Vodafone Network: ವಿವಿಧ ನಗರಗಳಲ್ಲಿ Vi ಬಳಕೆದಾರರಿಗೆ ನೆಟ್ವರ್ಕ್ ಸಮಸ್ಯೆ..ಆಕ್ರೋಶ
Vodafone Network Issue: ಭಾರತದಲ್ಲಿ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುವ ಹಾಗೂ ಹೆಚ್ಚಿನ ಸಂಖ್ಯೆ ಬಳಕೆದಾರರನ್ನು ಹೊಂದಿರುವ ವಡಾಫೋನ್ ಕಂಪನಿ ನೆಟ್ವರ್ಕ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ದಿಢೀರ್ ಇಂಟರ್ನೆಟ್ ಸಿಗದೇ ಬಳಕೆದಾರರು ಪರದಾಡಿದರು. ಕೆಲ ಕಾಲ ಕರೆಗಳು ಹೋಗದೇ, ಡಿಜಿಟಲ್ ಪೇಮೆಂಟ್ ಆಗದೇ ಸಿಮ್ ಕಂಪನಿ ವಿರುದ್ಧ ಅಸಮಾಧಾನ ಹೊರ ಹಾಕಿದರು.
ದೇಶದ ದೆಹಲಿ, ಮುಂಬೈ ಹಾಗೂ ಹೈದರಾಬಾದ್, ಬೆಂಗಳೂರು ಸೇರಿದಂತೆ ಹಲವಾರು ಪ್ರಮುಖ ನಗರಗಳಲ್ಲಿ ವೊಡಾಫೋನ್ ಐಡಿಯಾ ಅಲಿಯಾಸ್ 'ವಿ' ಬಳಕೆದಾರಿಗೆ ನೆಟ್ ವರ್ಕ್ ಕಿರಿ ಕಿರಿ ಉಂಟಾಗಿದೆ. ಹಠಾತ್ನೆ ಇಂಟರ್ನೆಟ್ ಕಡಿತ ಎದುರಿಸಿದರು. ಅನೇಕರ ಮೊಬೈಲ್ ನಲ್ಲಿದ್ದ ಸಿಮ್ ಇದಿಯೋ ಇಲ್ಲವೆನೋ ಎಂಬಂತಾಗಿತ್ತು. ಕಾರಣ, ಒಂದು ಎಳೆ ಸಿಗ್ನಲ್ ಸಹ ಸಿಕ್ಕಿರಲಿಲ್ಲ. ಸರಿಯಾಗಿ ಸಿಗ್ನಲ್ ಸಿಗದ ಕಾರಣ ಸಂದೇಶ ಕಳುಹಿಸಲು, ಕರೆ ಮಾಡಲು ಸಮಸ್ಯೆ ಆಗಿದೆ ಎಂದು ವರದಿ ಆಗಿದೆ.

ರಿಚಾರ್ಜ್ ಪ್ಯಾಕ್ ಇದ್ದರೂ ಸಹಿತ ಮೊಬೈಲ್ ಡೇಟಾವನ್ನು ಬಳಸಲು ಸಾಧ್ಯವಾಗಲಿಲ್ಲ. ಕೆಲವು ವೈಫೈ, ಹಾಟ್ ಸ್ಟಾಟ್ ಮೂಲಕ ತುರ್ತು ಅಗತ್ಯತೆ ಪೂರೈಸಿಕೊಂಡಿದ್ದಾರೆ. ಇಂದು ಬೆಳಗಿನ ಜಾವ 12.30 ರ ನಂತರ ಪ್ರಾರಂಭವಾಯಿತು ಈ ನೆಟ್ವರ್ಕ್ ಅಡಚಣೆ ಉಂಟಾಗಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಬಳಕೆದಾರರು ಇಂತಹ ಕಿರಿ ಕಿರಿ ಎದುರಿಸಿದ್ದಾರೆ. ದೇಶದ ನಾನಾ ಭಾಗಗಳಲ್ಲಿ ಬಳಕೆದಾರರಿಗೂ ಒಂದೇ ತೆರನಾದ ಅನುಭವ, ಸಮಸ್ಯೆ ಆಗಿದೆ.
ವಿಐ (ವಡಾಫೋನ್ ಐಡಿಯಾ) ಕಂಪನಿಯು ತಾಂತ್ರಿಕ ಕಾರಣದಿಂದ ಹೀಗಾಗಿತ್ತು. ನಂತರ ಸರಿಪಡಿಸಲಾಗಿದೆ ಎಂದು ತಿಳಿಸಿದೆ ಇಂದು ಬೆಳಗ್ಗೆ ತಿಳಿಸಿದೆ. ಅನೇಕ ಸಿಮ್ ಬಳಕೆದಾರರು ದೂರುಗಳನ್ನು ದಾಖಲಿಸಿದ್ದಾರೆ. ತಮಗಾದ ಸಮಸ್ಯೆ ಹೇಳಿಕೊಂಡು ಅಸಮಾಧಾನ ಹೊರಹಾಕಿದ್ದಾರೆ. ಸುಮಾರು 1,940 ಕ್ಕೂ ಹೆಚ್ಚು ದೂರುಗಳು ಕೇಳಿ ಬಂದಿವೆ ಎಂದು ತಿಳಿದು ಬಂದಿದೆ.
ದೇಶದ ಒಟ್ಟು ವಡಾಫೋನ್ ಬಳಕೆದಾರರ ಪೈಕಿ ಶೇಕಡಾ 71 ರಷ್ಟು ಬಳಕೆದಾರರಿಗೆ ಈ ಸಮಸ್ಯೆ ಆಗಿದೆ. ಅಷ್ಟು ಪ್ರಮಾಣದ ಬಳಕೆದಾರರು ತಮಗೆ ಆದ ನೆಟ್ ವರ್ಕ್ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಶೇ.21 ರಷ್ಟು ಮಂದಿ ಸಂಪೂರ್ಣ ನೆಟ್ವರ್ಕ್ ಬ್ಲಾಕೌಟ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ಪೈಕಿ ಗುರಂಗಾವ್, ನೊಯ್ಡಾ, ನವದೆಹಲಿ, ಪುಣೆ, ಮುಂಬೈನಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗಿದೆ.
ವಿಐ ಸಿಮ್ ಬಳಕೆದಾರರು ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಹೀಗೆ ನೆಟ್ ವರ್ಕ್ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಆಗ್ರಹಿಸಿದ್ದಾರೆ. ವೊಡಾಫೋನ್ ಐಡಿಯಾ ಬಗ್ಗೆ ನನಗೆ ಬೇಸರವಿದೆ. ಕನಿಷ್ಠ 5G ವೆಚ್ಚದಲ್ಲಿ 2G ನೆಟ್ವರ್ಕ್ ಸೇವೆಯಾದರೂ ನೀಡಬೇಕು ಎಂದಿದ್ದಾರೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications