ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?
ಸಖತ್ ಸಾಲ ಮಾಡಿಕೊಂಡಿರುವ ವಿಜಯ್ ಮಲ್ಯ ಬ್ಯಾಂಕ್ ಗಳು, ಸುಪ್ರೀಂ ಕೋರ್ಟ್ ಮತ್ತು ಜನರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾರೆ. 2004ರಲ್ಲಿ 1.57 ಕೋಟಿ ಹಣ ಕೊಟ್ಟು ಟಿಪ್ಪು ಸುಲ್ತಾನ್ ಖಡ್ಗ ತಂದ ಮಲ್ಯ, ಜನತಾ ಪಕ್ಷ ಕಟ್ಟಿ ರಾಜಕೀಯ ಆಖಾಡಕ್ಕೂ ಧುಮುಕಿದ್ದ ಮಲ್ಯ, ಕ್ಯಾಲೆಂಡರ್ ಗಳಲ್ಲೇ ಹೆಸರು ಮಾಡಿದ್ದ ಮಲ್ಯ ಇಂದು ದೇಶದಲ್ಲಿಲ್ಲ.
ಟಿಪ್ಪು ಸುಲ್ತಾನ್ ಕಾಲದ ವಸ್ತುಗಳನ್ನೆಲ್ಲ ಸೇರಿಸಿ ಮಲ್ಯ ವಸ್ತು ಸಂಗ್ರಹಾಲಯವೊಂದನ್ನು ಮಾಡಬೇಕು ಎಂದು ಅಂದುಕೊಂಡಿದ್ದರು. ಇಂಥ ಕ್ರಮಗಳ ಮೂಲಕ ಜನರಿಂದ ಮತ ಕದಿಯಬಹುದು ಎಂಬ ಇಂಗಿತವನ್ನು ಮಲ್ಯ ಇಟ್ಟುಕೊಂಡಿದ್ದರು.[ಉದ್ಯಮಿ ವಿಜಯ್ ಮಲ್ಯ ವಿದೇಶಕ್ಕೆ ಹಾರಿದ್ದು ಹೇಗೆ?]
ಮಲ್ಯ ಪಕ್ಷ ಕಟ್ಟಿ ಪ್ರಚಾರ ನಡೆಸುತ್ತಿದ್ದ ಕಾಲದ ವೈಭವವನ್ನು ಪತ್ರಕರ್ತ ಮಿತ್ರರೊಬ್ಬರು ಹಂಚಿಕೊಂಡಿದ್ದಾರೆ. ಹಾಗಾದರೆ ಮಲ್ಯರ ಗತಕಾಲದ ವೈಭವವನ್ನು ಅವರ ಮಾತುಗಳಲ್ಲೇ ಕೇಳಿಕೊಂಡು ಬರೋಣವೇ?

ಖಾಸಗಿ ವಿಮಾನ
ಮಲ್ಯ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದದ್ದು ತಮ್ಮ ಖಾಸಗಿ ವಿಮಾನದಲ್ಲಿಯೇ. ಎಷ್ಟೋ ಸಾರಿ ಒಬ್ಬರಿಗಾಗಿ ಒಂದು ವಿಮಾನ ಹಾರಿದ ದಾಖಲೆ ಇದೆ.

ನೀರಿನಂತೆ ಹಣ ಖರ್ಚು
ಮಲ್ಯ ನೆಲಕ್ಕೆ ಇಳಿಯುತ್ತಿರಲಿಲ್ಲ. ಆತನ ಹಿಂಬಾಲಕರು ಹಣವನ್ನು ನೀರಿನಂತೆ ವ್ಯಯಿಸುತ್ತಿದ್ದರು.

ಕೋಝಿಕೋಡ್ ಕ್ಯಾಂಪೇನ್
ಕರ್ನಾಟಕ ಮತ್ತು ಕೇರಳದಲ್ಲಿ ಮಲ್ಯ ತಮ್ಮ ಜನತಾ ಪಾರ್ಟಿಯನ್ನು ಕಟ್ಟಿ ನಿಲ್ಲಿಸಲು ಶ್ರಮ ವಹಿಸುತ್ತಿದ್ದರು.

ಬೆಂಗಳೂರಿಂದ ವಿಮಾನ
ಸುದ್ದಿ ಸಂಗ್ರಹ ಮಾಡಲು ಪತ್ರಕರ್ತರನ್ನು ಮಲ್ಯ ಕರೆದುಕೊಂಡು ಹೋಗುತ್ತಿದ್ದ ಬಗೆಯನ್ನೇ ವರ್ಣಿಸಬೇಕು. ಪತ್ರಕರ್ತರಿಗೆ ವಿಶೇಷ ವಿಮಾನ ವ್ಯವಸ್ಥೆ ಮಾಡಿ ಕೋಳಿಕೋಡ್ ಗೆ ಕರೆದುಕೊಂಡುಹೋದ ದಾಖಲೆಯಿದೆ.

ಕುಡಿತದ ಬಗ್ಗೆ ಹೇಳಲ್ಲ
ಮಲ್ಯ ವಿಲಾಸಿ ಜೀವನದ ಬಗ್ಗೆ ಅನೇಕ ವಿಚಾರಗಳನ್ನು ಹೇಳದಿರುವುದೇ ಒಳಿತು.

ಕಂಪನಿ ಅಧಿಕಾರಿ ರಾಜಕೀಯ ಮುಖಂಡ
ಮಲ್ಯ ಕಂಪನಿಯ ವಿವಿಧ ಅಧಿಕಾರಿಗಳು ರಾಜಕೀಯ ಮುಖಂಡರಾಗಿ ಬದಲಾಗಿದ್ದರು. ಇದು ಮಲ್ಯ ಅಧೋಗತಿಗೆ ಅಂದೇ ಮುನ್ಸೂಚನೆಯನ್ನು ನೀಡಿತ್ತು.

ಜನಪರ ಕಾಳಜಿಇಲ್ಲದೇ ಚೆಲ್ಲಿದ ಹಣ
ಮಲ್ಯ ಯಾಕೆ ಅಷ್ಟು ಪ್ರಚಾರವನ್ನು ಇಷ್ಟಪಡುತ್ತಿದ್ದರೋ ತಿಳಿಯದು. ಕೋಳಿಕೋಡ್ ನ ಕಾರ್ಯಕ್ರಮವೊಂದಕ್ಕೆ ಕೋಟ್ಯಂತರ ರು. ಹಣ ವ್ಯಯಿಸಿದ್ದರು.

ಯಾವಾಗಲೂ ಲೇಟ್
ಮಲ್ಯ ಸಾಮಾನ್ಯವಾಗಿ ತಮ್ಮದೇ ಕಾರ್ಯಕ್ರಮಕ್ಕೆ ಒಂದು ಗಂಟೆ ತಡವಾಗಿ ಬರುತ್ತಿದ್ದರು. ಜನರು ಬಿಸಿಲಿನಿಂದ ಬಸವಳಿಯುತ್ತಿದ್ದರೂ ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ರಾಜ್ಯಸಭಾ ಸದಸ್ಯರಾದರು
ಅಂತಿಮವಾಗಿ ಮಲ್ಯ ರಾಜಕೀಯ ಬದುಕು ಆರಂಭವಾಗಿದ್ದು ರಾಜ್ಯಸಭಾ ಸದಸ್ಯರಾಗಿ. ಎಲ್ಲ ಪಕ್ಷಗಳ ಸಹಕಾರದಲ್ಲಿ ಮಲ್ಯ ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದರು.

ಕಾರ್ಟೂನ್ ನೋಡಿ
ಮಲ್ಯರ ಇಂದಿನ ಸ್ಥಿತಿಯನ್ನು ಈ ವ್ಯಂಗ್ಯ ಚಿತ್ರ ಎಷ್ಟು ವಿವರವಾಗಿ ಹೇಳುತ್ತಿದೆ.. ಒಂದು ಸಲ ನಿಧಾನವಾಗಿ ನೋಡಿ..
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications