Pinky Mali: ಅಜಿತ್ ಪವಾರ್ ಅವರೊಂದಿಗೆ ಮೃತಪಟ್ಟ ವಿಮಾನ ಕ್ಯಾಬಿನ್ ಸಿಬ್ಬಂದಿ ಪಿಂಕಿ ಮಾಲಿ ಯಾರು?
ಮುಂಬೈ: ಬಾರಾಮತಿ ವಿಮಾನ ನಿಲ್ದಾಣದಲ್ಲಿಲ್ಯಾಂಡಿಂಗ್ ವೇಳೆ ಪತನಗೊಂಡ ವಿಶೇಷ ವಿಮಾನದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರೊಂದಿಗೆ ಐವರು ಮೃತಪಟ್ಟಿದ್ದಾರೆ. ಇದರಲ್ಲಿ ಉತ್ತರ ಪ್ರದೇಶ ಮೂಲಕ ಕ್ಯಾಬಿನ್ ಸಿಬ್ಬಂದಿ 29 ವರ್ಷದ ಪಿಂಕಿ ಮಾಲಿ (Pinky Mali) ಸಹ ಒಬ್ಬರು. ಇಂದಿನ ಅಪಘಾತದಲ್ಲಿ ಪಿಂಕಿ ಮಾಲಿ ಬದುಕು ದುರಂತ ಅಂತ್ಯ ಕಂಡ ಘಟನೆಯು, ಮಹಾರಾಷ್ಟ್ರದಲ್ಲಿನ ಅವರ ಕುಟುಂಬ ಮತ್ತು ಉತ್ತರ ಪ್ರದೇಶದಲ್ಲಿರುವ ಅವರ ಹಳ್ಳಿ ಜನರಿಗೆ ಬರ ಸಿಡಿಲು ಬಂಡಿದಂತಾಗಿತ್ತು. ಕುಟುಂಬಸ್ಥರು ಪಿಂಕಿ ಮಾಲಿ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಯಾರು ಈ ಪಿಂಕಿ ಮಾಲಿ?
ಮುಂಬೈನ ವರ್ಲಿಯ ಸೆಂಚುರಿ ಕ್ವಾರ್ಟರ್ನಲ್ಲಿ ಕುಟುಂಬ ಸಮೇತರಾಗಿ ಪಿಂಕಿ ಮಾಲಿ ವಾಸಿಸುತ್ತಿದ್ದರು. ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮಹಾರಾಷ್ಟ್ರ ಪಂಚಾಯತಿ ಚುನಾವಣಾ ಪ್ರಚಾರ ಸಂಬಂಧ ಅಜಿತ್ ಪವಾರ್ ಅವರ ತೆರಳುತ್ತಿದ್ದ ವಿಶೇಷ ವಿಮಾನದಲ್ಲಿ ಈ ಸಿಬ್ಬಂದಿ ಪಿಂಕ್ ಮಾಲಿ ಅವರು ಇದ್ದರು. ಈ ವಿಮಾನ ಅಪಘಾತಕ್ಕೀಡಾದ ಕಾರಣ ಯಾರು ಬದುಕುಳಿಯದಿರುವುದು ವಿಷಾಧನೀಯ.

ಪೂರ್ವ ಉತ್ತರ ಪ್ರದೇಶದ ಜಿಲ್ಲಾ ಕೇಂದ್ರದಿಂದ 40 ಕಿಲೋ ಮೀಟರ್ ದೂರದಲ್ಲಿ ಭೈನ್ಸಾ ಗ್ರಾಮದಲ್ಲಿ ಪಿಂಕಿ ಅವರ ಪೂರ್ವಜರ ಮನೆ ಇದೆ. ಈ ಗ್ರಾಮದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಆಗಾಗ ಪಿಂಕಿ ಮಾಲಿ ಅವರು ಹೋಗಿ ಬರುತ್ತಿದ್ದರು. ಸ್ಥಳೀಯ ನಿವಾಸಿ ಅಶೋಕ್ ಸಿಂಗ್ ಅವರು ಪಿಂಕಿಯ ತಂದೆ ನಿಯಮಿತವಾಗಿ ಗ್ರಾಮಕ್ಕೆ ಭೇಟಿ ನೀಡುತ್ತಿದ್ದರು. ಪಿಂಕಿ ಮಾಲಿ ಅವರು ಕಡೆಯದಾಗಿ ಸುಮಾರು ಒಂದೂವರೆ ವರ್ಷದ ಹಿಂದೆ ತಮ್ಮ ಹಳ್ಳಿಗೆ ಭೇಟಿ ನೀಡಿದ್ದರು.
ಮಗಳು ಪಿಂಕಿ ಜತೆಗಿನ ಕೊನೆ ಸಂಭಾಷಣೆ ನೆನೆದ ತಂದೆ ಕಣ್ಣೀರು
ಪಿಂಕ್ ಮಾಲಿಯ ಅಜ್ಜ ಬಾಬು ರಾಮ್ ಕಳೆದ ವರ್ಷವೇ ನಿಧನರಾಗಿದ್ದರು. ಈ ವರ್ಷ ಪಿಂಕಿ ಮಾಲಿ ನಿಧನರಾಗಿದ್ದು, ಕುಟುಂಬಸ್ಥರನ್ನು ತುಂಬಾ ಘಾಸಿ ಮಾಡಿದೆ. ಪಿಂಕಿ ಮಾಲಿ ಅವರ ಮದುವೆ ಆಗಿದ್ದು, ಕುಟುಂಬಸ್ಥರೆಲ್ಲರು ಸದ್ಯ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಶಿವಸೇನಾ ನಾಯಕರಾದ ತಂದೆ ಶಿವ ಕುಮಾರ್ ಮಾಲಿ ಅವರು ಮಗಳು ಪಿಂಕಿ ಜೊತೆಗಿನ ಕೊನೆ ಸಂಭಾಷಣೆ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಅಜಿತ್ ಪವಾರ್ ಅವರೊಂದಿಗೆ ವಿಮಾನದಲ್ಲಿ ತೆರಳಿದ ಬಳಿಕ ಅವರೊಂದಿಗೆ ಮಾತನಾಡಿಸುವುದಾಗಿ ತಂದೆಗೆ ಪಿಂಕಿ ಹೇಳಿದ್ದನ್ನು ನೆನೆದು ಅವರು ಭಾವುಕರಾದರು. ಮಗಳೊಂದಿಗಿನ ಅದೇ ಕೊನೆಯ ಸಂಭಾಷಣೆಯಾಗಿದೆ.
ಪಿಂಕಿಯ ಸಹೋದರ ಕರಣ್ ಅವರು ಇಂದು ಬೆಳಗ್ಗೆ ಆಕೆಯೊಂದಿಗೆ ಮಾತನಾಡಿದ್ದರು. ತಾನು ಬಾರಾಮತಿಯಿಂದ ನಾಂದೇಡ್ಗೆ ಪ್ರಯಾಣಿಸುವುದಾಗಿ ಪಿಂಕಿ ತಿಳಿಸಿದ್ದರು. ಪಿಂಕಿಗೆ ಪ್ರೀತಿ ಎಂಬ ಸಹೋದರಿ ಇದ್ದಾರೆ. ಈ ಮೂವರು ಒಡಹುಟ್ಟಿದವರು ಮಹಾರಾಷ್ಟ್ರದಲ್ಲಿ ತಮ್ಮ ಶಿಕ್ಷಣ ಪೂರ್ಣಗೊಳಿಸಿ ವಿವಿಧ ವೃತ್ತಿಗಳಲ್ಲಿ ತೊಡಗಿದ್ದಾರೆ. ವಿಮಾನ ಪತನ ಮುನ್ನ ಪಿಂಕಿಯೊಂದಿಗೆ ನಡೆದ ಸಂಭಾಷಣೆಯೇ ಕೊನೆಯದ್ದಾಗಿದೆ.
ಎರಡನೇ ಬಾರಿಯ ಲ್ಯಾಂಡಿಂಗ್ ಯತ್ನ ವೇಳೆ ಅಪಘಾತ
ಇಂದು ಬೆಳಗ್ಗೆ 8.45 ರ ಸುಮಾರಿಗೆ ಅಜಿತ್ ಪವಾರ್ ಅವರು ಇದ್ದ ವಿಶೇಷ ವಿಮಾನ ಅಪಘಾತಕ್ಕೀಡಾಯಿತು. ಪೈಲಟ್ ಇಳಿಯುವಾಗ ಸರಿಯಾಗಿ ಲ್ಯಾಂಡಿಂಗ್ ಜಾಗ ಕಾಣಿಸಿಲ್ಲ. ಆಗ ಮತ್ತೊಮ್ಮೆ ಲ್ಯಾಂಡಿಂಗ್ಗೆ ಪ್ರಯತ್ನಿಸಿದರು. ಈ ವೇಳೆ ವಿಮಾನವು ರನ್ವೇ ಯಲ್ಲಿ ಅಪಘಾತಕ್ಕೀಡಾಗಿ ಬೆಂಕಿಗೆ ಆಹುತಿಯಾಯಿತು. ಅಜಿತ್ ಪವಾರ್, ಭದ್ರತಾ ಸಿಬ್ಬಂದಿ, ಇಬ್ಬರು ಪೈಲಟ್ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ಸದಸ್ಯೆ ಪಿಂಕಿ ಮಾಲಿ ಸ್ಥಳದಲ್ಲೇ ಮೃತಪಟ್ಟರು.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications