ಝಿಕಾ ವೈರಸ್ ಎಂದರೇನು? ಹೇಗೆ ಹರಡುತ್ತದೆ?
ಬೆಂಗಳೂರು, ಫೆಬ್ರವರಿ 03: ಜಾಗತಿಕ ಮಟ್ಟದಲ್ಲಿ ಆತಂಕ, ಭಯ ಸೃಷ್ಟಿ ಮಾಡಿರುವ ಝಿಕಾ ವೈರಾಣು ಎಂದರೇನು? ಇದು ಹೇಗೆ ಹರಡುತ್ತದೆ? ಇದರ ಮೂಲ ಎಲ್ಲಿ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.
ಅಮೆರಿಕವನ್ನು ನಡುಗಿಸುತ್ತಿರುವ ವೈರಸ್ ಭಾರತಕ್ಕೂ ಕಾಲಿಡಲಿದೆ ಎಂದು ಹೇಳಲಾಗುತ್ತಿದ್ದು ಕೇಂದ್ರ ಸರ್ಕಾರ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.[ಎಚ್ಚರ.. ಅಸುರಕ್ಷಿತ ಲೈಂಗಿಕ ಸಂಪರ್ಕ ಝಿಕಾ ವೈರಸ್ ತರಬಹುದು]
ಹುಟ್ಟಲಿರುವ ಮಗುವಿನ ಮೇಲೆಯೇ ಪರಿಣಾಮ ಬೀರಲಿರುವ ವೈರಸ್ ನ ಹತ್ತು-ಹಲವು ಕರಾಳ ಮುಖಗಳನ್ನು ತಿಳಿದುಕೊಳ್ಳಲೇಬೇಕು.. ಈ ಎಲ್ಲ ಅಂಶಗಳ ಮೇಲೆ ಒಂದು ನೋಟ ಇಲ್ಲಿದೆ..

ಝಿಕಾ ವೈರಸ್ ಎಂದರೇನು?
ಸೊಳ್ಳೆಯಿಂದ ಹರಡುವ ವೈರಸ್ ಇದಾಗಿದ್ದು ಡೆಂಗ್ಯೂ ತರಹದ ರೋಗ ಲಕ್ಷಣಗಳನ್ನು ತರಬಹುದು. ಜಾಂಡಿಸ್ ಬಗೆಯ ಲಕ್ಷಣಗಳು ರೋಗಿಯಲ್ಲಿ ಗೋಚರವಾಗಬಹುದು. ಕೆಂಪು ಕೆಣ್ಣು, ಜ್ವರ, ಗಂಟು ನೋವು ಸಾಮಾನ್ಯ ಲಕ್ಷಣ, ಸಾವು ಸಂಭವಿಸುವುದು ವಿರಳ.

ಹೇಗೆ ಹರಡುತ್ತದೆ?
ಎಡಿಸ್ ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ಗರ್ಭಿಣಿಯರಿಗೆ ಸೋಂಕು ತಗುಲಿದರೆ ಮಗುವಿಗೂ ವರ್ಗಾವಣೆಯಾಗುತ್ತದೆ. ದೇಹದೊಳಗೆ ಪ್ರವೇಶ ಮಾಡಿದ ವೈರಸ್ ನ ಪರಿಣಾಮ ಏಳು ದಿನಗಳ ನಂತರ ಆರಂಭವಾಗುತ್ತದೆ.

ಲೈಂಗಿಕ ಸಂಪರ್ಕದಿಂದ ಹರಡಬಹುದು
ಲೈಂಗಿಕ ಸಂಪರ್ಕದಿಂದಲೂ ಹರಡಬಹುದು ಎಂದು ಅಮೆರಿಕಾದ ಸಂಸ್ಥೆಯೊಂದು ತಿಳಿಸಿದೆ. ಎದೆಹಾಲು ಕುಡಿಸುವುದರಿಂದ ಹರಡಲ್ಲ ಆದರೆ ರಕ್ತ ಸೇರಿದರೆ ಹರಡುತ್ತದೆ.

ಝಿಕಾ ಎಲ್ಲೆಲ್ಲಿದೆ?
ಸದ್ಯ 23 ದೇಶಗಳಲ್ಲಿ ಕಾಣಿಸಿಕೊಂಡಿದೆ. ಕೆರೆಬಿಯನ್, ಮಧ್ಯ ಅಮೆರಿಕ, ದಕ್ಷಿಣ ಅಮೆರಿಕ, ಮೆಕ್ಸಿಕೋದಲ್ಲಿ ಹಾವಳಿ ಜೋರಾಗಿದೆ. ಈಜಿಫ್ಟ್, ನೈಜಿರಿಯಾ, ಕೊಲಂಬಿಯಾ, ಮಲೇಷಿಯಾದಲ್ಲೂ ಇದ್ದು ಪಾಕಿಸ್ತಾನ, ಭಾರತ, ಥೈಲಾಂಡ್ ಭೀತಿ ಎದುರಿಸುತ್ತಿವೆ.

ಝಿಕಾಕ್ಕೆ ಪರಿಹಾರವೇನು?
ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸಿದ ನಂತರ ದೇಹದಲ್ಲಿ ವೈರಸ್ ಯಾವ ಪ್ರಮಾಣದಲ್ಲಿದೆ ಎಂಬುದನ್ನು ಪತ್ತೆ ಮಾಡಿಕೊಳ್ಳಲಾಗುತ್ತದೆ. ರೋಗಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದರ ಮೂಲಕ ನಿಧಾನವಾಗಿ ಹತೋಟಿಗೆ ತರಬಹುದು.

ಚಿಕಿತ್ಸಾಕ್ರಮ ಏನು?
ಸದ್ಯ ಯಾವುದೇ ನಿರ್ದಿಷ್ಟ ಚಿಕಿತ್ಸಾ ಕ್ರಮವನ್ನು ಕಂಡುಹಿಡಿಯಲಾಗಿಲ್ಲ. ರೋಗಿಯ ಸ್ಥಿತಿಯ ಆಧಾರದ ಮೇಲೆ ಔಷಧಗಳನ್ನು ನೀಡಲಾಗುತ್ತಿದೆ.

ಔಷಧ ಇದೆಯೇ?
ಔಷಧ ಕಂಡುಹಿಡಿಯಲು ಬಿಲಿಯನ್ ಗಟ್ಟಲೇ ಡಾಲರ್ ವೆಚ್ಚ ತಗುಲಬಹುದು. ಇನೊವಿಯೋ, ಹುವೈ ಬಯೋಟೆಕ್, ಜಿಎಸ್ ಕೆ ಯಂಥ ಕಂಪನಿಗಳು ಈ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications