ಮಿಜೋರಾಂ ಚುನಾವಣೆ: ಆಡಳಿತ ವಿರೋಧಿ ಅಲೆ ಜಯಿಸಬಲ್ಲದೆ ಕಾಂಗ್ರೆಸ್?
ಮಿಜೋರಾಂ ವಿಧಾನಸಭೆಯ 40 ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಲಿದೆ. ಪುಟ್ಟ ರಾಜ್ಯ ಮಿಜೋರಾಂನಲ್ಲೆ ಈ ಹಿಂದಿನ ಅಂದರೆ 2013ರ ವಿಧಾನಸಭೆ ಚುನಾವಣೆಯಲ್ಲಿ ಏನಾಗಿತ್ತು ಅನ್ನೋದನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಆಗ 40 ಸ್ಥಾನಗಳ ಪೈಕಿ 34ರಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿತ್ತು.
ಎಂಎನ್ ಎಫ್ ನಿಂದ 31 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರೆ, ಆ ಪೈಕಿ 5 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಮಿಜೋರಾಂ ಪೀಪಲ್ಸ್ ಕಾನ್ಫರೆನ್ಸ್ (ಎಂಪಿಸಿ) 1 ಸ್ಥಾನ ಗಳಿಸುವಲ್ಲಿ ಸಫಲವಾಗಿತ್ತು.
ಅದಕ್ಕೂ ಹಿಂದಿನ ಚುನಾವಣೆಯಲ್ಲಿ, 2008ರ ವಿಧಾನಸಭೆ ಚುನಾವಣೆಯಲ್ಲಿ 32 ಸ್ಥಾನಗಳನ್ನು ಕಾಂಗ್ರೆಸ್ ಜಯಿಸಿತ್ತು. ಎಂಎನ್ ಎಫ್ 3 ಸ್ಥಾನ, ಎಂಪಿಸಿ 2, ದ ಝೋರಂ ನ್ಯಾಷನಲಿಸ್ಟ್ ಪಾರ್ಟಿ (ಝೆಡ್ ಎನ್ ಪಿ) 2 ಹಾಗೂ ಮರಾಲ್ಯಾಂಡ್ ಡೆಮಾಕ್ರಟಿಕ್ ಫ್ರಂಟ್ 1 ಸ್ಥಾನಗಳನ್ನು ಪಡೆದಿದ್ದವು.

ಮಿಜೋರಾಂ ಚುನಾವಣೆ 2013:
40 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 25, 2013ರದು ಮತದಾನ ನಡೆದಿತ್ತು. 6.9 ಲಕ್ಷ ಮತದಾರರು ಇದ್ದರು. ಒಟ್ಟಾರೆ 142 ಅಭ್ಯರ್ಥಿಗಳಿದ್ದರು. ಅದರಲ್ಲಿ ಕಾಂಗ್ರೆಸ್ ನಿಂದ 40, ಮಿಜೋರಾಂ ಡೆಮಾಕ್ರಟಿಕ್ ಅಲೈಯನ್ಸ್ (ಎಂಡಿಎ) 40 ಇದ್ದರು. ಆ ಮೈತ್ರಿ ಕೂಟದೊಳಗೆ ಮಿಜೋ ನ್ಯಾಷನಲ್ ಫ್ರಂಟ್ 31, ಮಿಜೋರಾಂ ಪೀಪಲ್ ಕಾನ್ಫರೆನ್ಸ್ 8, ಮರಾಲ್ಯಾಂಡ್ ಡೆಮಾಕ್ರಟಿಕ್ ಫ್ರಂಟ್ ನ ಒಬ್ಬರು ಅಭ್ಯರ್ಥಿ ಇದ್ದರು.
ಝೋರಂ ನ್ಯಾಷನಲಿಸ್ಟ್ ಪಾರ್ಟಿಯ 38, ಭಾರತೀಯ ಜನತಾ ಪಕ್ಷದ 17, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ 2 ಹಾಗೂ ಜೈ ಮಹಾ ಭಾರತ್ ಪಕ್ಷದ ಒಬ್ಬರು ಅಭ್ಯರ್ಥಿ ಅಖಾಡದಲ್ಲಿದ್ದರು.
| ರಾಜ್ಯ | ರಾಜಧಾನಿ |
| ಮಿಜೋರಾಂ | ಐಜ್ ವಾಲ್ |
| ಜಿಲ್ಲೆಗಳ ಸಂಖ್ಯೆ | 8 |
| ವಿಧಾನಸಭಾ ಕ್ಷೇತ್ರಗಳು | 40 |
| ಒಟ್ಟಾರೆ ಜನಸಂಖ್ಯೆ | 10.9 ಲಕ್ಷ |
| ನಗರ ಪ್ರದೇಶದ ಜನಸಂಖ್ಯೆ | 5.6 ಲಕ್ಷ |
| ಗ್ರಾಮೀಣ ಭಾಗದ ಜನಸಂಖ್ಯೆ | 5.2 ಲಕ್ಷ |
| ಜಿಡಿಪಿ(2018-19) | 11,458 ಕೋಟಿ |
| ಸಾಕ್ಷರತೆ ಪ್ರಮಾಣ (2011) | 91.58% |
| ಲಿಂಗಾನುಪಾತ(2011) | 976 |
| ಸದ್ಯದ ಆಡಳಿತಾರೂಢ ಪಕ್ಷ | ಕಾಂಗ್ರೆಸ್ |
| ಒಟ್ಟು ಮತದಾರರ ಸಂಖ್ಯೆ | 7,68,181 |
| ಒಟ್ಟಾರೆ ಮತದಾನ ಕೇಂದ್ರಗಳು | 1,164 |
ಎಂಎನ್ ಎಫ್ ಹಾಗೂ ಕಾಂಗ್ತೆಸ್ ಮಧ್ಯೆ ಈ ಬಾರಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು. ಕಳೆದ ಎರಡು ಚುನಾವಣೆಗಳನ್ನು ಗಮನಿಸಿದರೆ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಿದೆ. ಆದರೆ ಎರಡು ಪಕ್ಷಗಳ ಮಧ್ಯದ ಮತ ಪ್ರಮಾಣದ ಅಂತರ ಹೆಚ್ಚೇನಿಲ್ಲ.
2013ರ ಚುನಾವಣೆಯಲ್ಲಿ ಕಾಂಗ್ರೆಸ್ 2,55,917 (ಒಟ್ಟಾರೆ ಮತ ಪ್ರಮಾಣ 44.63 ಪರ್ಸೆಂಟ್) ಮತ ಪಡೆದಿದ್ದರೆ, ಎಂಎನ್ ಎಫ್ 1,64,305 (28.65 ಪರ್ಸೆಂಟ್) ಮತಗಳನ್ನು ಗಳಿಸಿತ್ತು. 2008ರಲ್ಲಿ ಈ ಮತ ಪ್ರಮಾಣ ಮತ್ತೂ ಕಡಿಮೆ ಇತ್ತು. ಕಾಂಗ್ರೆಸ್ 1,95,614 (38.89 ಪರ್ಸೆಂಟ್) ಮತ ಪಡೆದಿದ್ದರೆ, ಎಂಎನ್ ಎಫ್ ಗೆ 1,54,132 (30.65 ಪರ್ಸೆಂಟ್) ಮತಗಳು ಬಂದಿದ್ದವು.
-
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ












Click it and Unblock the Notifications