ಜೈ ಹಿಂದ್, ಜೈ ಭಾರತ್ ಎಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಗಾಂಧೀನಗರ್ (ಗುಜರಾತ್), ಜನವರಿ 17 : "ಮೋದಿ ಹಾಗೂ ನನಗೆ ಇಬ್ಬರಿಗೂ ವಯಸ್ಸಾಗಿಲ್ಲ. ಇಬ್ಬರೂ ಆಶಾವಾದಿಗಳು. ನಮ್ಮ ಆಲೋಚನೆಯ ದೃಷ್ಟಿಯಿಂದ ಯುವಕರು. ಭವಿಷ್ಯದ ಬಗ್ಗೆ ಆಶಾವಾದ ಇಟ್ಟುಕೊಂಡಿದ್ದೇವೆ ಎಂದು ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಹೇಳಿದರು.
ಅಹ್ಮದಾಬಾದ್ ನ ಐಕ್ರಿಯೇಟ್ ಕೇಂದ್ರದಲ್ಲಿ ಮಾತನಾಡಿದ ಅವರು, ಇಡೀ ಜಗತ್ತಿಗೆ ಐಪ್ಯಾಡ್ ಮತ್ತು ಐಪಾಡ್ ಗಳ ಬಗ್ಗೆ ಗೊತ್ತಿದೆ. ಆದರೆ ಮತ್ತೊಂದು 'ಐ' ಬಗ್ಗೆ ಜಗತ್ತು ತಿಳಿಯಬೇಕಿದೆ. ಅದು ಐಕ್ರಿಯೇಟ್. ಹೈಫಾ ಏಕೀಕರಣ ಆಗುವಾಗ ಹಲವು ಭಾರತೀಯ ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ. ಅದರಲ್ಲಿ ಬಹುತೇಕರು ಗುಜರಾತಿಗಳು. ಗುಜರಾತ್ ಗೆ ಧನ್ಯವಾದ ಎಂದರು.
ಜೈ ಹಿಂದ್, ಜೈ ಭಾರತ್, ಜೈ ಇಸ್ರೇಲ್, ಪ್ರಧಾನಿ ಮೋದಿ ಅವರಿಗೆ ಧನ್ಯವಾದ. ಎಲ್ಲರಿಗೂ ಧನ್ಯವಾದ ಎನ್ನುವ ಮೂಲಕ ತಮ್ಮ ಭಾಷಣ ಮುಗಿಸಿದರು ನೆತನ್ಯಾಹು.

ಪ್ರಧಾನಿ ಮೋದಿ ಮಾತನಾಡಿ, ಕಳೆದ ವರ್ಷ ಇಸ್ರೇಲ್ ಗೆ ಹೋದಾಗಲೇ ನಿರ್ಧರಿಸಿದೆ; ಈ ತಳಪಾಯದಿಂದ ಇಸ್ರೇಲ್ ಜತೆಗಿನ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಆಗಿನಿಂದ ನನ್ನ ಗೆಳೆಯ ಬೆಂಜಮಿನ್ ನೆತನ್ಯಾಹು ಭಾರತಕ್ಕೆ ಬರುವುದನ್ನು ಕಾಯುತ್ತಿದ್ದೆ. ಅವರಿಂದು ಇಲ್ಲಿದ್ದಾರೆ. ನಾವೀಗ ಈ ಶಂಕುಸ್ಥಾಪನೆ ಮಾಡುತ್ತಿದ್ದೇವೆ ಎಂದು ಹೇಳಿದರು.












Click it and Unblock the Notifications