ರಾಜ್ಯ ಸರ್ಕಾರದ ಕಾರ್ಯದರ್ಶಿಗಳಿಗೆ ಸಂಪುಟ ಕಾರ್ಯದರ್ಶಿ ಸಲಹೆಯೇನು?
ನವದೆಹಲಿ,
ಮೇ.17:
ದೇಶದಲ್ಲಿ
ನಾಲ್ಕನೇ
ಅವಧಿ
ಭಾರತ
ಲಾಕ್
ಡೌನ್
ಗೆ
ಸಂಬಂಧಿಸಿದ
ಮಾರ್ಗಸೂಚಿಗಳನ್ನು
ಕೇಂದ್ರ
ಸರ್ಕಾರವು
ಬಿಡುಗಡೆ
ಮಾಡಿದೆ.
ಇದರ
ಬೆನ್ನಲ್ಲೇ
ಕೇಂದ್ರದ
ಸಂಪುಟ
ಕಾರ್ಯದರ್ಶಿ
ರಾಜೀವ್
ಗೌಬಾ
ಎಲ್ಲ
ರಾಜ್ಯ
ಸರ್ಕಾರಗಳ
ಮುಖ್ಯ
ಕಾರ್ಯದರ್ಶಿಗಳ
ಜೊತೆಗೆ
ವಿಡಿಯೋ
ಸಂವಾದ
ನಡೆಸಿದರು.
ರಾತ್ರಿ
9
ಗಂಟೆಗೆ
ಆರಂಭವಾದ
ವಿಡಿಯೋ
ಸಂವಾದದಲ್ಲಿ
ರಾಜ್ಯಗಳಲ್ಲಿ
ಮಾರ್ಗಸೂಚಿ
ಜಾರಿಗೊಳಿಸುವ
ಬಗ್ಗೆ
ಸಲಹೆ
ಸೂಚನೆಗಳನ್ನು
ನೀಡಲಾಯಿತು.
ಕಂಟೇನ್ಮೆಂಟ್
ವಲಯಗಳನ್ನು
ಹೊರತುಪಡಿಸಿ
ಬೇರೆ
ಪ್ರದೇಶಗಳಲ್ಲಿ
ಎಲ್ಲ
ಚಟುವಟಿಕೆಗಳಿಗೆ
ಅನುಮತಿ
ನೀಡಬಹುದು.
ಭಾರತ ಲಾಕ್ ಡೌನ್ 4.O: ದೇಶದಲ್ಲಿ ಏನಿರುತ್ತೆ ಏನಿರುವುದಿಲ್ಲ?
ರಾಜ್ಯಗಳಲ್ಲಿ ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳನ್ನು ತೀರ್ಮಾನಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಮೊದಲಿನಂತೆ ಎಲ್ಲ ಕಡೆಗಳಲ್ಲಿ ರಾತ್ರಿ 7 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೂ ನಿಷೇಧಾಜ್ಞೆಯನ್ನು ಮುಂದುವರಿಸಲು ಸೂಚಿಸಲಾಗಿದೆ.
ವಿಪತ್ತು
ನಿರ್ವಹಣಾ
ಕಾಯ್ದೆ
18ರ
ಅಡಿ
ಕ್ರಮ:
ಭಾರತ
ಲಾಕ್
ಡೌನ್
4.O
ಮುಂದಿನ
14
ದಿನಗಳ
ಕಾಲ
ಜಾರಿಯಲ್ಲಿರುತ್ತದೆ.
ಮೇ.31ರವರೆಗೂ
ಲಾಕ್
ಡೌನ್
ಮುಂದುವರಿಯಲಿದ್ದು,
ಕೇಂದ್ರ
ಸರ್ಕಾರದ
ನಿಯಮ
ಪಾಲಿಸದಿದ್ದರೆ
ಅಥವಾ
ಲಾಕ್
ಡೌನ್
ನಿಯಮ
ಉಲ್ಲಂಘಿಸಿದರೆ
ಶಿಸ್ತುಕ್ರಮವನ್ನು
ಜರುಗಿಸಬೇಕು.
ಕಂಟೇನ್ಮೆಂಟ್
ಪ್ರದೇಶಗಳಲ್ಲಿ
ಮಕ್ಕಳು,
ಮಹಿಳೆಯರು,
ಹಿರಿಯರು
ಮನೆಗಳಿಂದ
ಬಾರದಂತೆ
ಎಚ್ಚರಿಕೆ
ವಹಿಸಬೇಕು.
ಸಾರ್ವಜನಿಕ
ಪ್ರದೇಶಗಳಲ್ಲಿ
ಉಗಿಯುವುದು,
ಮಾಸ್ಕ್
ಧರಸದಿರುವುದು
ಹಾಗೂ
ಸಾಮಾಜಿಕ
ಅಂತರ
ಕಾಯ್ದುಕೊಳ್ಳುವುದು
ಕಡ್ಡಾಯವಾಗಿದೆ.
ಅಂತಾರಾಜ್ಯ
ಸಾರಿಗೆ,
ಟ್ಯಾಕ್ಸಿ,
ಆಟೋ
ಸಂಚಾರಕ್ಕೆ
ಅನುಮತಿ
ನೀಡುವುದು
ಬಿಡುವುದೂ
ರಾಜ್ಯ
ಸರ್ಕಾರಕ್ಕೆ
ಬಿಟ್ಟಿರುತ್ತದೆ
ಎಂದು
ಮಾರ್ಗಸೂಚಿಯಲ್ಲಿ
ಹೇಳಲಾಗಿದೆ.
ಕೇಂದ್ರ
ಸರ್ಕಾರದ
ಮಾರ್ಗಸೂಚಿ
ಹಾಗೂ
ಸಂಪುಟ
ಕಾರ್ಯದರ್ಶಿ
ನೀಡುವ
ಸಲಹೆ
ಮೇರೆಗೆ
ರಾಜ್ಯ
ಸರ್ಕಾರಗಳು
ಮಾರ್ಗಸೂಚಿಯನ್ನು
ಬಿಡುಗಡೆ
ಮಾಡಲಿವೆ.