ರಾಧೇ ಮಾಗಾಗಿ ಸ್ವಾಮೀಜಿ- ಸಾಧ್ವಿ ಬಿಗ್ ಫೈಟ್
ನವದೆಹಲಿ, ಸೆ. 14 : ಸ್ವಯಂಘೋಷಿತ ದೇವ ಮಹಿಳೆ ರಾಧೇ ಮಾ ವಿವಾದಗಳಿಗೆ ಸಂಬಂಧಿಸಿದಂತೆ ಐಬಿಎನ್ ಲೈವ್ ತನ್ನ ಆಜ್ ಕಾ ಮುದ್ದಾ ಕಾರ್ಯಕ್ರಮದಲ್ಲಿ ನೇರ ಚರ್ಚೆ ಹಮ್ಮಿಕೊಂಡಿತ್ತು. ಆದರೆ, ರಾಧೇ ಮಾ ಬಗ್ಗೆ ಚರ್ಚಿಸಲು ಬಂದಿದ್ದ ಅತಿಥಿಗಳು ಪರಸ್ಪರ ಕೈ ಕೈ ಮಿಲಾಯಿಸಿದ್ದು ಕಂಡು ಪ್ರೇಕ್ಷಕರು ದಂಗಾಗಿದ್ದಾರೆ.
ರಾಧೇ ಮಾ ವಿವಾದಕ್ಕೆ ಸಂಬಂಧಿಸಿದಂತೆ ಐಬಿಎನ್ 7 ನಲ್ಲಿ ಭಾನುವಾರ ರಾತ್ರಿ ನಡೆದ 'ಆಜ್ ಕಾ ಮುದ್ದಾ' ಲೈವ್ ಚರ್ಚೆಯಲ್ಲಿ ಭಾಗವಹಿಸಿದ್ದ ಅತಿಥಿಗಳು ಪರಸ್ಪರ ಕಪಾಳಮೋಕ್ಷ ನಡೆಸಿ, ಹೊಡೆದಾಡಿಕೊಂಡ ಘಟನೆ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.[ರಾಧೇ ಮಾ 'ಸೆಕ್ಸ್ ರಾಕೆಟ್' ನಡೆಸುತ್ತಾರೆ: ರೂಪದರ್ಶಿ]
ಹಿಂದೂ ಮಹಾಸಭಾದ ಸ್ವಾಮೀಜಿಯೊಬ್ಬರು ಮತ್ತೋರ್ವ ಸಾಧ್ವಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಓಂಜೀ ಮಹಾರಾಜ್ ಹಾಗೂ ಸಾಧ್ವಿ ದೀಪಾ ಕಿತ್ತಾಟ ಜನತೆ ಮನರಂಜನೆ ಜೊತೆಗೆ ಅಸಹ್ಯ ಹುಟ್ಟಿಸಿದೆ.
ಸ್ವಯಂಘೋಷಿತ ದೇವ ಮಹಿಳೆ ರಾಧೇ ಮಾ ವಿವಾದಗಳಿಗೆ ಸಂಬಂಧಿಸಿದಂತೆ ಐಬಿಎನ್ ಲೈವ್ ತನ್ನ ಆಜ್ ಕಾ ಮುದ್ದಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ವಾಮೀಜಿ, ಜೋತಿಷಿ ಸಹಿತ ಧಾರ್ಮಿಕ ವ್ಯಕ್ತಿಗಳನ್ನು ಚರ್ಚೆಗೆ ಆಹ್ವಾನಿಸಿತ್ತು. ಈ ಸಂದರ್ಭದಲ್ಲಿ ಓಂ ಜೀ ಮಹಾರಾಜ್ ಹಾಗೂ ಸಾಧ್ವಿ ರಾಖಿ ಜೊತೆ ಮಾತಿನ ಜಟಾಪಟಿ ಮುಂದೆ ದೀಪಾ ಶರ್ಮ ಜೊತೆ ಕೈ ಕೈ ಮಿಲಾಯಿಸುವ ದೃಶ್ಯಗಳು ನಡೆದು ಬಿಟ್ಟಿತು.

ಓಂಜೀ ಮೇಲೆ ಕೈ ಮಾಡಿದ ದೀಪಾ ಶರ್ಮಾ
ಮೊದಲಿಗೆ ಸುಮ್ಮನ್ನಿದ್ದ ದೀಪಾ ಶರ್ಮ ಅವರು ತಮ್ಮ ಬಗ್ಗೆ ಓಂಜೀ ಹೇಳಿದ್ದಕ್ಕೆ ಕೋಪಗೊಂಡು ಓಂಜೀ ಮೇಲೆ ಕೈ ಮಾಡಲು ಯತ್ನಿಸಿದ್ದಾರೆ. ಅನಿರೀಕ್ಷಿತ ಹೊಡೆತದಿಂದ ವಿಚಲಿತರಾದ ಓಂ ಜೀ ಅವರು ದೀಪಾ ಶರ್ಮಾರ ಕೆನ್ನೆಗೆ ಬಾರಿಸಿದ್ದಾರೆ. ಇಬ್ಬರ ನಡುವೆ ಫೈಟ್ ಮುಂದುವರೆಯುತ್ತಿದ್ದಂತೆ ಚಾನೆಲ್ ಕಾರ್ಯಕ್ರಮದ ಪ್ರಸಾರವನ್ನು ಮೊಟಕುಗೊಳಿಸಿ ಇಬ್ಬರಿಗೂ ಛೀಮಾರಿ ಹಾಕಿದೆ.

ರಾಧೇ ಮಾ ದೆಸೆಯಿಂದ ಕಪಾಳಮೋಕ್ಷ
ಮೈಮೇಲೆ ಪ್ರಜ್ಞೆ ಇಟ್ಟುಕೊಂಡು ಮಾತಾಡಿ ಎಂದು ಓಂಜೀ ಅವರು ಗುಡುಗಿದ್ದಾರೆ, ನಂತರ ದೀಪಾ ಕೆನ್ನೆಗೆ ಬಾರಿಸಿದ್ದಾರೆ. ಇಬ್ಬರು ಪರಸ್ಪರ ಕೈ ಕೈ ಹಿಡಿದು ಕೊಂಡು ಜಟ್ಟಿಗಳಂತೆ ಯುದ್ಧಕ್ಕೆ ನಿಂತಿದ್ದಾರೆ. 'ತು ಕ್ಯಾ ಮರೆಗಿ?' ಎಂದು ಆಕೆಗೆ ಆತ ಕೇಳಿದ್ದಾನೆ.

ಇದು ನಾಚಿಕೆಗೇಡಿನ ಪ್ರಸಂಗ
ಘಟನೆಯಿಂದ ಚರ್ಚೆ ಅರ್ಧಕ್ಕೆ ನಿಂತಿದೆ. ಚಾನೆಲ್ ಗೆ ಜನ ಉಗಿದರೆ, ಬಂದ ಅತಿಥಿಗಳಿಗೆ ಐಬಿಎನ್ 7 ಚಾನೆಲ್ ನವರು ಉಗಿದಿದ್ದಾರಂತೆ. ಒಟ್ಟಾರೆ ಇದು ನಾಚಿಕೆಗೇಡಿನ ಪ್ರಸಂಗ ಎಂದು ಜನಾಭಿಪ್ರಾಯ.
ಸ್ವಾಮೀಜಿ- ಸಾಧ್ವಿ ಬಿಗ್ ಫೈಟ್ ವಿಡಿಯೋ
ರಾಧೇ ಮಾಗಾಗಿ ಸ್ವಾಮೀಜಿ- ಸಾಧ್ವಿ ಬಿಗ್ ಫೈಟ್ ವಿಡಿಯೋ
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications