ಝಿಕಾ ವೈರಸ್ ಎಂದರೇನು? ಹೇಗೆ ಹರಡುತ್ತದೆ?
ಬೆಂಗಳೂರು, ಫೆಬ್ರವರಿ 03: ಜಾಗತಿಕ ಮಟ್ಟದಲ್ಲಿ ಆತಂಕ, ಭಯ ಸೃಷ್ಟಿ ಮಾಡಿರುವ ಝಿಕಾ ವೈರಾಣು ಎಂದರೇನು? ಇದು ಹೇಗೆ ಹರಡುತ್ತದೆ? ಇದರ ಮೂಲ ಎಲ್ಲಿ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.
ಅಮೆರಿಕವನ್ನು ನಡುಗಿಸುತ್ತಿರುವ ವೈರಸ್ ಭಾರತಕ್ಕೂ ಕಾಲಿಡಲಿದೆ ಎಂದು ಹೇಳಲಾಗುತ್ತಿದ್ದು ಕೇಂದ್ರ ಸರ್ಕಾರ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.[ಎಚ್ಚರ.. ಅಸುರಕ್ಷಿತ ಲೈಂಗಿಕ ಸಂಪರ್ಕ ಝಿಕಾ ವೈರಸ್ ತರಬಹುದು]
ಹುಟ್ಟಲಿರುವ ಮಗುವಿನ ಮೇಲೆಯೇ ಪರಿಣಾಮ ಬೀರಲಿರುವ ವೈರಸ್ ನ ಹತ್ತು-ಹಲವು ಕರಾಳ ಮುಖಗಳನ್ನು ತಿಳಿದುಕೊಳ್ಳಲೇಬೇಕು.. ಈ ಎಲ್ಲ ಅಂಶಗಳ ಮೇಲೆ ಒಂದು ನೋಟ ಇಲ್ಲಿದೆ..

ಝಿಕಾ ವೈರಸ್ ಎಂದರೇನು?
ಸೊಳ್ಳೆಯಿಂದ ಹರಡುವ ವೈರಸ್ ಇದಾಗಿದ್ದು ಡೆಂಗ್ಯೂ ತರಹದ ರೋಗ ಲಕ್ಷಣಗಳನ್ನು ತರಬಹುದು. ಜಾಂಡಿಸ್ ಬಗೆಯ ಲಕ್ಷಣಗಳು ರೋಗಿಯಲ್ಲಿ ಗೋಚರವಾಗಬಹುದು. ಕೆಂಪು ಕೆಣ್ಣು, ಜ್ವರ, ಗಂಟು ನೋವು ಸಾಮಾನ್ಯ ಲಕ್ಷಣ, ಸಾವು ಸಂಭವಿಸುವುದು ವಿರಳ.

ಹೇಗೆ ಹರಡುತ್ತದೆ?
ಎಡಿಸ್ ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ಗರ್ಭಿಣಿಯರಿಗೆ ಸೋಂಕು ತಗುಲಿದರೆ ಮಗುವಿಗೂ ವರ್ಗಾವಣೆಯಾಗುತ್ತದೆ. ದೇಹದೊಳಗೆ ಪ್ರವೇಶ ಮಾಡಿದ ವೈರಸ್ ನ ಪರಿಣಾಮ ಏಳು ದಿನಗಳ ನಂತರ ಆರಂಭವಾಗುತ್ತದೆ.

ಲೈಂಗಿಕ ಸಂಪರ್ಕದಿಂದ ಹರಡಬಹುದು
ಲೈಂಗಿಕ ಸಂಪರ್ಕದಿಂದಲೂ ಹರಡಬಹುದು ಎಂದು ಅಮೆರಿಕಾದ ಸಂಸ್ಥೆಯೊಂದು ತಿಳಿಸಿದೆ. ಎದೆಹಾಲು ಕುಡಿಸುವುದರಿಂದ ಹರಡಲ್ಲ ಆದರೆ ರಕ್ತ ಸೇರಿದರೆ ಹರಡುತ್ತದೆ.

ಝಿಕಾ ಎಲ್ಲೆಲ್ಲಿದೆ?
ಸದ್ಯ 23 ದೇಶಗಳಲ್ಲಿ ಕಾಣಿಸಿಕೊಂಡಿದೆ. ಕೆರೆಬಿಯನ್, ಮಧ್ಯ ಅಮೆರಿಕ, ದಕ್ಷಿಣ ಅಮೆರಿಕ, ಮೆಕ್ಸಿಕೋದಲ್ಲಿ ಹಾವಳಿ ಜೋರಾಗಿದೆ. ಈಜಿಫ್ಟ್, ನೈಜಿರಿಯಾ, ಕೊಲಂಬಿಯಾ, ಮಲೇಷಿಯಾದಲ್ಲೂ ಇದ್ದು ಪಾಕಿಸ್ತಾನ, ಭಾರತ, ಥೈಲಾಂಡ್ ಭೀತಿ ಎದುರಿಸುತ್ತಿವೆ.

ಝಿಕಾಕ್ಕೆ ಪರಿಹಾರವೇನು?
ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸಿದ ನಂತರ ದೇಹದಲ್ಲಿ ವೈರಸ್ ಯಾವ ಪ್ರಮಾಣದಲ್ಲಿದೆ ಎಂಬುದನ್ನು ಪತ್ತೆ ಮಾಡಿಕೊಳ್ಳಲಾಗುತ್ತದೆ. ರೋಗಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದರ ಮೂಲಕ ನಿಧಾನವಾಗಿ ಹತೋಟಿಗೆ ತರಬಹುದು.

ಚಿಕಿತ್ಸಾಕ್ರಮ ಏನು?
ಸದ್ಯ ಯಾವುದೇ ನಿರ್ದಿಷ್ಟ ಚಿಕಿತ್ಸಾ ಕ್ರಮವನ್ನು ಕಂಡುಹಿಡಿಯಲಾಗಿಲ್ಲ. ರೋಗಿಯ ಸ್ಥಿತಿಯ ಆಧಾರದ ಮೇಲೆ ಔಷಧಗಳನ್ನು ನೀಡಲಾಗುತ್ತಿದೆ.

ಔಷಧ ಇದೆಯೇ?
ಔಷಧ ಕಂಡುಹಿಡಿಯಲು ಬಿಲಿಯನ್ ಗಟ್ಟಲೇ ಡಾಲರ್ ವೆಚ್ಚ ತಗುಲಬಹುದು. ಇನೊವಿಯೋ, ಹುವೈ ಬಯೋಟೆಕ್, ಜಿಎಸ್ ಕೆ ಯಂಥ ಕಂಪನಿಗಳು ಈ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications