Video Viral: ಹೊಲದಲ್ಲಿ ಟ್ರ್ಯಾಕ್ಟರ್ಗೆ ಎದುರಾಗಿ ನಿಂತು ಮೊಟ್ಟೆ ಕಾಯ್ದ ಹಕ್ಕಿ, ದಯೆ ತೋರಿದ ರೈತ..
ತಾಯಿ ಪ್ರೀತಿ, ವಾತ್ಸಲ್ಯ, ರಕ್ಷಣೆ ವಿಚಾರದಲ್ಲಿ ಮನುಷ್ಯರಾಗಲಿದೆ, ಪ್ರಾಣಿ, ಪಕ್ಷಿಗಳಾಗಲಿ ಒಂದೆ ಎಂಬುದು ತಿಳಿದ ವಿಷಯ. ತಾಯಿಗೆ ಮಕ್ಕಳೆಂದರೆ, ಪ್ರಾಣಿ, ಪಕ್ಷಿಗಳಿಗೂ ತಮ್ಮ ಮರಿಗಳೆಂದರೆ ಅಚ್ಚು ಮೆಚ್ಚು. ಅವುಗಳಿಗಾಗಿ ಜೀವ ಕೊಡಲು ಸಿದ್ಧವಾಗಿರುತ್ತವೆ. ಅಂಥದ್ದೆ ಮನಕಲುಕುವ ಘಟನೆಯ ವಿಡಿಯೋ ವೈರಲ್ ಆಗಿದೆ. ಇಲ್ಲಿ ಪಕ್ಷಿಯೊಂದು ಟ್ರ್ಯಾಕ್ಟರ್ಗೆ ಹೆದರದೇ ಚಕ್ರದ ಮುಂದೆ ನಿಂತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ತಾಯಿಯ ವಾತ್ಸಲ್ಯ ಮತ್ತು ರೈತನ ದಯೆಯು ಎದ್ದು ಕಾಣುತ್ತದೆ. ಹೊಲವನ್ನು ರೈತ ಉಳುಮೆಗೆ ಸಜ್ಜುಗೊಳಿಸುತ್ತಿರುತ್ತಾರೆ. ಈ ವೇಳೆ ಒಂದು ಹಕ್ಕಿ ಆ ಹೊಲದಲ್ಲಿ ಮೊಟ್ಟೆ ಇಟ್ಟಿರುತ್ತದೆ. ಟ್ರ್ಯಾಕ್ಟರ್ನಿಂದ ಹೊಲ ಹೊಡೆಯುವಾಗ ಮೊಟ್ಟೆ ರಕ್ಷಣೆಗೆ ದಿಟ್ಟತನದಿಂದ ನಿಂತ ಪಕ್ಷಿಯ ವಿಡಿಯೋ ಇದಾಗಿದೆ. ಎರಡು ರೆಕ್ಕೆಗಳನ್ನು ಚಾಚಿ ಹೋರಾಟಕ್ಕೆ ಸಿದ್ಧವೆಂಬಂತೆ, ಮೊಟ್ಟೆಯಿಂದ ಒಂದಿಂಚು ದೂರು ಸರಿಯದೇ ನಿಲ್ಲುತ್ತದೆ. ಟ್ರ್ಯಾಕ್ಟರ್ ಮಾಲೀಕ ಬೇಕು ಅಂತಲೇ ಅದರ ಹತ್ತಿರ ಬಂದು ಪರೀಕ್ಷೆ ಮಾಡುವುದು ವಿಡಿಯೋದಲ್ಲಿ ಸೆರೆಯಾಗಿದ್ದಾನೆ.

'ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ' ಎಂಬ ಸಂಭಾಷಣೆ ಕೇವಲ ಸಂಭಾಷಣೆಯಲ್ಲ. ಅದು ನಿಜ ಜೀವನದಲ್ಲಿನ ಸಂಗತಿ, ತಾಯಿ ಧೈರ್ಯ, ಬದುಕಿನ ಹೊರಾಟ, ತಾಯಿಯ ಪ್ರೀತಿ ನೋಡಿಯೇ ಆ ಮಾತು ಹೇಳಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋ ನೋಡಿದರೆ ನಿಮಗೂ ಕೂಡ ಈ ಮಾತು ನಿಜವೆನ್ನಿಸುತ್ತದೆ. ವೀಡಿಯೊದಲ್ಲಿ ಹಕ್ಕಿಯು ತನ್ನ ಮೊಟ್ಟೆಗಳನ್ನು ರೈತನಿಂದ ರಕ್ಷಿಸಿಕೊಳ್ಳಲು ಏನೆಲ್ಲ ಮಾಡುತ್ತದೆ ಎಂಬುದನ್ನು ನೋಡಬಹುದು. ಭಯಪಡದೇ ಚಕ್ರದ ಮುಂದೆ ನಿಂತಿರುವುದು ತಾಯಿಯ ಧೈರ್ಯದ ಪ್ರತೀಕದಂತೆ ಕಾಣುತ್ತದೆ. ಜೀವವನ್ನು ಪಣಕ್ಕಿಡಲು ಸಹ ಅದು ಸಿದ್ಧವಾಗುವ ದೃಶ್ಯ ಸೆರೆಯಾಗಿದೆ.
ಮನುಷ್ಯನಾಗಿರಲಿ, ಪ್ರಾಣಿಯಾಗಿರಲಿ ಅಥವಾ ಪಕ್ಷಿಯಾಗಿರಲಿ, ತಾಯಿ ತಾಯಿಯೇ.ಈ ತಾಯಿ ಪಕ್ಷಿಯ ವಿಡಿಯೋ ಮಾಡಿದ ರೈತ ಟ್ರ್ಯಾಕ್ಟರ್ಅನ್ನು ಪಕ್ಷಿಯ ಮೊಟ್ಟೆ ಜಾಗದಲ್ಲಿ ಹಾಯಿಸದೇ, ಬೇರೆಡೆ ಹಾಯಿಸುತ್ತಾರೆ. ಜಮೀನು ಶುಚಿಗೊಳಿಸುವಾಗ ಮೊಟ್ಟೆ ಇರುವ ಸ್ಥಳ ಬಿಟ್ಟು ಉಳಿದೆಲ್ಲ ಜಮೀನಲ್ಲಿ ಟ್ರ್ಯಾಕ್ಟರ್ ಹಾಯಿಸಿದ್ದಾನೆ. ಈ ಮೂಲಕ ತಾಯಿ ಪಕ್ಷ ಆಶಯದಂತೆ ಮೊಟ್ಟೆಗೆ ತೊಂದರೆ ಮಾಡದೇ ಹೊಲ ಹಾಯಿಸಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಸ್ಸು ಗೆದ್ದಿದೆ.
ಟ್ರ್ಯಾಕ್ಟರ್ ಚಾಲಕ ಹಕ್ಕಿ ಮೊಟ್ಟೆಗಳೊಂದಿಗೆ ಕುಳಿತಿರುವ ಸ್ಥಳದಿಂದ ಹೊರಟು ಉಳಿದ ಹೊಲವನ್ನು ಉಳುಮೆ ಮಾಡುತ್ತಾನೆ. ದೇಶಕ್ಕೆ ಅನ್ನ ನೀಡುವ ರೈತನಲ್ಲಿ ಅವನು ದಯೆವುಳ್ಳವನು. ತನ್ನಂತೆ ಇತರರು ಬದುಕಲು ಅವಕಾಶ ಮಾಡಿಕೊಡುವ ಗುಣ ಅವನಲ್ಲಿರುತ್ತದೆ ಎಂಬುದು ಈ ವಿಡಿಯೋದಿಂದ ಗೊತ್ತಾಗುತ್ತದೆ.
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ












Click it and Unblock the Notifications