್‌ಗೆ ಹಿಂತಿರುಗಲು ಬಿಡುವುದಿಲ್ಲ ಎಂದು ದೆಹಲಿ ಪೊಲೀಸರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕ್ರೀಡಾ ಸವಿವ ಅನುರಾಗ್ ಠಾಕೂರ್ ಅವರು ಕುಸ್ತಿಪಟುಗಳನ್ನು ಸಂವಾದಕ್ಕೆ ಆಹ್ವಾನಿಸಿದಾಗ ವಿನೇಶ್ ಫೋಗಟ್ ಚರ್ಚೆಯ ಭಾಗವಾಗಿರಲಿಲ್ಲ. ಅವರು ಇಂದಿನ ಪಂಚಾಯತ್‌ಗೂ ಗೈರುಹಾಜರಾಗಿದ್ದರು.ಈ ಬಗ್ಗೆ ಕೇಳಿದರೆ ಬಜರಂಗ್ ಹಾಗೂ ಸಾಕ್ಷಿ ಇಬ್ಬರೂ ಬೇರೆ ಬೇರೆ ಉತ್ತರ ನೀಡಿದ್ದಾರೆ.

"ಸಾಕ್ಷಿ, ಭಜರಂಗ್ ಮತ್ತು ವಿನೇಶ್ ಒಂದಾಗಿದ್ದಾರೆ ಎಂದು ಹೇಳುತ್ತೇನೆ. ವಿನೇಶ್ ಪೋಗಟ್ ಕಾನೂನು ಸಮಸ್ಯೆಯನ್ನು ನಿಭಾಯಿಸುತ್ತಿದ್ದಾರೆ. ಜೊತೆಗೆ ಸಾಕಷ್ಟು ಕೆಲಸಗಳಿವೆ, ನಾವು ಹಿಂದೆ ಸರಿಯುತ್ತೇವೆ ಎಂದು ವದಂತಿಗಳು ಹರಡುತ್ತಿವೆ. ನಾವು ಒಂದೇ, ನಮ್ಮ ನಿರ್ಧಾರಗಳಲ್ಲಿ ನಾವು ಒಗ್ಗಟ್ಟಾಗಿದ್ದೇವೆ" ಎಂದು ಸಾಕ್ಷಿ ಮಲ್ಲಿಕ್ ಹೇಳಿದ್ದಾರೆ. ಆದರೆ, ವಿನೇಶ್‌ಗೆ ಅನಾರೋಗ್ಯವಿದೆ. ಅದಕ್ಕಾಗಿಯೇ ಅವಳು ಇಂದು ಬಂದಿಲ್ಲ ಎಂದು ಬಜರಂಗ್ ಪುನೀಯಾ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+