Get Updates
Get notified of breaking news, exclusive insights, and must-see stories!

Jagannath temple: 46 ವರ್ಷಗಳ ಬಳಿಕ ತೆರೆದ ಪುರಿ ಜಗನ್ನಾಥ ದೇವಸ್ಥಾನ ರತ್ನ ಭಂಡಾರ: ಏನೆಲ್ಲಾ ಇದೆ ಈ ಖಜಾನೆಯಲ್ಲಿ?

ಪುರಿ ಜಗನ್ನಾಥರ ದೇವಾಲಯದಲ್ಲಿರುವ ರತ್ನ ಭಂಢಾರವನ್ನು 46 ವರ್ಷಗಳ ಬಳಿಕ ತೆರೆಯಲಾಗಿದೆ. ರಾಜ್ಯ ಸರ್ಕಾರ ನೇಮಿಸಿರುವ 11 ಜನರ ತಂಡ ಈ ಕಾರ್ಯವನ್ನು ನಡೆಸಿದೆ. ಒರಿಸ್ಸಾ ಹೈಕೋರ್ಟ್ ನ್ಯಾಯಾಧೀಶ ಬಿಸ್ವನಾಥ್ ರಾತ್, ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ (SJTA) ಮುಖ್ಯ ಆಡಳಿತಾಧಿಕಾರಿ ಅರಬಿಂದ ಪಾಧೀ, ಎಎಸ್ಐ ಸೂಪರಿಂಟೆಂಡೆಂಟ್ ಡಿಬಿ ಗಡನಾಯಕ್ ಮತ್ತು ಪುರಿಯ ಪಟ್ಟದ ರಾಜ ಗಜಪತಿ ಮಹಾರಾಜನ ಪ್ರತಿನಿಧಿ ತಂಡದಲ್ಲಿದ್ದರು.

ಅಧಿಕಾರಿಗಳ ಪ್ರಕಾರ, ರತ್ನ ಭಂಡಾರ್‌ನಲ್ಲಿರುವ ಬೆಲೆಬಾಳುವ ವಸ್ತುಗಳ ಡಿಜಿಟಲ್ ಪಟ್ಟಿಯನ್ನು ಸರ್ಕಾರ ಮಾಡಲಿದೆ, ಅದು ಅವುಗಳ ತೂಕ ಮತ್ತು ನಿರ್ಮಾಣದಂತಹ ವಿವರಗಳನ್ನು ಹೊಂದಿರುತ್ತದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಧೀಕ್ಷಕ ಡಿ.ಬಿ.ಗಡ್ನಾಯಕ್ ಮಾತನಾಡಿ, ದುರಸ್ತಿ ಕಾರ್ಯಕ್ಕಾಗಿ ಎಂಜಿನಿಯರ್‌ಗಳು ರತ್ನ ನಿಕ್ಷೇಪವನ್ನು ಸಮೀಕ್ಷೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

What s Inside Lord Jagannath Temple s Ratna Bhandar Reopened After 46 Years

ದೇವಾಲಯದ ಖಜಾನೆಯನ್ನು ಕೊನೆಯದಾಗಿ 46 ವರ್ಷಗಳ ಹಿಂದೆ 1978 ರಲ್ಲಿ ಅಧಿಕೃತವಾಗಿ ತೆರೆಯಲಾಗಿತ್ತು. ಖಜಾನೆಯನ್ನು ತೆರೆಯುವ ಮೊದಲು, ಆಡಳಿತವು ಆರು ಭಾರವಾದ ಮರದ ಪೆಟ್ಟಿಗೆಗಳನ್ನು ಆದೇಶಿಸಿತು. ಒಂದು ಪೆಟ್ಟಿಗೆಯನ್ನು ಎತ್ತಲು 8 ರಿಂದ 10 ಜನರು ಬೇಕಾಗಿದ್ದಾರೆ. ಇವುಗಳನ್ನು ರತ್ನ ಭಂಡಾರಕ್ಕೆ ಕಳುಹಿಸಲಾಗಿದೆ.

ಭಂಢಾರದಲ್ಲಿ ಏನೆಲ್ಲಾ ಇದೆ?

ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿಯು ಹೈಕೋರ್ಟ್‌ನಲ್ಲಿ ನೀಡಿರುವ ಪ್ರಮಾಣ ಪತ್ರದ ಪ್ರಕಾರ ರತ್ನ ಭಂಡಾರದಲ್ಲಿ ಮೂರು ಕೊಠಡಿಗಳಿವೆ. 25 ರಿಂದ 40 ಚದರ ಅಡಿ ಒಳಗಿನ ಕೋಣೆ 50 ಕೆಜಿ 600 ಗ್ರಾಂ ಚಿನ್ನ ಮತ್ತು 134 ಕೆಜಿ 50 ಗ್ರಾಂ ಬೆಳ್ಳಿಯನ್ನು ಒಳಗೊಂಡಿದೆ. ಇವುಗಳನ್ನು ಎಂದಿಗೂ ಬಳಸಲಾಗಿಲ್ಲ.

What s Inside Lord Jagannath Temple s Ratna Bhandar Reopened After 46 Years

ಹೊರ ಕೊಠಡಿಯಲ್ಲಿ 95 ಕೆಜಿ 320 ಗ್ರಾಂ ಚಿನ್ನ ಮತ್ತು 19 ಕೆಜಿ 480 ಗ್ರಾಂ ಬೆಳ್ಳಿ ಇದೆ. ಇವುಗಳನ್ನು ಹಬ್ಬ ಹರಿದಿನಗಳಲ್ಲಿ ಬಳಸಲಾಗುತ್ತದೆ. ಅದೇ ಸಮಯದಲ್ಲಿ, ಪ್ರಸ್ತುತ ಕೋಣೆಯಲ್ಲಿ ಮೂರು ಕೆಜಿ 480 ಗ್ರಾಂ ಚಿನ್ನ ಮತ್ತು 30 ಕೆಜಿ 350 ಗ್ರಾಂ ಬೆಳ್ಳಿ ಇದೆ. ಇವುಗಳನ್ನು ದೈನಂದಿನ ಆಚರಣೆಗಳಿಗೆ ಬಳಸಲಾಗುತ್ತದೆ.

ಯಾವಾಗ ತೆರೆಯಾಗಲಿತ್ತು?

ಈ ಹಿಂದೆ 1905, 1926 ಹಾಗೂ 1978ರಲ್ಲಿ ರತ್ನ ಭಂಡಾರ ತೆರೆದು ಅಮೂಲ್ಯ ವಸ್ತುಗಳ ಪಟ್ಟಿ ತಯಾರಿಸಲಾಗಿತ್ತು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮುಖ್ಯಸ್ಥ ಅರವಿಂದ ಪಾಡಿ ತಿಳಿಸಿದ್ದಾರೆ. ರತ್ನ ಭಂಡಾರ್ ಅನ್ನು ಕೊನೆಯದಾಗಿ 14 ಜುಲೈ 1985 ರಂದು ತೆರೆಯಲಾಗಿತ್ತು. ಆ ಸಮಯದಲ್ಲಿ ಅದನ್ನು ದುರಸ್ತಿ ಮಾಡಿ ಮುಚ್ಚಲಾಗಿತ್ತು. ಇದಾದ ನಂತರ ರತ್ನಾ ಭಂಡಾರ ತೆರೆಯಲೇ ಇಲ್ಲ ಮತ್ತು ಅದರ ಕೀ ಕೂಡ ಕಾಣೆಯಾಗಿದೆ.

What s Inside Lord Jagannath Temple s Ratna Bhandar Reopened After 46 Years

ಖಜಾನೆಯಲ್ಲಿ ಏನಿದೆ?

ಖಜಾನೆಯು ಜಗನ್ನಾಥನಿಗೆ ಅರ್ಪಿಸಲಾದ ಅಮೂಲ್ಯವಾದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಸಂರಕ್ಷಿಸಲಾಗಿದೆ. ಒಡಿಶಾ ನಿಯತಕಾಲಿಕದ ಪ್ರಕಾರ, ಒಡಿಶಾದ ರಾಜ ಅನಂಗಭೀಮ ದೇವ್ ಸರ್ವಶಕ್ತನಿಗೆ ಆಭರಣಗಳನ್ನು ಸಿದ್ಧಪಡಿಸಲು 2.5 ಲಕ್ಷ ಮಾಧಸ್ ಚಿನ್ನವನ್ನು ದಾನ ಮಾಡಿದ್ದರು. ಈ ಖಜಾನೆಯಲ್ಲಿ ಎರಡು ಕೋಣೆಗಳು ಮಹತ್ವದಾಗಿವೆ.

ಹೊರ ಖಜಾನೆಯಲ್ಲಿ ಜಗನ್ನಾಥನ ಬಂಗಾರದ ಮುಕುಟ, ತಲಾ 120 ತೊಲಗಳ ಮೂರು ಚಿನ್ನದ ನೆಕ್ಲೇಸ್‌ಗಳುಇದೆ ಎಂದು ಮ್ಯಾಗಜೀನ್ ವರದಿ ಮಾಡಿದೆ.

ಒಳಗಿನ ಖಜಾನೆಯಲ್ಲಿ ಸುಮಾರು 74 ಚಿನ್ನದ ಆಭರಣಗಳನ್ನು ಇಡಲಾಗಿದ್ದು, ಪ್ರತಿಯೊಂದೂ ಆಭರಣವು 100 ತೊಲಗಳಿಗಿಂತ ಹೆಚ್ಚು ತೂಕವನ್ನು ಹೊಂದಿದೆ. ಚಿನ್ನ, ವಜ್ರ, ಹವಳಗಳು ಮತ್ತು ಮುತ್ತುಗಳಿಂದ ಮಾಡಿದ ಫಲಕಗಳಿವೆ ಎಂದು ವರದಿ ಹೇಳಿದೆ. ಇದಲ್ಲದೇ 140ಕ್ಕೂ ಹೆಚ್ಚು ಬೆಳ್ಳಿಯ ಆಭರಣಗಳನ್ನು ಖಜಾನೆಯಲ್ಲಿ ಇಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+