Get Updates
Get notified of breaking news, exclusive insights, and must-see stories!

ಅಪ್ಪ ಬಯಸಿದರೆ ರಾಜೀನಾಮೆ ನೀಡುವೆ, ಹೊಸ ಪಕ್ಷ ಇಲ್ಲ: ಅಖಿಲೇಶ್

ಲಕ್ನೋ, ಅಕ್ಟೋಬರ್ 24: 'ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಳಗಿಳಿಯಲು ನಾನು ಸಿದ್ಧ. ನೇತಾಜಿ(ಮುಲಾಯಂ)ಗಾಗಿ ನಾನು ಪಕ್ಷಕ್ಕೆ ಬಂದೆ, ಹೊಸ ಪಕ್ಷ ಕಟ್ಟುವುದಿಲ್ಲ' ಎಂದು ಯುಪಿ ಸಿಎಂ ಅಖಿಲೇಶ್ ಯಾದವ್ ಅವರು ಘೋಷಿಸಿದರು.

ಸಮಾಜವಾದಿ ಪಕ್ಷದ ಕಚೇರಿಯಲ್ಲಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರು ಕರೆದಿದ್ದ ಸಭೆಯಲ್ಲಿ ಗಲಾಟೆ, ಗದ್ದಲ ಮುಂದುವರೆದಿದೆ. ಅಖಿಲೇಶ್ ಯಾದವ್ ಹಾಗೂ ಶಿವಪಾಲ್ ಯಾದವ್ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದು ನಡೆದಿದೆ.[ಸಮಾಜವಾದಿ ಪಕ್ಷ ಕುಟುಂಬವಿದ್ದಂತೆ, ಎಂದಿಗೂ ಒಡೆಯುವುದಿಲ್ಲ: ಮುಲಾಯಂ]

Will not form new party, will resign if Mulayam desires it: Akhilesh

'ನನ್ನ ತಂದೆಯೇ ನನಗೆ ಗುರು. ಹೀಗಿರುವಾಗ ನಾನ್ಯಾಕೆ ಹೊಸ ಪಕ್ಷ ಕಟ್ಟಲಿ. ನನ್ನ ತಂದೆ ಹೇಳಿದರೆ ನಾನು ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ಇದು ಮುಲಾಯಂ ಸಿಂಗ್ ಯಾದವ್ ಕಟ್ಟಿದ ಪಕ್ಷ. ನಾನು ನೇತಾಜಿ ಅವರ ಆಶಯದಿಂದ ಸಿಎಂ ಆಗಿದ್ದೇನೆ. ಪಕ್ಷದ ಒಳಗೆ ಕೆಲವರು ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಈ ಮೂಲಕ ಪಕ್ಷದಲ್ಲಿ ಬಿಕ್ಕಟ್ಟು ಸೃಷ್ಟಿಸುತ್ತಿದ್ದಾರೆ. ಈ ಪಕ್ದಿಂದ ನನಗೆ ಏನೂ ಆಗಬೇಕಿಲ್ಲ. ಇದು ಸಂಪೂರ್ಣ ಮುಲಾಯಂ ಸಿಂಗ್ ಅವರ ಪಕ್ಷ ಎಂದು ಹೇಳಿದರು.[ಮಾಸಿಕ ಪಿಂಚಣಿ ಭಾಗ್ಯ ಬಡವರಿಗೆ ನೀಡಿ ಎಂದ ಬಿಗ್ ಬಿ]

ಭಾನುವಾರದಂದು ಸಿಎಂ ಅಖೀಲೇಶ್ ಯಾದವ್ ತನ್ನ ಚಿಕ್ಕಪ್ಪ ಶಿವಪಾಲ್ ಯಾದವ್ ಸೇರಿದಂತೆ ಐವರನ್ನು ಸಂಪುಟದಿಂದ ಕೈಬಿಟ್ಟಿದ್ರು. ಇದಕ್ಕೆ ಪ್ರತಿಯಾಗಿ ಅಖಿಲೇಶ್ ಜೊತೆ ಗುರುತಿಸಿಕೊಂಡಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವರನ್ನು 6 ವರ್ಷಗಳವರೆಗೆ ಪಕ್ಷದಿಂದ ಉಚ್ಚಾಟಿಸಲಾಗಿತ್ತು.[ಮುಲಾಯಂ ಕೆಣಕಿದ್ದಕ್ಕೆ ಐಪಿಎಸ್ ಅಮಿತಾಬ್ ಅಮಾನತು]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+