Finger In Ice-Cream: ಐಸ್ಕ್ರೀಮ್ನಲ್ಲಿ ಸಿಕ್ಕ ಕೈ ಬೆರಳು ಯಾರದ್ದು ಎಂಬ ಪ್ರಶ್ನೆ ಸಿಕ್ತು ಉತ್ತರ...
ಮುಂಬೈ ಜೂನ್ 20: ಮುಂಬೈನ ವೈದ್ಯರೊಬ್ಬರು ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಐಸ್ಕ್ರೀಂನಲ್ಲಿ ಕಂಡು ಬಂದ ಮಾನವನ ಕೈ ಬೆರಳು ಯಾರದ್ದು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಮಲಾಡ್ನ ವೈದ್ಯರಿಗೆ ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಐಸ್ಕ್ರೀಮ್ನಲ್ಲಿ ಮಾನವ ಬೆರಳು ಕಂಡುಬಂದಿತ್ತು. ಈ ಪ್ರಕರಣದ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಆಹಾರ ಪದಾರ್ಥಗಳು ಮತ್ತು ಅವುಗಳ ಶುದ್ಧತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈ ಸಮಯದಲ್ಲಿ ಮುಂಬೈ ಪೊಲೀಸರು ವೈದ್ಯರಿಗೆ ಸಿಕ್ಕ ಕೈಬೆರಳು ಯಾರದ್ದು ಎನ್ನುವ ಬಗ್ಗೆ ತನಿಖೆ ನಡೆಸುತ್ತಿರುವಾಗ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

ಈ ಘಟನೆ ಬೆಳಕಿಗೆ ಬಂದಾಗಿನಿಂದ ಇದು ಯಾರ ಕೈಬೆರಳು ಎಂಬ ಪ್ರಶ್ನೆ ಜನರಲ್ಲಿ ಮೂಡಿತ್ತು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಪೊಲೀಸರಿಗೂ ಸವಾಲಾಗಿತ್ತು. ಹೀಗಾಗಿ ಇದೀಗ ಈ ಪ್ರಕರಣದಲ್ಲಿ ಎದ್ದಿರುವ ದೊಡ್ಡ ಪ್ರಶ್ನೆಗೆ ಉತ್ತರವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ತನಿಖೆಯಲ್ಲಿ ಪೊಲೀಸರಿಗೆ ದೊಡ್ಡ ಸುಳಿವು ಸಿಕ್ಕಿದ್ದು, ಈ ಬೆರಳು ಐಸ್ ಕ್ರೀಮ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಉದ್ಯೋಗಿಯದ್ದಾಗಿರಬಹುದು ಎಂದು ಶಂಕಿಸಲಾಗಿದೆ. ಹೌದು.. ಆ ಬೆರಳು ಐಸ್ ಕ್ರೀಮ್ ಫ್ಯಾಕ್ಟರಿಯ ಗಾಯಗೊಂಡ ನೌಕರನದ್ದು ಎಂದು ಹೇಳಲಾಗುತ್ತಿದೆ.
ಯುಮ್ಮೋ ಐಸ್ ಕ್ರೀಂನ ಪುಣೆ ಕಾರ್ಖಾನೆಯ ಉದ್ಯೋಗಿ ಅಪಘಾತದಲ್ಲಿ ಬೆರಳಿಗೆ ಗಾಯ ಮಾಡಿಕೊಂಡಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಪಘಾತ ನಡೆದ ದಿನವೇ ಐಸ್ ಕ್ರೀಂನಲ್ಲಿ ಬೆರಳಿನ ತುಣುಕು ಪತ್ತೆಯಾಗಿರುವುದು ತನಿಖೆಯಿಂದ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಡಿಎನ್ಎ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಿದ್ದು, ವರದಿ ಬಂದ ಬಳಿಕವಷ್ಟೇ ಬೆರಳು ನೌಕರನದ್ದೇ ಅಥವಾ ಅಲ್ಲವೇ ಎಂಬುದನ್ನು ದೃಢಪಡಿಸಲಾಗುವುದು.

ಐಸ್ ಕ್ರೀಮ್ನಲ್ಲಿ ಬೆರಳು ಹೇಗೆ ಸಿಕ್ಕಿತು?
ಮುಂಬೈನ 26 ವರ್ಷದ ವೈದ್ಯ ಓರ್ಲೆಮ್ ಬ್ರಾಂಡನ್ ಸೆರರಾವ್ ತನ್ನ ಸಹೋದರಿ ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಐಸ್ಕ್ರೀಂನಲ್ಲಿ ಬೆರಳನ್ನು ಕಂಡುಕೊಂಡಿದ್ದಾರೆ. ಅರ್ಧ ಐಸ್ಕ್ರೀಮ್ ತಿಂದ ಬಳಿಕ ಅವರ ಬಾಯಯಲ್ಲಿ ಗಟ್ಟಿಯಾದ ತುಂಡೊಂದು ಸಿಕ್ಕಿದೆ.
ಅಡಿಕೆ ಅಥವಾ ಚಾಕಲೇಟ್ ಇರಬಹುದೆಂದು ಅವರು ಭಾವಿಸಿದ್ದರು. ಅದು ಏನೆಂದು ಪರೀಕ್ಷಿಸಲು ಉಗುಳಿದ್ದಾರೆ. ಆಗ ಅದು ಮಾನವನ ಕೈ ಬೆರಳು ಎಂದು ತಿಳಿದು ಬಂದಿದೆ ಎಂದು ಡಾ.ಸೆರರಾವ್ ಹೇಳಿದರು.
ನಾನು ಒಬ್ಬ ವೈದ್ಯೆ. ಹಾಗಾಗಿ ದೇಹದ ಅಂಗಾಂಗಗಳು ಹೇಗೆ ಕಾಣುತ್ತವೆ ಎಂಬುದು ನನಗೆ ಗೊತ್ತಿದೆ ಎಂದು ಡಾ.ಸೆರಾರಾವ್ ಹೇಳಿದರು. ನಾನು ಅದನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ ನನಗೆ ಬೆರಳಿನ ಉಗುರುಗಳು ಮತ್ತು ಬೆರಳಚ್ಚುಗಳನ್ನು ನೋಡಿದೆ.

ಅದು ಹೆಬ್ಬೆರಳು ತೋರುತ್ತಿತ್ತು. ನನಗೆ ಶಾಕ್ ಆಯಿತು. ನನಗೆ ಈಗಲೂ ಯಾವುದೇ ಆಹಾರ ನೋಡಿದರೂ ಆ ಬೆರಳು ನೆನಪಾಗುತ್ತದೆ. ಅದರಿಂದ ಹೊರಬರಲು ಆಗುತ್ತಿಲ್ಲ ಎಂದು ವೈದ್ಯರು ಹೇಳಿಕೊಂಡಿದ್ದಾರೆ.
-
ಬಾಳೆಹಣ್ಣು ತಿನ್ನುವ ಸರಿಯಾದ ಕ್ರಮ ಯಾವುದು? ಈ ಸಣ್ಣ ತಪ್ಪು ನಿಮ್ಮ ಆರೋಗ್ಯವನ್ನೇ ಹಾಳು ಮಾಡಬಹುದು -
ನಿಮ್ಮ ಮನೆಯ ವಾಸ್ತು ಸರಿಯಿದೆಯೇ? ಶಾಂತಿ ಮತ್ತು ಪ್ರಗತಿಗಾಗಿ ಇಲ್ಲಿವೆ ಪರಿಹಾರಗಳು -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ












Click it and Unblock the Notifications