ರಾಧೇ ಮಾಗಾಗಿ ಸ್ವಾಮೀಜಿ- ಸಾಧ್ವಿ ಬಿಗ್ ಫೈಟ್
ನವದೆಹಲಿ, ಸೆ. 14 : ಸ್ವಯಂಘೋಷಿತ ದೇವ ಮಹಿಳೆ ರಾಧೇ ಮಾ ವಿವಾದಗಳಿಗೆ ಸಂಬಂಧಿಸಿದಂತೆ ಐಬಿಎನ್ ಲೈವ್ ತನ್ನ ಆಜ್ ಕಾ ಮುದ್ದಾ ಕಾರ್ಯಕ್ರಮದಲ್ಲಿ ನೇರ ಚರ್ಚೆ ಹಮ್ಮಿಕೊಂಡಿತ್ತು. ಆದರೆ, ರಾಧೇ ಮಾ ಬಗ್ಗೆ ಚರ್ಚಿಸಲು ಬಂದಿದ್ದ ಅತಿಥಿಗಳು ಪರಸ್ಪರ ಕೈ ಕೈ ಮಿಲಾಯಿಸಿದ್ದು ಕಂಡು ಪ್ರೇಕ್ಷಕರು ದಂಗಾಗಿದ್ದಾರೆ.
ರಾಧೇ ಮಾ ವಿವಾದಕ್ಕೆ ಸಂಬಂಧಿಸಿದಂತೆ ಐಬಿಎನ್ 7 ನಲ್ಲಿ ಭಾನುವಾರ ರಾತ್ರಿ ನಡೆದ 'ಆಜ್ ಕಾ ಮುದ್ದಾ' ಲೈವ್ ಚರ್ಚೆಯಲ್ಲಿ ಭಾಗವಹಿಸಿದ್ದ ಅತಿಥಿಗಳು ಪರಸ್ಪರ ಕಪಾಳಮೋಕ್ಷ ನಡೆಸಿ, ಹೊಡೆದಾಡಿಕೊಂಡ ಘಟನೆ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.[ರಾಧೇ ಮಾ 'ಸೆಕ್ಸ್ ರಾಕೆಟ್' ನಡೆಸುತ್ತಾರೆ: ರೂಪದರ್ಶಿ]
ಹಿಂದೂ ಮಹಾಸಭಾದ ಸ್ವಾಮೀಜಿಯೊಬ್ಬರು ಮತ್ತೋರ್ವ ಸಾಧ್ವಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಓಂಜೀ ಮಹಾರಾಜ್ ಹಾಗೂ ಸಾಧ್ವಿ ದೀಪಾ ಕಿತ್ತಾಟ ಜನತೆ ಮನರಂಜನೆ ಜೊತೆಗೆ ಅಸಹ್ಯ ಹುಟ್ಟಿಸಿದೆ.
ಸ್ವಯಂಘೋಷಿತ ದೇವ ಮಹಿಳೆ ರಾಧೇ ಮಾ ವಿವಾದಗಳಿಗೆ ಸಂಬಂಧಿಸಿದಂತೆ ಐಬಿಎನ್ ಲೈವ್ ತನ್ನ ಆಜ್ ಕಾ ಮುದ್ದಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ವಾಮೀಜಿ, ಜೋತಿಷಿ ಸಹಿತ ಧಾರ್ಮಿಕ ವ್ಯಕ್ತಿಗಳನ್ನು ಚರ್ಚೆಗೆ ಆಹ್ವಾನಿಸಿತ್ತು. ಈ ಸಂದರ್ಭದಲ್ಲಿ ಓಂ ಜೀ ಮಹಾರಾಜ್ ಹಾಗೂ ಸಾಧ್ವಿ ರಾಖಿ ಜೊತೆ ಮಾತಿನ ಜಟಾಪಟಿ ಮುಂದೆ ದೀಪಾ ಶರ್ಮ ಜೊತೆ ಕೈ ಕೈ ಮಿಲಾಯಿಸುವ ದೃಶ್ಯಗಳು ನಡೆದು ಬಿಟ್ಟಿತು.

ಓಂಜೀ ಮೇಲೆ ಕೈ ಮಾಡಿದ ದೀಪಾ ಶರ್ಮಾ
ಮೊದಲಿಗೆ ಸುಮ್ಮನ್ನಿದ್ದ ದೀಪಾ ಶರ್ಮ ಅವರು ತಮ್ಮ ಬಗ್ಗೆ ಓಂಜೀ ಹೇಳಿದ್ದಕ್ಕೆ ಕೋಪಗೊಂಡು ಓಂಜೀ ಮೇಲೆ ಕೈ ಮಾಡಲು ಯತ್ನಿಸಿದ್ದಾರೆ. ಅನಿರೀಕ್ಷಿತ ಹೊಡೆತದಿಂದ ವಿಚಲಿತರಾದ ಓಂ ಜೀ ಅವರು ದೀಪಾ ಶರ್ಮಾರ ಕೆನ್ನೆಗೆ ಬಾರಿಸಿದ್ದಾರೆ. ಇಬ್ಬರ ನಡುವೆ ಫೈಟ್ ಮುಂದುವರೆಯುತ್ತಿದ್ದಂತೆ ಚಾನೆಲ್ ಕಾರ್ಯಕ್ರಮದ ಪ್ರಸಾರವನ್ನು ಮೊಟಕುಗೊಳಿಸಿ ಇಬ್ಬರಿಗೂ ಛೀಮಾರಿ ಹಾಕಿದೆ.

ರಾಧೇ ಮಾ ದೆಸೆಯಿಂದ ಕಪಾಳಮೋಕ್ಷ
ಮೈಮೇಲೆ ಪ್ರಜ್ಞೆ ಇಟ್ಟುಕೊಂಡು ಮಾತಾಡಿ ಎಂದು ಓಂಜೀ ಅವರು ಗುಡುಗಿದ್ದಾರೆ, ನಂತರ ದೀಪಾ ಕೆನ್ನೆಗೆ ಬಾರಿಸಿದ್ದಾರೆ. ಇಬ್ಬರು ಪರಸ್ಪರ ಕೈ ಕೈ ಹಿಡಿದು ಕೊಂಡು ಜಟ್ಟಿಗಳಂತೆ ಯುದ್ಧಕ್ಕೆ ನಿಂತಿದ್ದಾರೆ. 'ತು ಕ್ಯಾ ಮರೆಗಿ?' ಎಂದು ಆಕೆಗೆ ಆತ ಕೇಳಿದ್ದಾನೆ.

ಇದು ನಾಚಿಕೆಗೇಡಿನ ಪ್ರಸಂಗ
ಘಟನೆಯಿಂದ ಚರ್ಚೆ ಅರ್ಧಕ್ಕೆ ನಿಂತಿದೆ. ಚಾನೆಲ್ ಗೆ ಜನ ಉಗಿದರೆ, ಬಂದ ಅತಿಥಿಗಳಿಗೆ ಐಬಿಎನ್ 7 ಚಾನೆಲ್ ನವರು ಉಗಿದಿದ್ದಾರಂತೆ. ಒಟ್ಟಾರೆ ಇದು ನಾಚಿಕೆಗೇಡಿನ ಪ್ರಸಂಗ ಎಂದು ಜನಾಭಿಪ್ರಾಯ.
ಸ್ವಾಮೀಜಿ- ಸಾಧ್ವಿ ಬಿಗ್ ಫೈಟ್ ವಿಡಿಯೋ
ರಾಧೇ ಮಾಗಾಗಿ ಸ್ವಾಮೀಜಿ- ಸಾಧ್ವಿ ಬಿಗ್ ಫೈಟ್ ವಿಡಿಯೋ
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications