ವಾಟ್ಸಾಪ್ ನಲ್ಲಿ ಹೆಚ್ಚುತ್ತಿರುವ SBI ವಿರೋಧಿ ಆಂದೋಲನ
ಈ ಸಂದೇಶವು ಈಗಾಗಲೇ ಲಕ್ಷಾಂತರ ಜನರನ್ನು ಮುಟ್ಟಿದ್ದು ಎಲ್ಲರಲ್ಲೂ ಒಂದು ಆವೇಶ ಸೃಷ್ಟಿ ಮಾಡುವ ನಿಟ್ಟಿನಲ್ಲಿ ವಾಟ್ಸಾಪ್ ನಲ್ಲಿ ಪ್ರಸಾರ ಹಾಗೂ ಪ್ರಚಾರ ಪಡೆಯುತ್ತಿದೆ.
ಬೆಂಗಳೂರು, ಏಪ್ರಿಲ್ 3: ಜನರ ಅವಲಂಬನೆ ಹಾಗೂ ಅಸಹಾಯಕತೆಗಳ ಮೇಲೆ ಸವಾರಿ ಮಾಡುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಬುದ್ಧಿ ಕಲಿಸಬೇಕೆಂದು ಆರೋಪಿಸಿ, ಇದೇ ತಿಂಗಳ 6ರಂದು ಬ್ಯಾಂಕಿಂಗ್ ರಹಿತ ದಿನವನ್ನಾಗಿ ಆಚರಿಸಬೇಕೆಂದು ಕರೆ ನೀಡಿರುವ ಸಂದೇಶವೊಂದು ವಾಟ್ಸಾಪ್ ನಲ್ಲಿ ಹರಿದಾಡುತ್ತಿದ್ದು, ಈ ವಿಚಾರ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ.
ಆ ದಿನವನ್ನು ಬ್ಯಾಂಕಿಂಗ್ ರಹಿತ ದಿನವನ್ನಾಗಿ ಆಚರಿಸಲು ಸಾಧ್ಯವಾಗದಿದ್ದರೆ, ಇದೇ ಮಾಸಾಂತ್ಯದ 24, 25, 26 ಹಾಗೂ 27ರಂದು ಬ್ಯಾಂಕಿಂಗ್ ವ್ಯವಹಾರ ರದ್ದು ದಿನಗಳನ್ನಾಗಿ ಆಚರಿಸಿ ಬ್ಯಾಂಕ್ ಗೆ ಬಿಸಿ ಮುಟ್ಟಿಸಲು ನಿರ್ಧರಿಸಲಾಗಿದೆ.
ಸಂದೇಶದಲ್ಲಿ ಬ್ಯಾಂಕ್ ಉದ್ಯೋಗಿಗಳನ್ನು ಕಳ್ಳರು ಎಂದೂ ಸಂಬೋಧಿಸಲಾಗಿದೆ. ಈ ಸಂದೇಶವು ಈಗಾಗಲೇ ಲಕ್ಷಾಂತರ ಜನರನ್ನು ಮುಟ್ಟಿದ್ದು ಎಲ್ಲರಲ್ಲೂ ಒಂದು ಆವೇಶ ಸೃಷ್ಟಿ ಮಾಡುವ ನಿಟ್ಟಿನಲ್ಲಿ ವಾಟ್ಸಾಪ್ ನಲ್ಲಿ ಪ್ರಸಾರ ಹಾಗೂ ಪ್ರಚಾರ ಪಡೆಯುತ್ತಿದೆ.
ಉಳಿತಾಯ ಖಾತೆಗಳಲ್ಲಿ ಕನಿಷ್ಠ ಠೇವಣಿ ಹೊಂದಿರದ ಗ್ರಾಹಕರ ಮೇಲೆ ದಂಡ ವಿಧಿಸುವ ನಿಯಮವನ್ನು ಐದು ವರ್ಷಗಳ ನಂತರ, ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತೆ ಜಾರಿಗೆ ತಂದಿದೆ. ಅವುಗಳ ಮುಖ್ಯಾಂಶ ಹಾಗೂ ಸಂದೇಶದಲ್ಲಿ ಮತ್ತೇನಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಕೆಲ ದಿನಗಳ ಹಿಂದೆ ಪ್ರಕಟವಾಗಿದ್ದ ನಿಯಮ
ಹೊಸ ನಿಯಮಗಳನ್ವಯ, ಮೆಟ್ರೋ ಪಾಲಿಟನ್ ನಗರಗಳಲ್ಲಿರುವವರ ಖಾತೆಯಲ್ಲಿ ಕನಿಷ್ಠ 5 ಸಾವಿರ ರು., ದೊಡ್ಡ ನಗರಗಳಲ್ಲಿ 3 ಸಾವಿರ ರು., ತಾಲೂಕು ಕೇಂದ್ರಗಳಂಥ ಊರುಗಳಲ್ಲಿ 2 ಸಾವಿರ ರು., ಗ್ರಾಮೀಣ ಪ್ರದೇಶಗಳಲ್ಲಿನ ಜನರು 1 ಸಾವಿರ ರು. ಹಣವನ್ನು ಕನಿಷ್ಠ ಠೇವಣಿಯಾಗಿ ಇಟ್ಟುಕೊಳ್ಳಲೇಬೇಕಿದೆ. ಇದಕ್ಕೆ ತಪ್ಪಿದಲ್ಲಿ ರು. 200 ಹಾಗೂ ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ದಂಡ ವಿಧಿಸಲಾಗುತ್ತದೆ ಎಂದು ಬ್ಯಾಂಕ್ ಕೆಲ ದಿನಗಳ ಹಿಂದೆಯೇ ಪ್ರಕಟಿಸಿದೆ.

ಹಣ ಹಿಂಪಡೆಯಲು ತೆರಬೇಕು ಶುಲ್ಕ
ಇದಲ್ಲದೆ ತಿಂಗಳಿಗೆ ಖಾತೆಗೆ ಕೇವಲ ಮೂರು ಬಾರಿ ಮಾತ್ರ ಶುಲ್ಕ ರಹಿತ ಜಮೆಗೆ ಅವಕಾಶ ನೀಡಲಾಗಿದೆ. ಮೂರು ಅವಕಾಶಗಳ ನಂತರ ಜಮೆ ಮಾಡುವ ಪ್ರತಿಯೊಂದು ವ್ಯವಹಾರಕ್ಕೂ 50 ರು. ಶುಲ್ಕ ತೆರಬೇಕಿದೆ. ಇಷ್ಟೇ ಅಲ್ಲ, ಹಣ ಹಿಂಪಡೆಯಲೂ ಇದೇ ನಿಯಮ ಅನ್ವಯವಾಗುತ್ತದೆ.

ಮಿಕ್ಕ ಎಟಿಎಂಗಳಿಗೆ ಒಂದು ನಿಯಮ
ಇನ್ನು, ಎಸ್ ಬಿಐ ಎಟಿಎಂಗಳಲ್ಲಿ ಹಣ ಡ್ರಾ ಮಾಡಲು ತಿಂಗಳಿಗೆ ಐದು ಬಾರಿ ಉಚಿತ ಅವಕಾಶ ನೀಡಲಾಗಿದೆ. ಆನಂತರದ ಪ್ರತಿ ಎಟಿಎಂ ವ್ಯವಹಾರಗಳಿಗೆ 10 ರು. ಶುಲ್ಕ ಅನ್ವಯವಾಗುತ್ತದೆ. ಇತರ ಬ್ಯಾಂಕ್ ಗಳ ಎಟಿಎಂಗಳಲ್ಲಿ ಶುಲ್ಕ ರಹಿತ ವಿತ್ ಡ್ರಾ ಅವಕಾಶಗಳ ಮಿತಿಯನ್ನು 3ಕ್ಕೆ ಇಳಿಸಲಾಗಿದ್ದು, ಆ ನಂತರದ ಪ್ರತಿ ವ್ಯವಹಾರಕ್ಕೆ 25 ರು. ಶುಲ್ಕ ವಿಧಿಸಲಾಗಿದೆ.

ಸಂದೇಶದ ಮೂಲಕ ಆಂದೋಲನಕ್ಕೆ ಪ್ರಯತ್ನ
ಇವೇ ಮುಂತಾದ ಎಲ್ಲಾ ಬ್ಯಾಂಕಿಂಗ್ ನಿಯಮಗಳ ವಿರುದ್ಧ ದಂಗೆಯೆದ್ದಿರುವ ಕೆಲವರು (ಈ ಸಂದೇಶ ಸೃಷ್ಟಿಸಿದವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ) ಒಂದು ಜನಾಂದೋಲನ ರೂಪಿಸಲು ಮುಂದಾಗಿದ್ದಾರೆ. ಮೇಲೆ ಸೂಚಿಸಲಾಗಿರುವ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಬ್ಯಾಂಕುಗಳಿಗೆ ಬಿಸಿ ಮುಟ್ಟಿಸಬೇಕು ಎಂದು ಕರೆ ನೀಡಿಲಾಗಿದೆ.

ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ
ಬ್ಯಾಂಕಿಂಗ್ ವ್ಯವಹಾರ ನಿಲ್ಲಿಸುವುದು ಕಷ್ಟ. ಆದರೆ ಅಸಂಭವವೇನಲ್ಲ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದ್ದು, ಬನ್ನಿ ನಮ್ಮೆಲ್ಲರ (ಗ್ರಾಹಕರ) ಒಗ್ಗಟ್ಟನ್ನು ಬ್ಯಾಂಕುಗಳಿಗೆ ಮನವರಿಕೆ ಮಾಡಿಕೊಡೋಣ ಎಂದು ಕರೆ ನೀಡಿವೆ. ಇದಲ್ಲದೆ, ಕೇಂದ್ರ ಸರ್ಕಾರವು ಸ್ವಚ್ಛ ಭಾರತ್ ಸೆಸ್, ಸೇವಾ ತೆರಿಗೆ, ವಿದ್ಯಾಭ್ಯಾಸ ಸೆಸ್, ಕೊಳ್ಳುವಿಕೆ ಮೇಲೆ ಸೆಸ್.... ಹೀಗೆ ನಾನಾ ರೀತಿಗಳಲ್ಲಿ, ನಾನಾ ರೂಪದಲ್ಲಿ ತೆರಿಗೆಗಳನ್ನು ಹೇರಿ ನಮ್ಮನ್ನು ಸುಲಿಗೆ ಮಾಡುತ್ತಿವೆ ಎಂದೂ ಸಂದೇಶದಲ್ಲಿ ಅಸಮಾಧಾನ ಹೊರಹಾಕಲಾಗಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications