Lion Death: ಸಿಂಹ ಸತ್ತರೆ ಕಾಡಿನಲ್ಲಾಗುವ ಬದಲಾವಣೆಗಳೇನು? ಕಾಡಿನ ರಾಜನ ಕುಟುಂಬ ಏನಾಗುತ್ತದೆ?
ಕಾಡಿನ ರಾಜ ಯಾರೆಂದು ಯಾರಿಗೆ ತಿಳಿದಿಲ್ಲ ಹೇಳಿ. ಅವನ ಘರ್ಜನೆ ಕಾಡಿನ ಕಿಲೋ ಮೀಟರ್ ಗಟ್ಟಲೆ ಮೊಳಗಿದರೆ, ಜಿಂಕೆ, ಮೊಲ, ಇನ್ನಿತರ ಜೀವಿಗಳಿಗೆ ನಡುಕ ಹುಟ್ಟಿಸುತ್ತದೆ. ನಡಿಗೆಯಲ್ಲೇ ರಾಜ ಗಾಂಭೀರ್ಯವಿರುವ ಸಿಂಹವು ಕಾಡಿನಲ್ಲಿ ತನ್ನದೇ ಆದ ಘನತೆಯಲ್ಲಿ ಬದುಕುತ್ತಿರುತ್ತದೆ. ಅದೇ ಸಿಂಹ ಸತ್ತಾಗ ಏನಾಗುತ್ತದೆ? ಕಾಡಿನ ರಾಜನ ಕುಟುಂಬದಲ್ಲಿ ಏನಾಗುತ್ತದೆ? ರಾಜ ಸಿಂಹ ಸತ್ತಾಗ ಕಾಡಿನ ಇತರ ಪ್ರಾಣಿಗಳು ಏನು ಮಾಡುತ್ತವೆ? ಸಿಂಹದ ಮೃತದೇಹ ಸಿಕ್ಕಾಗ ಅರಣ್ಯಾಧಿಕಾರಿಗಳು ಏನು ಮಾಡುತ್ತಾರೆ? ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಗ್ಲೋಬಲ್ ಸಫಾರಿ ಆರ್ಕೈವ್ನಲ್ಲಿ ಪ್ರಕಟವಾದ ಜಂಗಲ್ ಸಫಾರಿ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ, ಕಾಡಿನಲ್ಲಿ ಸಿಂಹವು ಸತ್ತಾಗ, ಮನುಷ್ಯರಂತೆ ಅವುಗಳ ಕುಟುಂಬದ ಸದಸ್ಯರೆಲ್ಲರೂ ಒಂಟಿತನ ಕಾಡುತ್ತದೆ. ಗಂಡು ಸಿಂಹ ಸತ್ತಾಗ ಆ ಸಿಂಹದ ಕುಟುಂಬವು ಸಂಪೂರ್ಣವಾಗಿ ಕುಸಿಯುತ್ತದೆ. ಅದರ ಜೊತೆಗಿನ ಇತರ ಸಿಂಹಗಳು ಮಂಕಾಗುತ್ತವೆ.

ಹೆಣ್ಣು ಸಿಂಹ ಸತ್ತಾಗಲೂ ಸಾಮಾನ್ಯವಾಗಿ ಇದೇ ನಡೆಯುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಗಂಡು ಸಿಂಹವು ತನ್ನ ಕುಟುಂಬವನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಗುತ್ತದೆ. ಇನ್ನು ಗಂಡ ಸಿಂಹಗಳು ಸತ್ತಾಗ ಕಿರಿಯ ಮಗ (ಸಿಂಹದ ಮಗ) ರಾಜನಾಗುತ್ತಾನೆ. ಇಂತಹ ಸಂದರ್ಭದಲ್ಲಿ ಹೆಣ್ಣು ಸಿಂಹವು ಆ ಕುಟುಂಬವನ್ನು ಮುನ್ನಡೆಸುತ್ತದೆ. ಹೀಗೆ ಈ ಕ್ರಮವು ಮುಂದುವರಿಯುತ್ತದೆ.
ಸಿಂಹದ ಸಾವಿನಗೆ ಇತರ ಪ್ರಾಣಿಗಳ ಪ್ರತಿಕ್ರಿಯೆ ಏನು?
ಅಧ್ಯಯನಗಳ ಪ್ರಕಾರ, ಸಿಂಹವು ಸತ್ತಾಗ, ಉಳಿದ ಸಿಂಹಗಳು ಶೋಕಿಸುತ್ತವೆ. ಅವುಗಳು ಮಂಕಾಗುತ್ತವೆ. ತೀರಾ ಹಸಿದರೆ ಮಾತ್ರ ಬೇಟೆಗೆ ತೆರಳುತ್ತವೆ. ಇನ್ನು ಸತ್ತ ಸಿಂಹಗಳ ದೇಹವನ್ನು ನರಿಗಳು, ತೋಳಗಳು ಮತ್ತು ಹೈನಾಗಳು ತಿನ್ನುತ್ತವೆ. ಇದನ್ನು ಬಿಟ್ಟು ಇತರ ಪ್ರಾಣಿಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ವಾಸ್ತವವಾಗಿ ಅವುಗಳಿಗೆ ಕಾಡಿನ ರಾಜ ಸತ್ತಿದ್ದಾನೆ ತಿಳಿದಿರುವುದಿಲ್ಲ.
ಭಾರತದ ಕಾನೂನಿನ ಪ್ರಕಾರ, ಸಿಂಹದ ಅಂತ್ಯಕ್ರಿಯೆಯ ಮೊದಲಿನ ಪ್ರಕ್ರಿಯೇನು?
ಭಾರತದ ಎಲ್ಲಾ ಅರಣ್ಯಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಇರುವ ಸಿಂಹಗಳ ಸಂಪೂರ್ಣ ದಾಖಲೆಗಳನ್ನು ಅರಣ್ಯ ಇಲಾಖೆ ಹೊಂದಿದೆ. ಕಾಲಕಾಲಕ್ಕೆ ಈ ದಾಖಲೆಯನ್ನು ಸಚಿವಾಲಯಕ್ಕೂ ಕಳುಹಿಸಲಾಗುತ್ತದೆ. ಹೀಗಿರುವಾಗ ಸಿಂಹ ಸೇರಿದಂತೆ ಚಿರತೆ, ಹುಲಿ, ಘೇಂಡಾಮೃಗ, ಆನೆಗಳ ಸಾವಿನ ಬಗ್ಗೆ ಅರಣ್ಯಾಧಿಕಾರಿಗಳಿಗೆ ತಿಳಿದ ಕೂಡಲೇ ಸ್ಥಳೀಯ ಅರಣ್ಯ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ತೆರಳುತ್ತದೆ. ಮೊದಲು ಪ್ರಾಣಿಗಳ ಮೃತದೇಹದ ಫೋಟೋಗಳನ್ನು ತೆಗೆದುಕೊಂಡು ಬಳಿಕ ಸ್ಥಳೀಯ ವನ್ಯಜೀವಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗುತ್ತದೆ.

ಬಳಿಕ ವೈದ್ಯರ ಮೇಲ್ವಿಚಾರಣೆಯಲ್ಲಿ ಸಿಂಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ಅರಣ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಬಳಿಕ ಒಂದು ಪ್ರತಿಯನ್ನು ಸಚಿವಾಲಯಕ್ಕೂ ಕಳುಹಿಸಲಾಗಿದೆ. ಅಷ್ಟೇ ಅಲ್ಲ ಅಗತ್ಯವಿದ್ದಾಗ ಅಥವಾ ಸಾವಿಗೆ ನಿಖರ ಕಾರಣ ತಿಳಿಯದಿದ್ದಾಗ ಸಿಂಹದ ಅಂಗಾಂಗಳನ್ನು ವಿಧಿವಿಜ್ಞಾನ ವಿಭಾಗಕ್ಕೆ ಕಳುಹಿಸಲಾಗುತ್ತದೆ.
ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ದಾಖಲಾದ ಒಟ್ಟು ಸಿಂಹಗಳ ಸಾವಿನ ಸಂಖ್ಯೆ ವಿವರ
ಸೋಮವಾರ ಲೋಕಸಭೆಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಮಂಡಿಸಿದ ಅಂಕಿ ಅಂಶಗಳ ಪ್ರಕಾರ, 2019 ಮತ್ತು 2023 ರ ನಡುವೆ 555 ಸಿಂಹಗಳು ಸಾವನ್ನಪ್ಪಿವೆ.
| ಕ್ರಮ ಸಂಖ್ಯೆ | ವರ್ಷ | ಸಿಂಹಗಳ ಸಾವಿನ ಸಂಖ್ಯೆ |
| 1 | 2019 | 113 |
| 2 | 2020 | 124 |
| 3 | 2021 | 105 |
| 4 | 2022 | 110 |
| 5 | 2023 | 103 |
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ












Click it and Unblock the Notifications