ಲಡಾಕ್ ನಲ್ಲಿ ಚೀನಾ-ಭಾರತ ಸೈನಿಕರ ಮುಖಾಮುಖಿ ಕ್ಯಾಮೆರಾದಲ್ಲಿ ಸೆರೆ
ಲಡಾಕ್, ಆಗಸ್ಟ್ 20: ಲಡಾಕ್ ನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಎರಡು ಪಡೆಗಳ ನಡುವಿನ ಘರ್ಷಣೆಯನ್ನು ವಿಡಿಯೋದಲ್ಲಿ ಕಾಣಬಹುದು.
ಚೀನಾ ಕಳೆದ ವಾರ ಲಡಾಕ್ ಮೇಲೆ ಎರಡು ಬಾರಿ ದಾಳಿ ನಡೆಸಿತ್ತು. ಈ ಎರಡೂ ದಾಳಿ ವೇಳೆ ಚೀನಾ ಸೇನೆಯ ಯತ್ನವನ್ನು ಭಾರತೀಯ ಪಡೆಗಳು ಹಿಮ್ಮೆಟ್ಟಿಸಿದ್ದವು. ಲಡಾಕ್ ನ ಪ್ರಸಿದ್ಧ ಪ್ಯಾಂಗೋಂಗ್ ಸರೋವರದ ದಡದಲ್ಲಿ ಈ ದಾಳಿಯ ಯತ್ನ ನಡೆದಿತ್ತು.
ಈ ವೇಳೆ ಚೀನಿ ಪಡೆಗಳು ಕಲ್ಲು ತೂರಾಟ ನಡೆಸಿದ್ದರಿಂದ ಎರಡೂ ಕಡೆಯವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಡಾಕ್ ಸರೋವರ ತೀರದ ಎರಡು ಪ್ರದೇಶಗಳಲ್ಲಿ ಗುರುವಾರ ಬೆಳಿಗ್ಗೆ ಭಾರತೀಯ ಗಡಿ ಪ್ರವೇಶಿಲು ಚೀನಿ ಸೈನಿಕರು ಮುಂದಾಗಿದ್ದರು. ಕೊನೆಗೆ ಭಾರತ ಸಸೈನಿಕರ ಪ್ರಯತ್ನದಿಂದ ಚೀನೀ ಸೈನಿಕರು ಅಲ್ಲಿಂದ ನಿರ್ಗಮಿಸಿದರು ಎನ್ನಲಾಗಿದೆ.
2013 ರಲ್ಲಿ ದೌಲಾಟ್ ಬೇಗ್ ಓಲ್ಡೀ (ಡಿಬಿಒ) ನ ಡೆಪ್ಸಾಂಗ್ ಮೈದಾನದಲ್ಲಿ ಮೂರು ವಾರಗಳ ಕಾಲ ಭಾರತೀಯ ಸೇನೆ ಮತ್ತು ಚೀನಾ ಸೇನೆ ಮುಖಾಮುಖಿಯಾಗಿತ್ತು. ಅಲ್ಲಿಂದ ನಂತರ ಭಾರತೀಯ ಸೇನೆಯ ಗಸ್ತಿಗೆ ಚೀನಾ ಆಗಾಗ ಅಡ್ಡಿಪಡಿಸುತ್ತಲೇ ಬಂದಿದೆ. ಹೀಗಾಗಿ ಇಲ್ಲಿ ಸರೋವರಸ ಸುತ್ತಲಿನ ಪ್ರದೇಶದಲ್ಲಿ ಪರಿಸ್ಥಿತಿ ಯಾವತ್ತೂ ಬಿಗುವಾಗಿಯೇ ಇರುತ್ತದೆ.
1990 ರ ದಶಕದ ಅಂತ್ಯದಲ್ಲಿ ಎರಡೂ ದೇಶಗಳ ನಡುವೆ ಮಾತುಕತೆ ನಡೆಯುವಾಗ ಎರಡೂ ದೇಶಗಳು ಈ ಪ್ರದೇಶ ತಮಗೆ ಸೇರಿದ್ದು ಎಂದು ವಾದಿಸಿದ್ದರು. ಆಗ ಚೀನಾ ಸೇನೆ ಈ ಪ್ರದೇಶ ಅಕ್ಸಾಯ್ ಚೀನಾದ ಭಾಗವೆಂದು ಹೇಳಿ ಇಲ್ಲಿ ಉಕ್ಕಿನ ಸೇತುವೆ ನಿರ್ಮಿಸಿತ್ತು.
ಮೊದಲಿಗೆ, ಈ ಸರೋವರದ ಉತ್ತರ ಮತ್ತು ದಕ್ಷಿಣದ ತೀರಗಳಿಂದ ಚೀನಾದ ಪಡೆಗಳು ಗಸ್ತು ತಿರುಗುತ್ತಿದ್ದವು, ಇದರ 45 ಕಿಮೀ ಉದ್ದವು ಭಾರತೀಯ ಭಾಗದಲ್ಲಿದ್ದರೆ, 90 ಕಿಮೀ ಚೀನೀ ಭಾಗದಲ್ಲಿದೆ.
ಸದ್ಯ ಭಾರತವು ಇಲ್ಲಿ ಅಮೆರಿಕಾದಿಂದ ಖರೀದಿಸಲ್ಪಟ್ಟಿರುವ ಹೆಚ್ಚಿನ-ವೇಗದ ಇಂಟರ್ಸೆಪ್ಟರ್ ದೋಣಿಗಳ ಮೂಲಕ ಸರೋವರದಲ್ಲಿ ಗಸ್ತು ತಿರುಗುತ್ತಿದೆ. ಇದು ಸುಮಾರು 15 ಸೈನಿಕರು ಮತ್ತು ರೆಡಾರ್ಗಳು, ಇನ್ಫ್ರಾ-ರೆಡ್ ಮತ್ತು ಜಿಪಿಎಸ್ ಸಿಸ್ಟಮ್ಗಳಿಗೆ ಹೊಂದಿದೆ. ಈ ದೋಣಿಗಳು ಚೀನೀ ದೋಣಿಗಳಷ್ಟೇ ತಾಂತ್ರಿಕವಾಗಿಯೂ ಬಲಶಾಲಿಯಾಗಿವೆ.
-
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ












Click it and Unblock the Notifications