ರಾಹುಲ್ ಗಾಂಧಿ ಪ್ರಚಾರ ಮಾಡಿದ್ರೆ ಕಾಂಗ್ರೆಸ್ ಸೋಲೋದು ಗ್ಯಾರಂಟಿ: ಯೋಗಿ
ವಲ್ಸದ್(ಗುಜರಾತ್), ಅಕ್ಟೋಬರ್ 13: "ರಾಹುಲ್ ಗಾಂಧಿ ಎಲ್ಲಿ ಪ್ರಚಾರ ಮಾಡುತ್ತಾರೋ ಅಲ್ಲಿ ಕಾಂಗ್ರೆಸ್ ಸೋಲುವುದು ನಿಶ್ಚಿತ" ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಗುಜರಾತಿನ ರ್ಯಾಲಿಯೊಂದರಲ್ಲಿ ಭಾಗವಹಿಸಿದ್ದ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು. 'ಅಮಿತ್ ಶಾ ಗುಜರಾತಿಗೆ ಬಂದಾಗ ಇಟಲಿಗೆ ಹಾರುವ ರಾಹುಲ್ ಗಾಂಧಿ, ಈಗೇಕೆ ಗುಜರಾತಿಗೆ ಆಗಮಿಸುತ್ತಿದ್ದಾರೆ?' ಎಂದು ಅವರು ಪ್ರಶ್ನಿಸಿದರು.

'ತಮ್ಮ ಕ್ಷೇತ್ರವಾದ ಅಮೆಥಿಯಲ್ಲಿ ಯಾವುದೇ ಅಭುವರದ್ಧಿ ಕಾರ್ಯ ಕೈಗೊಳ್ಳದ ರಾಹುಲ್ ಗಾಂಧಿ ಗುಜರಾತಿನಲ್ಲೇನು ಬದಲಾವಣೆ ತಂದಾರು?' ಎಂದು ಅವರು ಅಣಕಿಸಿದರು.
'ರಾಹುಲ್ ಗಾಂಧಿ ಎಲ್ಲೆಲ್ಲಿ ಪ್ರಚಾರಕ್ಕೆ ಹೋಗುತ್ತಾರೋ ಅಲ್ಲೆಲ್ಲ ಕಾಂಗ್ರೆಸ್ ಸೋತಿದೆ. ಈ ಬಾರಿಯೂ ಅದೇ ಮರುಕಳಿಸಲಿದೆ' ಎಂದು ಈ ವರ್ಷ ಗುಜರಾತಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರ ರ್ಯಾಲಿ ನಡೆಸಿದ ಯೋಗಿ ಆದಿತ್ಯನಾಥ್ ಹೇಳಿದರು.












Click it and Unblock the Notifications