ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೌರಿಗೆ ಕರ್ನಾಟಕ ಸರ್ಕಾರ ರಕ್ಷಣೆ ಏಕೆ ಕೊಟ್ಟಿರಲಿಲ್ಲ: ರವಿಶಂಕರ್ ಪ್ರಶ್ನೆ
ನವದೆಹಲಿ, ಸೆಪ್ಟೆಂಬರ್ 8: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣ ದಿನಗಳೆದಂತೆ ಹೆಚ್ಚೆಚ್ಚು ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ಈ ಪ್ರಕರಣವೀಗ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಕಿತ್ತಾಟವನ್ನು ತಾರಕಕ್ಕೆ ಕೊಂಡೊಯ್ದಿದೆ.
ಶುಕ್ರವಾರ, ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ''ಗೌರಿ ಲಂಕೇಶ್ ಅವರಿಗೆ ನಕ್ಸಲೀಯರಿಂದ ಬೆದರಿಕೆ ಇ-ಮೇಲ್ ಹಾಗೂಕರೆಗಳು ಬಂದಿದ್ದವೆಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಪರಿಸ್ಥಿತಿ ಹೀಗಿದ್ದರೂ, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಅವರಿಗೆ ಗೌರಿ ಅವರಿಗೆ ಏಕೆ ರಕ್ಷಣೆ ನೀಡಿರಲಿಲ್ಲ?'' ಎಂದು ಪ್ರಶ್ನಿಸಿದರು.
Comments
gauri lankesh law minister ravishankar prasad bjp congress ಕಾನೂನು ಸಚಿವ ರವಿಶಂಕರ್ ಪ್ರಸಾದ್ ಬಿಜೆಪಿ ಕಾಂಗ್ರೆಸ್
English summary
In a press meet, Central Law minister Ravishankar Prasad questions Karnataka Congress government for not giving security to Gauri Lakesh despite she recieved death threats to her by Naxalites.