ಪಾಕಿಸ್ತಾನ ಗೂಢಚಾರನ ಬಳಿ ಇದ್ದದ್ದು 190 ಸಿಮ್ ಕಾರ್ಡ್!
ನವದೆಹಲಿ, ಡಿಸೆಂಬರ್ 8: ಕೇಂದ್ರ ಗೃಹ ಸಚಿವಾಲಯದ ಮಾಹಿತಿಯೇ ಅಧಿಕೃತವಾಗಿ ತಿಳಿಸಿರುವಂತೆ ಈ ವರ್ಷ ಭಾರತದಲ್ಲಿ ಗೂಢಚರ್ಯೆ ಮಾಡುತ್ತಿದ್ದ ಇಪ್ಪತ್ನಾಲ್ಕು ಐಎಸ್ ಐ ಏಜೆಂಟ್ ಗಳನ್ನು ಬಂಧಿಸಲಾಗಿದೆ. ಕುತಂತ್ರಿ ಪಾಕಿಸ್ತಾನವು ಭಾರತದಲ್ಲಿ ಅಸ್ಥಿರತೆ ಸೃಷ್ಟಿಸಲು ಅದೆಷ್ಟು ಪ್ರಯತ್ನಿಸುತ್ತಿದೆ ಎಂಬುದನ್ನು ಈ ಸಂಖ್ಯೆಯೇ ಖಚಿತಪಡಿಸುತ್ತದೆ.
ಇತ್ತೀಚೆಗೆ ಪಶ್ಚಿಮ ಬಂಗಾಲದಲ್ಲಿ ನಡೆದ ಬಂಧನ, ಆ ನಂತರದ ವಿಚಾರಣೆಯಿಂದ ತಮಗೊಪ್ಪಿಸುವ ಕೆಲಸಕ್ಕೆ ಈ ಗೂಢಚಾರರು ಅದ್ಯಾವ ಪರಿಯ ಸಿದ್ಧತೆ ನಡೆಸಿರುತ್ತಾರೆ ಎಂಬ ಸಂಗತಿ ಸ್ಪಷ್ಟವಾಯಿತು. ರಣಬಿಜಯ್ ಸಿಂಗ್ ಎಂಬಾತನನ್ನು ಪಶ್ಚಿಮ ಬಂಗಾಲದ ಸಿಲಿಗುರಿಯಲ್ಲಿ ಬಂಧಿಸಲಾಯಿತು.[ಸೇನೆ ಮಾಹಿತಿ ಸಂಗ್ರಹಿಸುತ್ತಿದ್ದ ಪಾಕ್ ಗೂಢಚಾರ ಬಂಧನ]

ಈ ಪ್ರಕರಣದಲ್ಲಿ ಪಾಕಿಸ್ತಾನವು ಹೇಗೆ ಕೆಲಸ ಮಾಡುತ್ತದೆ ಎಂಬ ಹಲವು ಸಂಗತಿ ಪೊಲೀಸರಿಗೆ ತಿಳಿಯಿತು. ಸಿಂಗ್ ಬಳಿ ಕನಿಷ್ಠ 190 ಸಿಮ್ ಸಿಕ್ಕವು. ತಮ್ಮ ಪತ್ತೆ ಆಗಬಾರದು ಎಂಬುದಕ್ಕೆ ಈ ಗೂಢಚಾರರು ಅದೆಷ್ಟು ಶ್ರಮ ಹಾಕುತ್ತಾರೆ ಎಂಬುದು ಇದರಿಂದಲೇ ತಿಳಿಯುತ್ತಿತ್ತು.[50 ಸಾವಿರದ ಆಸೆಗೆ ಆತ ಎಂಥ ಮಾಹಿತಿ ಒದಗಿಸಿದ್ದ ಗೊತ್ತಾ?]
ಈ ವಿಚಾರಣೆ ಭಾಗವಾದ ಅಧಿಕಾರಿಯೊಬ್ಬರು ಒನ್ಇಂಡಿಯಾಗೆ ನೀಡಿದ ಮಾಹಿತಿ ಪ್ರಕಾರ, ಸಿಂಗ್ ಬಳಿ ಮೂವತ್ತೈದು ಭಾರತೀಯ ಸಿಮ್ ಕಾರ್ಡ್ ಗಳು, ನಾಲ್ಕು ಲ್ಯಾಪ್ ಟಾಪ್, ಮೂರು ಮತದಾರರ ಗುರುತಿನ ಚೀಟಿ, ಇವಲ್ಲದೇ 155 ನೇಪಾಳಿ ಸಿಮ್ ಕಾರ್ಡ್ ಗಳು ಕೂಡ ಸಿಕ್ಕವು.[4 ಸಲ ಭಾರತಕ್ಕೆ ಬಂದಿದ್ದ ಪಾಕಿಸ್ತಾನ ಗೂಢಚಾರನಿಗೆ 3 ಸಾವಿರ ಸಂಬಳ]
ಈ ಸಿಂಗ್ ಮೂಲತಃ ಬಿಹಾರದವನು. ಪಾಕಿಸ್ತಾನದ ಐಎಸ್ ಐನ ಸಂಪರ್ಕಕ್ಕೆ ಬಂದ ನಂತರ ಸಿಲಿಗುರಿಯಲ್ಲಿ ಸಣ್ಣದೊಂದು ವ್ಯಾಪಾರ ಆರಂಭಿಸಿದ್ದ. ಪಾಕಿಸ್ತಾನದಿಂದ ಈತನಿಗೆ ಇಷಾರೆಗಳು ಬರುತ್ತಿದ್ದವು. ಆತ ತನ್ನ ಮಾಹಿತಿಗಳನ್ನು ಹಂಚಿಕೊಳ್ಳಲು ಆಗಿಂದಾಗ್ಗೆ ನೇಪಾಳಕ್ಕೆ ಭೇಟಿ ನೀಡುತ್ತಿದ್ದ. ಜೊತೆಗೆ ಹಲವಾರು ಬಾರೊ ಒಮನ್ ಗೂ ಭೇಟಿ ನೀಡಿರುವ ಸಂಗತಿ ವಿಚಾರಣೆ ವೇಳೆ ಗೊತ್ತಾಗಿದೆ.
ವಿಚಾರಣಾಧಿಕಾರಿಗಳೇ ಹೇಳುವ ಪ್ರಕಾರ, ಪಾಕಿಸ್ತಾನದಿಂದ ಸಂಪರ್ಕದಲ್ಲಿರುವವರ ಜತೆಗೆ ತನ್ನ ಬಳಿ ಇರುವ ಮಾಹಿತಿಗಳನ್ನು ಹಂಚಿಕೊಳ್ಳಲು ಹಾಗೂ ಮುಂದಿನ ಕಾರ್ಯಾಚರಣೆ ಏನು ಎಂಬುದನ್ನು ತಿಳಿದುಕೊಳ್ಳಲು ಅತ ವಿವಿಧ ದೇಶಗಳಿಗೆ ಭೇಟಿ ನೀಡುತ್ತಿದ್ದ ಎಂದು ಗೊತ್ತಾಗಿದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications