ಹರ್ಯಾಣದಲ್ಲಿ ರೈತರ ಹೋರಾಟ; ರಾತ್ರಿಯಿಡೀ ಹೆದ್ದಾರಿಯಲ್ಲಿ ಟ್ರಾಫಿಕ್!
ನವದೆಹಲಿ, ಸೆಪ್ಟೆಂಬರ್ 24: ಹರ್ಯಾಣದಲ್ಲಿ ರೈತರು ಶುಕ್ರವಾರ ಪ್ರಾರಂಭಿಸಿದ ಪ್ರತಿಭಟನೆ ಕಾವು ರಾತ್ರಿ ವೇಳೆಗೆ ತೀವ್ರತೆ ಪಡೆದುಕೊಂಡಿತು. ರಾಷ್ಟ್ರೀಯ ಹೆದ್ದಾರಿವರೆಗೂ ಆವರಿಸಿದ ರೈತರ ಹೋರಾಟದ ಬಿಸಿ, ಟ್ರಾಫಿಕ್ ಜಾಮ್ ಸೃಷ್ಟಿಗೆ ಕಾರಣವಾಗಿ ಬಿಟ್ಟಿದೆ. ರಾತ್ರಿಯಿಡೀ ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲುಕಿ ನರಳುವಂತೆ ಆಯಿತು.
ಕುರುಕ್ಷೇತ್ರದಲ್ಲಿ ಶುಕ್ರವಾರ ಬೆಳಿಗ್ಗೆ ಪ್ರಾರಂಭವಾದ ರೈತರ ಪ್ರತಿಭಟನೆಯು ಸಂಜೆ ಹೊತ್ತಿಗೆ ತೀವ್ರವಾಯಿತು. ನೂರಾರು ಪ್ರತಿಭಟನಾಕಾರರು ರಸ್ತೆ ತಡೆದರೆ ವಾಹನಗಳು - ಟ್ರಕ್ಗಳು ಮತ್ತು ಇತರ ದೀರ್ಘ-ಮಾರ್ಗದ ವಾಹನಗಳು ಶಹಬಾದ್ ಬಳಿ ಸಿಲುಕಿಕೊಂಡವು. ಪೊಲೀಸರು ರೈತ ಸಂಘದ ಮುಖಂಡರೊಂದಿಗೆ ಸಂಧಾನ ನಡೆಸುತ್ತಿರುವುದು ಕಂಡು ಬಂದರೂ, ಮಧ್ಯರಾತ್ರಿಯಾದರೂ ರೈತರು ಈ ಸ್ಥಳದಿಂದ ಕದಲಲಿಲ್ಲ.
ಈ ಹೆದ್ದಾರಿಯು ದೆಹಲಿಯನ್ನು ಚಂಡೀಗಢದೊಂದಿಗೆ ಸಂಪರ್ಕಿಸುತ್ತದೆ. ಹರಿಯಾಣದ ಒಂದು ತುದಿಯಿಂದ ಇನ್ನೊಂದು ತುದಿಗೆ ಹಾದು ಹೋಗುತ್ತದೆ. ಶಿಮ್ಲಾ ಮತ್ತು ಹಿಮಾಚಲ ಪ್ರದೇಶದ ಇತರ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತದೆ. ತೇವಾಂಶ ಮತ್ತು ಮಳೆಯಿಂದ ಧಾನ್ಯ ಹಾಳಾಗುವ ಭೀತಿಯಿಂದ ಭತ್ತವನ್ನು ಬೇಗ ಖರೀದಿಸುವಂತೆ ಒತ್ತಾಯಿಸಿ, ರೈತರು ಶಹಾಬಾದ್ ಪಟ್ಟಣದ ಬಳಿ ಹೆದ್ದಾರಿ ತಡೆ ನಡೆಸಿದರು. ಅವರ ಬಳಿ ಸಂಗ್ರಹಣೆ ಸ್ಥಳವಿಲ್ಲ, ಆದ್ದರಿಂದ ರಾಜ್ಯ ಸರ್ಕಾರವು ಸಂಗ್ರಹಣೆಯ ದಿನಾಂಕವನ್ನು ಮುಂಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು.

ರೈತರಿಗೆ ಯಾವುದೇ ಭರವಸೆ ನೀಡಿಲ್ಲ ಸರ್ಕಾರ:
ಭಾರತೀಯ ಕಿಸಾನ್ ಯೂನಿಯನ್-ಚಾರುಣಿ ನೇತೃತ್ವದ ಪ್ರತಿಭಟನಾಕಾರರು, ಅಂಬಾಲ, ಕೈತಾಲ್ ಮತ್ತು ಇತರ ಜಿಲ್ಲೆಗಳ ಧಾನ್ಯ ಮಾರುಕಟ್ಟೆಗಳಲ್ಲಿ "ತೇವಾಂಶ" ಹೆಚ್ಚಾಗಿರುವುದರಿಂದ ನೂರಾರು ಕ್ವಿಂಟಾಲ್ಗಳು ನಾಶವಾಗಿವೆ ಎಂದು ಹೇಳಿದರು. ಇದು ಖರೀದಿಯ ಮೊದಲು ಭತ್ತದ ಗುಣಮಟ್ಟದ ಅಳತೆಯಾಗಿದೆ.
किसान साथियों ओर देशवासियों किसान यूनियन चढूनी ने बेरिगेट तोड़ दिए जब तक ख़रीद नही आती तब तक NH1 जाम pic.twitter.com/eeFf00kBa0
— Gurnam Singh Charuni (@GurnamsinghBku) September 23, 2022
ಅಧಿಕೃತ ಸಂಗ್ರಹವು ಅಕ್ಟೋಬರ್ 1 ರಿಂದ ಪ್ರಾರಂಭವಾಗುತ್ತದೆ. ಆದರೆ ಬೆಳೆಯನ್ನು ಮೊದಲೇ ಬಿತ್ತಿದ ಅಥವಾ ಆರಂಭಿಕ-ಮಾಗಿದ ತಳಿಗಳನ್ನು ಬಳಸಿದ ರೈತರಿದ್ದಾರೆ. ಅದಾಗ್ಯೂ, ರೈತರಿಗೆ ಸರ್ಕಾರವು ಇನ್ನೂ ಯಾವುದೇ ರೀತಿಯ ಭರವಸೆ ನೀಡಿಲ್ಲ.
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ












Click it and Unblock the Notifications