ಶ್ರೀದೇವಿಯವರ ಸಾವಿಗೆ ನಿಜವಾದ ಕಾರಣವಾದರೂ ಏನು?
Recommended Video

ಒಂದಾನೊಂದು ಕಾಲದಲ್ಲಿ ಚಿತ್ರರಸಿಕರ ಹೃದಯ ಸಾಮ್ರಾಜ್ಞಿಯಾಗಿ ಮೆರೆದ ಶ್ರೀದೇವಿ ಅಕಾಲಿಕ ಸಾವು ಇಡೀ ದೇಶವನ್ನು ದಿಗ್ಮೂಢರನ್ನಾಗಿ ಮಾಡಿದ್ದರೆ, ಅವರ ಸಾವಿನ ಸುತ್ತ ಹುಟ್ಟಿಕೊಂಡಿರುವ ನಾನಾ ಊಹಾಪೋಹಗಳು ಮತ್ತಷ್ಟು ವಿಚಲಿತರನ್ನಾಗಿ ಮಾಡಿವೆ.
ಅವರ ವಯಸ್ಸು 54. ಹೃದಯ ಬೇನೆಯ ಸಂಕೇತ ಲವಲೇಶವೂ ಇರಲಿಲ್ಲ. ಸಾಯುವ ವಯಸ್ಸೂ ಅಲ್ಲ. ಅಂತಿಮ ಕ್ಷಣದ ವರೆಗೂ ಆನಂದತುಂದಿಲರಾಗಿಯೇ ಇದ್ದ ಅವರನ್ನು ಯಮದೇವರು ಸೆಳೆದುಕೊಂಡು ಹೋಗಿದ್ದಾದರೂ ಹೇಗೆ ಮತ್ತು ಏಕೆ ಎಂಬುದಕ್ಕೆ ಉತ್ತರಗಳು ಸಿಗುತ್ತಿಲ್ಲ.
ಆದರೆ, ಸಾಮಾಜಿಕ ತಾಣದಲ್ಲಿ ಹುಟ್ಟಿಕೊಂಡಿರುವ ಹಲವಾರು ಹೇಳಿಕೆಗಳು, ಕಥೆಗಳು, ಚರ್ಚೆಗಳು, ಸೌಂದರ್ಯ ಮತ್ತು ಪ್ರತಿಷ್ಠೆಯ ಹಿಂದೆ ಬಿದ್ದಿರುವ ಚಲನಚಿತ್ರ ತಾರೆಯರ ಜೀವನದ ಮತ್ತೊಂದು ಮಗ್ಗುಲನ್ನು ತೆರೆದು ತೋರಿಸುತ್ತಿದೆ. ತಾರೆಯರು ಅನುಭವಿಸುವ ಅಂತರಂಗದ ತುಮುಲಗಳನ್ನು ಈ ಚರ್ಚೆ ಬರಿದು ಮಾಡುತ್ತಿದೆ.
ಬಿಗ್ ಬಿಗೆ ಶ್ರೀದೇವಿ ಸಾವಿನ ಮುನ್ಸೂಚನೆ ಸಿಕ್ಕಿತ್ತೇ?
ಆ ಬಟ್ಟಲಗಣ್ಣುಗಳ ಕೆಣಕುವ ನೋಟ, ತುಂಬಿದ ಕೆನ್ನೆಗಳ ಆಕರ್ಷಣೆ, ಮಾದಕ ಮೈಮಾಟ, ವಿಶಿಷ್ಟವಾದ ಹಾವಭಾವ, ಜೊತೆಗೆ ಹುಚ್ಚೆದ್ದು ಕುಣಿಸುವಂಥ ನರ್ತನ ಶ್ರೀದೇವಿಯನ್ನು ಸೂಪರ್ ಸ್ಟಾರ್ ಅನ್ನಾಗಿ ಮಾಡಿತ್ತು. ಆದರೆ, ಅದೇ ಸೌಂದರ್ಯ, ಅದೇ ಮೈಮಾಟ ಶ್ರೀದೇವಿಯವರಿಗೆ ಮುಳುವಾಯಿತೆ?

ಕಣ್ಣುಗಳು ಏನೇನೋ ಕಥೆ ಹೇಳುತ್ತಿದ್ದವು
ಶ್ರೀದೇವಿಯವರಿಗೆ ವಯಸ್ಸು 54 ದಾಟಿದ್ದರೂ ಅವರು 40ರ ಹರೆಯದ ಸುಂದರ ಮಹಿಳೆಯಂತೆ ಕಾಣಬಯಸಿದ್ದರು. ತುಂಬಿದ ಕೆನ್ನೆಗಳು ಅಂದ ಕಳೆದುಕೊಂಡಿದ್ದವು. ಮುಖ ಅಂದುಕೊಂಡಿದ್ದಕ್ಕಿಂತ ಸುಕ್ಕುಗಟ್ಟಿತ್ತು. ಆಕರ್ಷಕ ಮೂಗು ವಯಸ್ಸನ್ನು ಎತ್ತೆತ್ತಿ ತೋರಿಸುತ್ತಿತ್ತು. ಕಣ್ಣುಗಳು ಏನೇನೋ ಕಥೆಗಳನ್ನು ಹೇಳುತ್ತಿದ್ದವು.

ಸೌಂದರ್ಯ ಮರಳಿ ಪಡೆಯುವ ಪ್ರಯತ್ನ
ಶ್ರೀದೇವಿಯ ಆಪ್ತೆ ಪಿಯಾಲಿ ಗಂಗೂಲಿ ಪ್ರಕಾರ, ಇದೇ ಅವರನ್ನು ಕಂಗೆಡಿಸಿತ್ತು. ಹೊರಳಿಹೋದ ಸೌಂದರ್ಯವನ್ನು ಮತ್ತೆ ಮರಳಿ ಪಡೆಯುವ ವಿಫಲ ಪ್ರಯತ್ನದಲ್ಲಿ ಅವರು ತೊಡಗಿದ್ದರು. ಸೊಂಟದ ಕೊಬ್ಬು ಕರಗಿಸಿಕೊಂಡು ಮತ್ತೆ ಬಳುಕುವ ಬಳ್ಳಿಯಂತಾಗಬೇಕು ಎಂಬ ಹಪಾಹಪಿ ಶ್ರೀದೇವಿಯನ್ನು ಶ್ರೀದೇವಿಯನ್ನಾಗಿಸಿರಲಿಲ್ಲ.

ತಮ್ಮನ್ನೇ ತಾವು ದ್ವೇಷಿಸುತ್ತಿದ್ದರು
ಹೀಗಾಗಿ ಅವರು ಹಲವಾರು ಬಾರಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಕ್ಯಾಲಿಫೋರ್ನಿಯಾಗೆ ಇದಕ್ಕಾಗಿ ಎಡತಾಕಿದ್ದರು. ಇಪ್ಪತ್ತೆಂಟು ಬಾರಿ ನಡೆದ ಪ್ಲಾಸ್ಟಿಕ್ ಸರ್ಜರಿಯಿಂದ ಅವರ ಅಂದ ಮತ್ತಷ್ಟು ಹದಗೆಟ್ಟಿತೇ ವಿನಹ ಅವರ ಸೌಂದರ್ಯ ಮರುಕಳಿಸಲಿಲ್ಲ. ಈ ಸಂಗತಿಯಿಂದಾಗಿ ಅವರು ತಮ್ಮನ್ನು ತಾವೇ ದ್ವೇಷಿಸಿಕೊಳ್ಳುವಂತಾಗಿತ್ತು.

ತೀವ್ರ ಒತ್ತಡದಲ್ಲಿದ್ದ ಶ್ರೀದೇವಿ
ಐದು ವರ್ಷಗಳ ಹಿಂದೆ ತಾವು ಶ್ರೀದೇವಿಯನ್ನು ಭೇಟಿಯಾಗಿದ್ದಾಗಿ ಬರೆದಿರುವ ಪಿಯಾಲಿ ಗಂಗೂಲಿಯವರು, ಆಗ ಶ್ರೀದೇವಿಯವರು ಹೆಚ್ಚುತ್ತಿರುವ ತಮ್ಮ ಮೈತೂಕ ಮತ್ತು ಜಾರುತ್ತಿರುವ ಸೌಂದರ್ಯದ ಬಗ್ಗೆ ವಿಪರೀತ ಒತ್ತಡದಲ್ಲಿದ್ದರು. ಇದಕ್ಕಾಗಿ ಹಲವಾರು ಬಾರಿ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಿದ್ದರು ಎಂದು ಫೇಸ್ ಬುಕ್ಕಿನಲ್ಲಿ ಬರೆದಿದ್ದಾರೆ.

ವಯಸ್ಸು ಬಚ್ಚಿಡಲು ಸಾಧ್ಯವೆ?
ಅವರ ಡಯಟ್ ಮೇಲೆ ಕಣ್ಣಾಡಿಸಿದರೆ ಎಂಥವರಿಗೂ ಅಚ್ಚರಿಯಾಗಬೇಕು. ಅಷ್ಟೊಂದು ಪ್ರಜ್ಞಾಪೂರ್ವಕವಾಗಿ ಅವರು ಸೌಂದರ್ಯ ಮರಳಿಪಡೆಯುವ ಪ್ರಯತ್ನದಲ್ಲಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಯೋಗಕ್ಕೆ ಮೊರೆಹೋಗಿದ್ದರು. ಇಂಗ್ಲಿಷ್ ವಿಂಗ್ಲಿಷ್ ಚಿತ್ರದ ಸಮಯದಲ್ಲಿ ವಯಸ್ಸು ಬಚ್ಚಿಡಲಾಗದಿದ್ದರೂ, ಅವರ ಪ್ರತಿಭೆ ಅದೆಲ್ಲವನ್ನೂ ಮರೆಮಾಚಿತ್ತು.

ಆತ್ಮಗೌರವಕ್ಕಿಂತ ಸೌಂದರ್ಯವೇ ಹೆಚ್ಚಾಯಿತೆ?
ಚರ್ಮದ ಪ್ಲಾಸ್ಟಿಕ್ ಸರ್ಜರಿಯಲ್ಲದೆ, ಸ್ತನದ ಶಸ್ತ್ರಚಿಕಿತ್ಸೆ, ಸೊಂಟಕ್ಕೆ ಕತ್ತರಿ ಮುಂತಾದವಕ್ಕೆ ಸಾಕಷ್ಟು ಹಣ ವ್ಯಯಿಸುತ್ತಿದ್ದರು. ಆತ್ಮಗೌರವಕ್ಕಿಂತ ಅವರಿಗೆ ಸೌಂದರ್ಯವೇ ಹೆಚ್ಚಾಗಿತ್ತೆ ಎಂಬ ಪ್ರಶ್ನೆಯೂ ಕಾಡದೆ ಇರದು. ಸಹಜ ಸೌಂದರ್ಯಕ್ಕಿಂತ ಕೃತಕ ಸೌಂದರ್ಯಕ್ಕೆ ಶ್ರೀದೇವಿ ಬಲಿಯಾದರೆ? ಯಾವುದಕ್ಕೂ ಉತ್ತರ ಸಿಗುವುದಿಲ್ಲ.

ಇತರ ನಟಿಯರಿಗೆ ಈ ಸಾವು ಪಾಠವಾಗುವುದೆ?
ಈ ಎಲ್ಲದರ ಪರಿಣಾಮ ಅವರನ್ನು ಹೃದಯಾಘಾತಕ್ಕೆ ಈಡು ಮಾಡಿದ್ದರೂ ಅಚ್ಚರಿಯಿಲ್ಲ. ಹಿಂದಿ ಚಿತ್ರರಂಗದಲ್ಲಿ ಶ್ರೀದೇವಿಯವರೊಬ್ಬರೇ ಇಲ್ಲ, ಅವರ ಜೊತೆ ಇಂಥದೇ ಅನಾರೋಗ್ಯಕರ ಪೈಪೋಟಿಯಲ್ಲಿ ಇನ್ನೂ ಹಲವರಿದ್ದಾರೆ. ಅವರಿಗೆ ಶ್ರೀದೇವಿಯವರ ಸಾವು ಒಂದು ಪಾಠವಾಗಬೇಕು. ಆದರೆ, ಒಂದು ಮಾತ್ರ ಸತ್ಯ. ಶ್ರೀದೇವಿ ಮರಳಿ ಬರುವಿದಿಲ್ಲ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications