ಎಂಟು ಮುಗ್ಧ ಕಂದಮ್ಮಗಳಿಗೆ ಹಿಂಸೆ ಕೊಟ್ಟ ವೃದ್ಧೆ
ಪಣಜಿ, ಏಪ್ರಿಲ್ 17: ಆ ಮನೆಯಲ್ಲಿ ಇದ್ದದ್ದು ಒಂದಲ್ಲ, ಎರಡಲ್ಲ ಎಂಟು ಹೆಣ್ಣು ಮಕ್ಕಳು. ವಯಸ್ಸು ಆರರಿಂದ ಹನ್ನೆರಡು ವರ್ಷವಷ್ಟೇ. ಅವರ ಮೈಯಲ್ಲೆಲ್ಲ ಪರಚಿದ, ಹರಿತದ ವಸ್ತುವಿನಿಂದ ಬರೆ ಎಳೆದ ಗಾಯದ ಕಲೆಗಳು. ಈ ಮುಗ್ಧ ಪುಟ್ಟ ಕಂದಮ್ಮಗಳಿಗೆ ಹೀಗೆ ಹಿಂಸೆ ನೀಡುತ್ತಿದ್ದದ್ದು 65ರ ವೃದ್ಧೆ.
ಗೋವಾದ ವಾಸ್ಕೊ ನಗರದ ಬೈನಾದ ಫ್ಲಾಟ್ ಒಂದರಲ್ಲಿ ವೃದ್ಧೆಯ ದೌರ್ಜನ್ಯಕ್ಕೆ ಒಳಗಾಗಿ ಹಿಂಸೆ ಅನುಭವಿಸುತ್ತಿದ್ದ ಎಂದು ಪುಟ್ಟ ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ.
ಚರ್ಚ್ಗೆ ಬಂದಿದ್ದ ಬಾಲಕಿಯೊಬ್ಬಳ ಕೈಯಲ್ಲಿ ಗಾಯದ ಕಲೆ ನೋಡಿದ ವ್ಯಕ್ತಿಯೊಬ್ಬರು ಏನಾಗಿದ್ದೆಂದು ಆಕೆಯನ್ನು ವಿಚಾರಿಸಿದ್ದರು. ಆಕೆ ಬಿಡಿಸಿಟ್ಟ ಕಥೆ ಕೇಳಿ ಆಘಾತಗೊಂಡ ಆ ವ್ಯಕ್ತಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು.

ಎನ್ಜಿಒ ಒಂದರ ಸಹಾಯದೊಂದಿಗೆ ಫ್ಲಾಟ್ ಮೇಲೆ ದಾಳಿ ನಡೆಸಿದ ಪೊಲೀಸರು ಎಲ್ಲ ಮಕ್ಕಳನ್ನು ರಕ್ಷಿಸಿ, ವೃದ್ಧೆಯನ್ನು ಬಂಧಿಸಿದರು.
ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ವೃದ್ಧೆ
ವೆನಸ್ ಹಬೀಬ್ ಎಂಬ ವೃದ್ಧೆ ಈ ಪುಟ್ಟ ಮಕ್ಕಳೆಲ್ಲರನ್ನೂ ದತ್ತು ತೆಗೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾಳೆ. ಎಂಟು ಮಕ್ಕಳಿಗೂ ಹೊಡೆದು ಬಡಿದು ಹಿಂಸೆ ಕೊಡುತ್ತಿದ್ದ ಹಬೀಬ್, ಬಿಸಿ ಮಾಡಿದ ಚಾಕುವಿನಿಂದ ಬರೆಯನ್ನೂ ಹಾಕುತ್ತಿದ್ದಳಂತೆ.
ಸಣ್ಣ ಪುಟ್ಟ ವಿಷಯಗಳಿಗೂ ಹಿಂಸಿಸುತ್ತಿದ್ದ ಆಕೆ, ಪೈಪ್ ಮತ್ತು ಕಾದ ಚಾಕುವಿನಿಂದ ಕೈ ಕಾಲುಗಳ ಮೇಲೆ ಬಾರಿಸುತ್ತಿದ್ದಳು ಎಂದು ಮಕ್ಕಳು ಹೇಳಿಕೊಂಡಿದ್ದಾರೆ.
ಈ ಮಕ್ಕಳು ಆಕೆಯ ಬಳಿ ಹೇಗೆ ಸೇರಿಕೊಂಡಿದ್ದವು, ಯಾವ ಕಾರಣಕ್ಕೆ ಆಕೆ ಹಿಂಸೆ ನೀಡುತ್ತಿದ್ದಳು ಎಂಬ ಮಾಹಿತಿ ಬಹಿರಂಗವಾಗಿಲ್ಲ.
ವೃದ್ಧೆ ಮೇಲೆ ಅಪಹರಣ, ಅಪಾಯಕಾರಿ ಆಯುಧಗಳಿಂದ ಉದ್ದೇಶಪೂರ್ವಕ ಹಲ್ಲೆ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.
ರಕ್ಷಿಸಲಾದ ಮಕ್ಕಳನ್ನು ರಾಜ್ಯ ಸರ್ಕಾರದ ಮಕ್ಕಳ ಆಶ್ರಯ ಮನೆ ಅಪ್ನಾ ಘರ್್ಗೆ ಸೇರಿಸಲಾಗಿದೆ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications