ಅಯ್ಯೋ ಹಾವು...! ವಿಶ್ವ ಹಾವು ದಿನಕ್ಕೆ ಒಂದಷ್ಟು ವೈರಲ್ ವಿಡಿಯೋ!
Recommended Video

'ಹಾವು ಅನ್ನೋ ಶಬ್ದ ಕೇಳಿದರೇನೇ ನಡುಗುವವರಿದ್ದಾರೆ. ಒಂದು ಹನಿ ವಿಷದ ಮೂಲಕ ಬಲಾಢ್ಯ ಮನುಷ್ಯನನ್ನೂ ಸಾಯಿಸುವ ತಾಕತ್ತಿರುವ ಹಾವುಗಳಂದ್ರೆ ಭಯ ಸಹಜವೇ. ಇಂಥ ಹಾವುಗಳಿಗೂ ಒಂದು ದಿನವಿದೆ. ಆ ದಿನ ಇವತ್ತೇ!
ಹೌದು,, ಪ್ರತಿವರ್ಷ ಜುಲೈ 16 ಅನ್ನು ವಿಶ್ವ ಹಾವುಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಹಾವುಗಳ ಕುರಿತು ಇರುವ ಭಯವನ್ನು, ಭ್ರಮೆಯನ್ನು ಹೋಗಲಾಡಿಸುವ ಮತ್ತು ಹಾವುಗಳ ಸಂತತಿಯನ್ನು ಕಾಪಾಡುವ ದೃಷ್ಟಿಯಿಂದ ಈ ದಿನವನ್ನು ಆಚರಿಸಲಾಗುತ್ತಿದೆ.
ಹಿಂದು ಸಂಪ್ರದಾಯದಲ್ಲಿ ಹಾವನ್ನು ಪೂಜಿಸುವುದಕ್ಕೆಯೇ ಒಂದು ದಿನವನ್ನು ಮೀಸಲಿಡಲಾಗಿದೆ. ನಾಗರ ಪಂಚಮಿ ದಿನ ಹಾವಿಗೆ ಹಾಲೆರೆದು ಪೂಜಿಸಲಾಗುತ್ತದೆ. ಜಗದೀಶ ಈಶ್ವರನಂತೂ ಹಾವಿನ ಮಾಲೆಯನ್ನೇ ತೊಟ್ಟಿದ್ದಾನೆ. ಇಷ್ಟಾದರೂ ಹಾವು ಎಂದರೆ ಭಕ್ತಿ ಮತ್ತು ಅದನ್ನೂ ಮೀರಿದ ಭಯ ಎಂದರೆ ಒಪ್ಪಲೇಬೇಕು!
ವಿಶ್ವ ಹಾವು ದಿನದ ಪ್ರಯುಕ್ತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಾವುಗಳ ವಿಡಿಯೋ ಮತ್ತು ಚಿತ್ರಗಳು ಇಲ್ಲಿದೆ.
| Array |
ಅಯ್ಯಪ್ಪಾ, ಬಾತ್ ಟಬ್ಬಿನಲ್ಲಿ ಜೋಡಿ ಹಾವು!
ಬಾತ್ ಟಬ್ಬೊಂದರಲ್ಲಿ ಜೋಡಿ ಹಾವುಗಳು ಹರಿದಾಡುತ್ತಿರುವ ವಿಡಿಯೋವನ್ನು ವೈಟ್ ಲಿಯಾನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
| Array |
ಇಲ್ನೋಡಿ, ಹಾವಿಂದೇ ಸಂತೆ!
ಲೆಕ್ಕವಿಲ್ಲದಷ್ಟು ಚಿಕ್ಕ-ಪುಟ್ಟ ಹಾವುಗಳು ಕಲ್ಲೊಂದರ ಸಂಧಿನಿಂದ ಹೊರಬರುತ್ತಿರುವ ವಿಡಿಯೋವನ್ನು ವೈಲ್ಡ್ ಸೇಫ್ ಬಿಸಿ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
|
ಮಿಂಚಂತೆ ತೇಲೋ ಹಳದಿ ಹಾವು!
ನೀರಿನಲ್ಲಿ ಮಿಂಚಂತೆ ತೇಲುವ ಹಾವಿನ ವಿಡಿಯೋವನ್ನು ಜೆನ್ನಾ ಎಂಬುವವರು ಟ್ವೀಟ್ ಮಾಡಿದ್ದಾರೆ. ಹಳದಿ ಮೈ ಮೇಲೆ ಕಪ್ಪು ಬಣ್ಣದ ಚುಕ್ಕಿಯನ್ನು ಹೊಂದಿರುವ ಈ ಹಾವು ಈಜುವ ಸ್ಪೀಡ್ ನೋಡಿದರೆ ಎಂಥವರೂ ಅಚ್ಚರಿಪಡಬೇಕು!
|
ಹಾವಿಗೆ ನೀರೆರೆದ ಜನ!
ಹಾವಿಗೆ ಹಾಲೆರೆಯುವುದನ್ನು ಕೇಳಿದ್ದೇವೆ. ಆದರೆ ಬಾಯಾರಿದ ಕಾಳಿಂಗ ಹಾವಿಗೆ ಜನರು ನೀರು ಕುಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಸಾಗರ್ ಗಾಯಕ್ವಾಡ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಬ್ಯೂಟಿ ಆಫ್ ಸ್ನೇಕ್ ಡಾಕ್ಯುಮೆಂಟರಿ
ಹಾವಿನ ಡಾಕ್ಯಮೆಂಟರಿಯೊಂದರ ವಿಡಿಯೋವನ್ನು ಹಂಬಾರ್ಯಾನ್ ಎಂಬುವವರು ಟ್ವೀಟ್ ಮಾಡಿದ್ದಾರೆ ನೋಡಿ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications